ಆ್ಯಪ್ನಗರ

ಬಾಹ್ಯ, ಆಂತರಿಕ ಪ್ರಗತಿ ಸಮಾವೇಶ ಗುರಿ

ಹೊನ್ನಾವರ : ಬಾಹ್ಯ ಹಾಗೂ ಆಂತರಿಕ ಬೆಳವಣಿಗೆಯ ಮೂಲಕ ಪ್ರಗತಿ ಸಾಧಿಸುವುದಕ್ಕೆ ಪ್ರೇರಣೆ ನೀಡುವುದೇ ಈ ರಾಮಕ್ಷತ್ರಿಯ ಸಮಾಜದ ಬೃಹತ್‌ ಸಮಾವೇಶದ ಮುಖ್ಯ ಗುರಿಯಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

Vijaya Karnataka 29 Dec 2019, 5:00 am
ಹೊನ್ನಾವರ : ಬಾಹ್ಯ ಹಾಗೂ ಆಂತರಿಕ ಬೆಳವಣಿಗೆಯ ಮೂಲಕ ಪ್ರಗತಿ ಸಾಧಿಸುವುದಕ್ಕೆ ಪ್ರೇರಣೆ ನೀಡುವುದೇ ಈ ರಾಮಕ್ಷತ್ರಿಯ ಸಮಾಜದ ಬೃಹತ್‌ ಸಮಾವೇಶದ ಮುಖ್ಯ ಗುರಿಯಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
Vijaya Karnataka Web external internal progress conference goal
ಬಾಹ್ಯ, ಆಂತರಿಕ ಪ್ರಗತಿ ಸಮಾವೇಶ ಗುರಿ


ತಾಲೂಕಿನ ಮಂಕಿ ಕೊಕ್ಕೇಶ್ವರದ ಶ್ರೀ ಶಂಭುಲಿಂಗ ದೇವಸ್ಥಾನದ ಆವರಣದಲ್ಲಿಕ್ಷತ್ರಿಯ ಶ್ರೇಷ್ಠ ಗಣಪತಿ ಮಾಸ್ತರ ವೇದಿಕೆಯಲ್ಲಿಶನಿವಾರ ಆರಂಭಗೊಂಡ ರಾಮಕ್ಷತ್ರಿಯ ಸಮಾಜದ ಬೃಹತ್‌ ಸಮಾವೇಶದಲ್ಲಿಸಾನ್ನಿಧ್ಯ ವಹಿಸಿ ಅವರು ಆಶಯ ನುಡಿಗಳನ್ನಾಡಿದರು.

ಯಾವುದೇ ಸಮುದಾಯ ಬಾಹ್ಯ ಪ್ರಗತಿ ಸಾಧಿಸಲು ಸಂಘಟನೆಯ ಮೂಲಕ ಶಕ್ತಿ ಗಳಿಸಿಕೊಳ್ಳಬೇಕು. ಅದಕ್ಕೆ ಒಂದಿಬ್ಬರ ಪ್ರಯತ್ನ ಸಾಕಾಗುವುದಿಲ್ಲ. ಸಮುದಾಯದ ಎಲ್ಲರ ಪ್ರಯತ್ನವೂ ಮುಖ್ಯವಾಗುತ್ತದೆ ಎಂದರು.

ಬಾಹ್ಯ ಪ್ರಗತಿಯ ಜೊತೆಗೆ ಆಂತರಿಕ ಪ್ರಗತಿಯೂ ಅಗತ್ಯವಾಗಿದೆ. ಅದಕ್ಕಾಗಿ ಇತಿಹಾಸ ಪ್ರಜ್ಞೆ ಅಗತ್ಯವಾಗಿದೆ. ಹಿಂದಿನ ದಾರಿ ಅರಿತು ಮುನ್ನಡೆಯಬೇಕು ಧಾರ್ಮಿಕ, ಅಧ್ಯಾತ್ಮಿಕ ಪ್ರಗತಿಯೂ ಉಳಿದೆಲ್ಲಪ್ರಗತಿಗಳಿಗೆ ತಳಪಾಯ ಆಗುತ್ತದೆ. ಸಮುದಾಯದ ಹೊಸ ತಲೆಮಾರಿನವರು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.

ಸಿಎಂಗೆ ಬೇಡಿಕೆ ಸಲ್ಲಿಕೆ : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮಾವೇಶ ಉದ್ಘಾಟಿಸಿದರು. ರಾಮಕ್ಷತ್ರಿಯ ಸಮಾವೇಶ ಸಮಿತಿಯವರು ಮುಖ್ಯಮಂತ್ರಿಯವರಿಗೆ ಹಲವಾರು ಬೇಡಿಕೆಗಳನ್ನು ಸಲ್ಲಿಸಿದರು. ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದರು.

ಸ್ಥಳೀಯ ಶ್ರೀ ಶಂಭುಲಿಂಗ ದೇವಾಲಯದ ಜೀರ್ಣೋದ್ಧಾರಕ್ಕೆ 1 ಕೋಟಿ ರೂ. ಮತ್ತು ಮಂಕಿ ಗ್ರಾಮದ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಮಾಜಿ ಸಚಿವ ಕೃಷ್ಣ ಪಾಲೇಮಾರ, ಮಾಜಿ ಶಾಸಕ ಲಕ್ಷಿತ್ರ್ಮೕನಾರಾಯಣ ಪಾಲ್ಗೊಂಡರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ತಾ.ಪಂ. ಅಧ್ಯಕ್ಷ ಉಲ್ಲಾಸ ನಾಯ್ಕ, ಬೆಂಗಳೂರಿನ ಹೃದಯ ರೋಗ ತಜ್ಞ ಡಾ.ಪ್ರಸಾದ, ಬೆಂಗಳೂರಿನ ಸರ್ಜನ್‌ ಎಚ್‌.ವಿ.ದೀಪಕರಾವ್‌, ಗ್ರಾ.ಪಂ. ಅಧ್ಯಕ್ಷ ಸತೀಶ ನಾಯ್ಕ, ರಾಮಕ್ಷತ್ರಿಯ ಸಮಾವೇಶ ಸಮಿತಿಯ ಅಧ್ಯಕ್ಷ ಎ.ಕೆ.ನಾಯ್ಕ, ಜಿ.ಪಂ. ಮಾಜಿ ಉಪಾಧ್ಯಕ್ಷೆ ವನಿತಾ ನಾಯ್ಕ ಉಪಸ್ಥಿತರಿದ್ದರು.

ಸ್ವರ್ಣವಲ್ಲೀ ಮಠದ ಶಿಷ್ಯರು ವೇದ ಘೋಷಿಸಿದರು. ಬೈಂದೂರು ಮಾತೃ ಮಂಡಳಿಯ ಸದಸ್ಯರು ಭಗವದ್ಗೀತೆಯ ಶ್ಲೋಕ ಪಠಣ ಮಾಡಿದರು. ವಿಶ್ವ ರಾಮಕ್ಷತ್ರಿಯ ಸಮಾವೇಶ ಗೌರವಾಧ್ಯಕ್ಷ ಕೆ.ಲಕ್ಷಿತ್ರ್ಮೕನಾರಾಯಣ ಸ್ವಾಗತಿಸಿದರು. ಸಮಾವೇಶ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್‌.ಕೆ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಬಾಲಕಿ ಸಮೃದ್ಧಿ ರಾಮಕ್ಷತ್ರಿಯ ಕವನ ಓದಿದರು.

ಸ್ಮರಣ ಸಂಚಿಕೆಯ ಕುರಿತು ಪ್ರಧಾನ ಸಂಪಾದಕ ಎಸ್‌.ಜಿ.ನಾಯ್ಕ ಮಾತನಾಡಿದರು. ಸಮಾವೇಶ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ ವಂದಿಸಿದರು. ಸಮಿತಿಯ ಕಾರ್ಯದರ್ಶಿ ಗಣಪತಿ ಹೋಬಳಿದಾರ ಮತ್ತು ಜಿಲ್ಲಾರಾಮಕ್ಷತ್ರಿಯ ನೌಕರರ ಸಂಘದ ಅಧ್ಯಕ್ಷ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ