ಚಂದ್ರಶೇಖರಯ್ಯ ಹಿರೇಮಠ ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯದ ಸನಿಹದಲ್ಲಿ ಬಂಕಾಪುರ-ಮುಂಡಗೋಡ ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣ ವಾಗಿದ್ದು ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಳೆಗಾಲ ಆರಂಭವಾದರೆ ಸಾಕು ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೊಂದರೆ ಆರಂಭವಾಗುತ್ತವೆ. ಹಲವಾರು ದಶಕಗಳ ಹಿಂದೆ ರಸ್ತೆಯ ಮೇಲೆಯೆ ನೀರು ಹರಿದು ಹೋಗುವಂತೆ ವ್ಯವಸ್ಥೆಯನ್ನು ಸನವಳ್ಳಿ ಅರಣ್ಯ ತಪಾಸಣಾ ಕೇಂದ್ರದ ಸಮೀಪ ಮಾಡಲಾಗಿದೆ. ಮಳೆಗಾಲದಲ್ಲಿ ಅರಣ್ಯ ಪ್ರದೇಶದಿಂದ ಹರಿದು ಬರುವ ನೀರು ರಸ್ತೆಯೆ ಮೇಲೆಯೇ ಹರಿದು ಹೋಗುತ್ತದೆ.
ಕೃಷಿಹೊಂಡ: ಈ ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡ ಮೇಲ್ನೋಟಕ್ಕೆ ಕೃಷಿಹೊಂಡದಂತೆ ಗೋಚರಿಸುತ್ತಿವೆ. ಪ್ರತಿನಿತ್ಯ ಈ ಮಾರ್ಗದಲ್ಲಿ ಸಂಚರಿಸುವವರು ರಸ್ತೆಯ ಅಂಚಿನಿಂದ ಜಾಗರೂಕವಾಗಿ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಾರೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಹೊಸದಾಗಿ ಚಾಲಕರು ವಾಹನವನ್ನು ಚಲಾಯಿಸಿಕೊಂಡು ಬಂದರೆ ವಾಹನವನ್ನು ನಿಲ್ಲಿಸಿ ಇದೆನಪ್ಪ ಗದ್ದೆಯಲ್ಲಿ ನಿರ್ಮಿಸಬೇಕಿದ್ದ ಕೃಷಿ ಹೊಂಡ ಈ ರಸ್ತೆಯಲ್ಲಿ ನಿರ್ಮಾಣವಾಗಿದೆ ಎಂದು ಗೋಣಗುತ್ತಾ ರಸ್ತೆಯ ಅಂಚಿನಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ವೇಗವಾಗಿ ಬಂದು ಈ ಹೊಂಡದಲ್ಲಿ ವಾಹನ ಇಳಿಸಿಕೊಂಡು ಹೋಗುತ್ತಾರೆ.
ನೂರಾರು ವಾಹನಗಳು: ಬಂಕಾಪುರ-ಮುಂಡಗೋಡ ಮಧ್ಯ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ ಹಾವೇರಿ, ದಾವಣಗೆರೆ ಬೆಂಗಳೂರನಿಂದ ಕಾರವಾರಕ್ಕೆ ಅಂಕೋಲ, ಯಲ್ಲಾಪುರಕ್ಕೆ ತೆರಳುವ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ಚಾಲಕರು ಜಾಗೃತವಾಗಿ ವಾಹನ ಚಲಾಯಿಸಿಕೊಂಡು ಹೋಗಬೇಕಾಗಿದೆ.
ಮುಂಡಗೋಡ -ಬಂಕಾಪುರ ಮಧ್ಯೆ ಹಲವಾರು ಭಾರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಯಿತು. ಆದರೆ ಇಲ್ಲಿ ಸೇತುವೆ ನಿರ್ಮಾಣ ಕಾರ್ಯ ಮಾತ್ರ ಇದುವರೆಗೂ ಮಾಡಿಲ್ಲ. ಈ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡಲು ಇನ್ನೂ ಎಷ್ಟು ದಶಕಗಳು ಬೇಕಾಗುತ್ತದೆ? ಎಂಬುದು ವಾಹನ ಸವಾರರ ಪ್ರಶ್ನೆಯಾಗಿದೆ. ಸದ್ಯ ಈ ರಸ್ಥೆಯಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸ ಅತಿ ಅವಶ್ಯವಾಗಿ ಮಾಡಬೇಕಿದೆ.
ಗಮನಹರಿಸುವವರೆ?: ಇನ್ನಾದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಗಮನಿಸುವವರೆ? ಅಪಾಯಕಾರಿಯಾಗಿರುವ ಈ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸುವವರೆ ಅಥವಾ ಜಾಣ ಕುರುಡತನ ಪ್ರದರ್ಶಿಸುವವರೆ? ಎಂಬುದನ್ನು ಕಾದು ನೋಡಬೇಕಿದೆ.
ಮಳೆಗಾಲ ಆರಂಭವಾದರೆ ಸಾಕು ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೊಂದರೆ ಆರಂಭವಾಗುತ್ತವೆ. ಹಲವಾರು ದಶಕಗಳ ಹಿಂದೆ ರಸ್ತೆಯ ಮೇಲೆಯೆ ನೀರು ಹರಿದು ಹೋಗುವಂತೆ ವ್ಯವಸ್ಥೆಯನ್ನು ಸನವಳ್ಳಿ ಅರಣ್ಯ ತಪಾಸಣಾ ಕೇಂದ್ರದ ಸಮೀಪ ಮಾಡಲಾಗಿದೆ. ಮಳೆಗಾಲದಲ್ಲಿ ಅರಣ್ಯ ಪ್ರದೇಶದಿಂದ ಹರಿದು ಬರುವ ನೀರು ರಸ್ತೆಯೆ ಮೇಲೆಯೇ ಹರಿದು ಹೋಗುತ್ತದೆ.
ಕೃಷಿಹೊಂಡ: ಈ ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡ ಮೇಲ್ನೋಟಕ್ಕೆ ಕೃಷಿಹೊಂಡದಂತೆ ಗೋಚರಿಸುತ್ತಿವೆ. ಪ್ರತಿನಿತ್ಯ ಈ ಮಾರ್ಗದಲ್ಲಿ ಸಂಚರಿಸುವವರು ರಸ್ತೆಯ ಅಂಚಿನಿಂದ ಜಾಗರೂಕವಾಗಿ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಾರೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಹೊಸದಾಗಿ ಚಾಲಕರು ವಾಹನವನ್ನು ಚಲಾಯಿಸಿಕೊಂಡು ಬಂದರೆ ವಾಹನವನ್ನು ನಿಲ್ಲಿಸಿ ಇದೆನಪ್ಪ ಗದ್ದೆಯಲ್ಲಿ ನಿರ್ಮಿಸಬೇಕಿದ್ದ ಕೃಷಿ ಹೊಂಡ ಈ ರಸ್ತೆಯಲ್ಲಿ ನಿರ್ಮಾಣವಾಗಿದೆ ಎಂದು ಗೋಣಗುತ್ತಾ ರಸ್ತೆಯ ಅಂಚಿನಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ವೇಗವಾಗಿ ಬಂದು ಈ ಹೊಂಡದಲ್ಲಿ ವಾಹನ ಇಳಿಸಿಕೊಂಡು ಹೋಗುತ್ತಾರೆ.
ನೂರಾರು ವಾಹನಗಳು: ಬಂಕಾಪುರ-ಮುಂಡಗೋಡ ಮಧ್ಯ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ ಹಾವೇರಿ, ದಾವಣಗೆರೆ ಬೆಂಗಳೂರನಿಂದ ಕಾರವಾರಕ್ಕೆ ಅಂಕೋಲ, ಯಲ್ಲಾಪುರಕ್ಕೆ ತೆರಳುವ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ಚಾಲಕರು ಜಾಗೃತವಾಗಿ ವಾಹನ ಚಲಾಯಿಸಿಕೊಂಡು ಹೋಗಬೇಕಾಗಿದೆ.
ಮುಂಡಗೋಡ -ಬಂಕಾಪುರ ಮಧ್ಯೆ ಹಲವಾರು ಭಾರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಯಿತು. ಆದರೆ ಇಲ್ಲಿ ಸೇತುವೆ ನಿರ್ಮಾಣ ಕಾರ್ಯ ಮಾತ್ರ ಇದುವರೆಗೂ ಮಾಡಿಲ್ಲ. ಈ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡಲು ಇನ್ನೂ ಎಷ್ಟು ದಶಕಗಳು ಬೇಕಾಗುತ್ತದೆ? ಎಂಬುದು ವಾಹನ ಸವಾರರ ಪ್ರಶ್ನೆಯಾಗಿದೆ. ಸದ್ಯ ಈ ರಸ್ಥೆಯಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸ ಅತಿ ಅವಶ್ಯವಾಗಿ ಮಾಡಬೇಕಿದೆ.
ಗಮನಹರಿಸುವವರೆ?: ಇನ್ನಾದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಗಮನಿಸುವವರೆ? ಅಪಾಯಕಾರಿಯಾಗಿರುವ ಈ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸುವವರೆ ಅಥವಾ ಜಾಣ ಕುರುಡತನ ಪ್ರದರ್ಶಿಸುವವರೆ? ಎಂಬುದನ್ನು ಕಾದು ನೋಡಬೇಕಿದೆ.