ಆ್ಯಪ್ನಗರ

ಒಕ್ಕಲೆಬ್ಬಿಸಿದ ವರದಿ: ಆಂತರಿಕ ಸಮೀಕ್ಷೆ

ಶಿರಸಿ : ಸರಕಾರಕ್ಕೆ ಅತಿಕ್ರಮಣದಾರರ ಒಕ್ಕಲೆಬ್ಬಿಸಿದ ಮಾಹಿತಿಯ ವರದಿಯನ್ನು ಕೆನರಾ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಕಚೇರಿಯಿಂದ ಕಳೆದ 2010ರಿಂದ ಒಂದೇ ಅಂಕಿಸಂಖ್ಯೆಯ ವರದಿ ನೀಡಲಾಗುತ್ತಿದೆ. ಎಷ್ಟೋ ವರ್ಷಗಳ ಹಿಂದಿನ ಒಕ್ಕಲೆಬ್ಬಿಸಿರುವ ವರದಿಯ ಬಗ್ಗೆ ಆಯಾ ಸ್ಥಳದಲ್ಲಿ ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ನಿಯೋಗಕ್ಕೆ ಕೆನರಾ ವೃತ್ತ ಅರಣ್ಯ ಸರಕ್ಷ ಣಾಧಿಕಾರಿ ಅಶೋಕ ಬಸರಗೋಡ ತಿಳಿಸಿದರು.

Vijaya Karnataka 19 Mar 2019, 5:00 am
ಶಿರಸಿ : ಸರಕಾರಕ್ಕೆ ಅತಿಕ್ರಮಣದಾರರ ಒಕ್ಕಲೆಬ್ಬಿಸಿದ ಮಾಹಿತಿಯ ವರದಿಯನ್ನು ಕೆನರಾ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಕಚೇರಿಯಿಂದ ಕಳೆದ 2010ರಿಂದ ಒಂದೇ ಅಂಕಿಸಂಖ್ಯೆಯ ವರದಿ ನೀಡಲಾಗುತ್ತಿದೆ. ಎಷ್ಟೋ ವರ್ಷಗಳ ಹಿಂದಿನ ಒಕ್ಕಲೆಬ್ಬಿಸಿರುವ ವರದಿಯ ಬಗ್ಗೆ ಆಯಾ ಸ್ಥಳದಲ್ಲಿ ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ನಿಯೋಗಕ್ಕೆ ಕೆನರಾ ವೃತ್ತ ಅರಣ್ಯ ಸರಕ್ಷ ಣಾಧಿಕಾರಿ ಅಶೋಕ ಬಸರಗೋಡ ತಿಳಿಸಿದರು.
Vijaya Karnataka Web SRS-18SRS7

ಶಿರಸಿಯ ಕೆನರಾ ಮುಖ್ಯ ವೃತ್ತ ಅರಣ್ಯ ಸಂರಕ್ಷ ಣಾಧಿಕಾರಿ ಅಶೋಕ ಬಸರಕೋಡ ಅವರೊಂದಿಗೆ ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಪ್ರಮುಖರು ಚರ್ಚಿಸಿದರು.


ಸೋಮವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಅವರ ನೇತೃತ್ವದ ನಿಯೋಗಕ್ಕೆ ಈ ಮಾಹಿತಿ ನೀಡಿದರು. 5621 ಪ್ರಕರಣಕ್ಕೆ ಸಂಬಂಧಿಸಿ 3159.35

ಹೆಕ್ಟೇರ್‌ ಪ್ರದೇಶ ಒಕ್ಕಲೆಬ್ಬಿಸಲಾಗಿದೆ ಎಂಬ ಹಿಂದಿನ ಮಾಹಿತಿಯನ್ನೇ ಸರಕಾರಕ್ಕೆ ಕಳುಹಿಸಲಾಗಿದೆ. 64ಎ ಪ್ರಕಾರವೇ ಒಕ್ಕಲೆಬ್ಬಿಸಿರುವ ಮಾಹಿತಿಯಿದೆ. ಆದರೆ ಒಕ್ಕಲೆಬ್ಬಿಸಿದ ಜಾಗದಲ್ಲಿ ಅವರು ಮುಂದುವರೆದಿದ್ದಾರೆಯೋ ಅಥವಾ ಇಲ್ಲವೋ ಎಂಬುದರ ಸಮೀಕ್ಷೆ ನಡೆಸುತ್ತೇವೆ. 2010ರ ನಂತರ ಯಾವುದೇ ರೀತಿಯಿಂದಲೂ ಅತಿಕ್ರಮಣದಾರರು ಒಕ್ಕಲೆಬ್ಬಿಸಿಲ್ಲ. ಅಂತಹ ಪ್ರಕರಣಗಳಲ್ಲಿ ಜಾಗವನ್ನು ಅರಣ್ಯ ಇಲಾಖೆ ತಾಬಾ ಪಡೆದಿದ್ದೇವೆ ಅಷ್ಟೇ ಎಂದು ನಿಯೋಗಕ್ಕೆ ತಿಳಿಸಿದರು.

ಸರಕಾರಕ್ಕೆ ನೀಡಿದ ಒಕ್ಕಲೆಬ್ಬಿಸಿರುವ ವರದಿ ತಾಂತ್ರಿಕವಾಗಿ ದೋಷ ಹಾಗೂ ಅವೈಜ್ಞಾನಿಕವಾಗಿದೆ. ವರದಿಯಲ್ಲಿ ಒಕ್ಕಲೆಬ್ಬಿಸಿದ ಕುರಿತು ಮಾಹಿತಿಗಳಿಲ್ಲದೇ ಪ್ರಕರಣ ದಾಖಲಿಸಿದ ಮಾಹಿತಿ ಇದ್ದು ಕರ್ನಾಟಕ ಅರಣ್ಯ ಕಾಯಿದೆ

ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸದೇ ದಾಖಲಿಸಿದ ಪ್ರಕರಣಗಳ ಆಧಾರದ ಮೇಲೆ ಒಕ್ಕಲೆಬ್ಬಿಸಲಾಗಿದೆ. ಈ ಮೂಲಕ ಸತ್ಯಕ್ಕೆ ದೂರವಾದ ವರದಿ ಸರಕಾರಕ್ಕೆ ನೀಡಲಾಗಿದೆ ಎಂದು ಎ.ರವೀಂದ್ರ ನಾಯ್ಕ ದೂರಿದರು. ಯಾದಿಯಲ್ಲಿ ಉಲ್ಲೇಖಿಸಿದ ಅತಿಕ್ರಮಣದಾರರು ವಾಸ್ತವಿಕವಾಗಿ ಸಾಗುವಳಿಯಲ್ಲಿ ಇದ್ದು ಒಕ್ಕಲೆಬ್ಬಿಸಿದರೆಂಬ ಸಂಗತಿಯು ಸಹಿತ ಅತಿಕ್ರಮಣದಾರರ ಜ್ಞಾನಕ್ಕೆ ಇಲ್ಲದೇ ಇರುವುದು ವಿಷಾದಕರವಾಗಿದೆ ಎಂದು ಅಸಮಾಧಾನ ತೋಡಿಕೊಂಡರು. ಕಾನೂನು ಬಾಹಿರವಾಗಿರುವ ಒಕ್ಕಲೆಬ್ಬಿಸಿರುವ ಸರಕಾರಕ್ಕೆ ನೀಡಿರುವ ವರದಿ ತಕ್ಷ ಣಕ್ಕೆ ಹಿಂಪಡೆಯಬೇಕು. ವಾಸ್ತವಿಕ ಒಕ್ಕಲೆಬ್ಬಿಸದಾರೆಂಬ ವರದಿಯಲ್ಲಿನ ಸತ್ಯಾಸತ್ಯತೆ ಪರಿಶೀಲನೆಗೆ ಇಲಾಖೆಯ ಆಂತರಿಕ ಸಮೀಕ್ಷೆ ಒಳಪಡಿಸಿದ ನಂತರವೇ ಮುಂದಿನ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಯನ್ನು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ