ಆ್ಯಪ್ನಗರ

ಪರಿಸರ ಸಂತುಲನ ರಕ್ಷಣೆ ಎಲ್ಲರ ಹೊಣೆ

ಕುಮಟಾ : ಇಂದು ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ. ಹೀಗಾಗಿ ಪರಿಸರ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವೂ ಹೌದು. ಎಲ್‌.ಆರ್‌. ಹೆಗಡೆಯವರ ಪರಿಸರ ರಕ್ಷಣೆಗೆ ಪೂರಕವಾದ -ಪ್ರೇರಕವಾದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

Vijaya Karnataka 17 Jan 2020, 5:00 am
ಕುಮಟಾ : ಇಂದು ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ. ಹೀಗಾಗಿ ಪರಿಸರ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವೂ ಹೌದು. ಎಲ್‌.ಆರ್‌. ಹೆಗಡೆಯವರ ಪರಿಸರ ರಕ್ಷಣೆಗೆ ಪೂರಕವಾದ -ಪ್ರೇರಕವಾದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
Vijaya Karnataka Web environmental protection is the responsibility of everyone
ಪರಿಸರ ಸಂತುಲನ ರಕ್ಷಣೆ ಎಲ್ಲರ ಹೊಣೆ


ತಾಲೂಕಿನ ಕಲ್ಲಬ್ಬೆಯಲ್ಲಿನಿವೃತ್ತ ವಲಯ ಅರಣ್ಯಾಧಿಕಾರಿ ಎಲ್‌.ಆರ್‌ ಹೆಗಡೆ ಶಂಭುಮನೆಯವರ ಕರಕೌಶಲ್ಯ ಮತ್ತು ಕಲ್ಪನೆಯಲ್ಲಿಬೆಳೆದ ಕುಬ್ಜವೃಕ್ಷ ನಿಸರ್ಗಧಾಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಮೇಲಿನ ಮಾನವನ ದೌರ್ಜನ್ಯದಿಂದ ಪ್ರಕೃತಿಯಲ್ಲಿಏರುಪೇರು ಉಂಟಾಗಿ ಅನಾಹುತಗಳು ಸಂಭವಿಸುತ್ತವೆ. ಆದ ಕಾರಣ ಪರಿಸರ ಸಮತೋಲನ ಕಾಯ್ದುಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಪರಿಸರತಜ್ಞ ಶಿವಾನಂದ ಕಳವೆ ಮಾತನಾಡಿ, ಆಧುನೀಕರಣದ ಇಂದಿನ ಸಂದರ್ಭದಲ್ಲಿಕುಬ್ಜವೃಕ್ಷ ಅಭಿವೃದ್ಧಿ ಹೇಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಉಪಯುಕ್ತ ಮತ್ತು ಭವಿಷ್ಯದಲ್ಲಿಇದರ ಮಹತ್ವದ ಕುರಿತು ತಮ್ಮ ಅನುಭವ ಹಂಚಿಕೊಂಡರು. ಜಿ.ಪಂ. ಸದಸ್ಯ ಗಜಾನನ ಪೈ ಮಾತನಾಡಿ, ನಿವೃತ್ತಿ ನಂತರದಲ್ಲೂಎಲ್‌.ಆರ್‌.ಹೆಗಡೆಯವರ ಕಾರ್ಯ ಉಳಿದವರಿಗೆ ಅನುಕರಣೀಯ. ಅವರ ಪರಿಸರಪೂರಕ ಕಾರ್ಯಕ್ಕೆ ತಮ್ಮ ಯಾವತ್ತೂ ಬೆಂಬಲವಿದ ಎಂದರು.

ಊರಿನ ಹಿರಿಯರಾದ ಐ.ಪಿ.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಡಾ.ಜಿ.ಜಿ.ಹೆಗಡೆ, ಭುವನ ಭಾಗ್ವತ್‌, ಡಾ. ಶ್ರೀಧರ ಭಟ್ಟ, ಎಸ್‌ ವಿ ಭಟ್ಟ, ಕೃಷಿ ತಜ್ಞ ಎನ್‌ ಡಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ತೇಜಾ ಭಟ್ಟ ಪ್ರಾರ್ಥಿಸಿದರು, ಸಿ ಜಿ ಹೆಗಡೆ ಸ್ವಾಗತಿಸಿ ಪರಿಚಯಿಸಿದರು. ಎಲ್‌ ಆರ್‌ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು, ವಿ ಎನ್‌ ಭಟ್ಟ ವಂದಿಸಿದರು. ರಾಘವೆಂದ್ರ ಹೆಗಡೆ ನಿರೂಪಿಸಿದರು. ಟಿ ವಿ ಹೆಗಡೆ, ಗಜಾನನ ಭಟ್ಟ, ಸುರೇಶ ಭಟ್ಟ, ಎಸ್‌.ಪಿ.ಭಟ್ಟ ಎಡೇಕೇರಿ ಮೊದಲಾದ ಊರ ನಾಗರಿಕರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ