ಆ್ಯಪ್ನಗರ

ಗೋಕರ್ಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರಾರ‍ಯಗಾರ

ಗೋಕರ್ಣ : ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಕುಮಟಾ ಹಾಗೂ ಶ್ರೀ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಭದ್ರಕಾಳಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸುಧಾರಣೆಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

Vijaya Karnataka 16 Feb 2019, 5:00 am
ಗೋಕರ್ಣ : ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಕುಮಟಾ ಹಾಗೂ ಶ್ರೀ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಭದ್ರಕಾಳಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸುಧಾರಣೆಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web essexceli examination at gokarna
ಗೋಕರ್ಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರಾರ‍ಯಗಾರ


ಡಯಟ್‌ ಹಿರಿಯ ಉಪನ್ಯಾಸಕಿ ಶ್ಯಾಮಲಾ ನಾಯಕ ಮಾತನಾಡಿ, ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಶಿಕ್ಷ ಕರು ಸಾಕಷ್ಟು ರೀತಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಶ್ರಮಿಸುತ್ತಿದ್ದಾರೆ. ಪರೀಕ್ಷೆಗೆ ಕೆಲವೇ ದಿನಗಳು ಇರುವುದರಿಂದ ಮಕ್ಕಳು ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಇವತ್ತಿನ ದಿನ ನಮ್ಮ ಡಯಟ್‌ ವತಿಯಿಂದ ಮಕ್ಕಳಿಗೆ ಪರೀಕ್ಷೆಗೆ ಪೂರಕವಾಗುವಂತೆ ಸಂಪನ್ಮೂಲ ಶಿಕ್ಷ ಕರಿಂದ ಕ್ಲಿಷ್ಟ ವಿಷಯಗಳಾದ ಗಣಿತ, ವಿಜ್ಞಾನ, ಇಂಗ್ಲೀಷ ಕಾರ್ಯಾಗಾರವನ್ನು ಮಾಡುತ್ತಿದ್ದು, ಅದರ ಸದುಪಯೋಗ ಪಡೆದುಕೊಂಡು ಯಶಸ್ಸು ಸಾಧಿಸಿದರೆ ತಂದೆ ತಾಯಿ ಹಾಗೂ ಶಿಕ್ಷ ಕರ ಕೀರ್ತಿಗೆ ಪಾತ್ರರಾಗುತ್ತೀರಿ ಎಂದು ಹಾರೈಸಿದರು.

ಡಯಟ್‌ ಉಪನ್ಯಾಸಕ ಶ್ರೀನಿವಾಸ ನಾಯಕ ಮಾತನಾಡಿ, ವಿದ್ಯಾರ್ಥಿಗಳು ಟಿವಿ, ಮೊಬೈಲ್‌, ಧಾರಾವಾಹಿಗಳಿಗೆ ಮಾರು ಹೋಗದೇ ಇಂದಿನಿಂದಲೇ ಅಧ್ಯಯನಕ್ಕೆ ಒತ್ತು ಕೊಟ್ಟರೆ ಪ್ರಯತ್ನಕ್ಕೆ ಪ್ರತಿಫಲ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.

ಶಿಕ್ಷ ಣ ಸಂಯೋಜಕಿ ಜಯಶ್ರೀ ಹಾಜರಿದ್ದರು. ಭದ್ರಕಾಳಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಸಿ.ಜಿ.ನಾಯಕದೊರೆ ಸ್ವಾಗತಿಸಿದರು. ಶಿಕ್ಷ ಕ ಡಿ.ಎಸ್‌.ಹೆಗಡೆ ನಿರೂಪಿಸಿದರು. ಹಿರಿಯ ಶಿಕ್ಷ ಕರಾದ ಆರ್‌.ಜಿ.ನಾವಡ, ಶಿಕ್ಷ ಕರು ಸಹಕರಿಸಿದರು.

ಏಳು ಪ್ರೌಢಶಾಲೆಯ 115 ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಸಂಪನ್ಮೂಲ ಶಿಕ್ಷ ಕರಾಗಿ ಮುಖ್ಯಾಧ್ಯಾಪಕ ಗಂಗಾಧರ ಭಟ್ಟ, ಡಿ.ಜಿ.ಶಾಸ್ತ್ರಿ ಮತ್ತು ಶಿಕ್ಷ ಕರಾದ ಗಿರೀಶ ಹೆಬ್ಬಾರ್‌, ವಿನೋದ ನಾಯಕ, ಮಾವಿನಕಟ್ಟಾ, ಶ್ರೀನಿವಾಸ ನಾಯಕ, ಪ್ರಫುಲ್‌ ಚಂದ್ರ ನಾಯಕ ಹಾಗೂ ಮಾದೇವಿ ಗೌಡ ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ