ಆ್ಯಪ್ನಗರ

ವಾರಸುದಾರರಿಗೆ ಹೆಚ್ಚುವರಿ ಪರಿಹಾರ ವಿತರಣೆ

ಕಾರವಾರ : ಕೂರ್ಮಗಡ ದೋಣಿ ದುರಂತದಲ್ಲಿ ಮೃತಪಟ್ಟವರ ವಾರಸುದಾರರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ಹೆಚ್ಚುವರಿಯಾಗಿ ತಲಾ 2 ಲಕ್ಷ ರೂ. ನಂತೆ ಜಿಲ್ಲಾಡಳಿತ ಪರಿಹಾರ ವಿತರಿಸಿದೆ.

Vijaya Karnataka 7 May 2019, 5:00 am
ಕಾರವಾರ : ಕೂರ್ಮಗಡ ದೋಣಿ ದುರಂತದಲ್ಲಿ ಮೃತಪಟ್ಟವರ ವಾರಸುದಾರರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ಹೆಚ್ಚುವರಿಯಾಗಿ ತಲಾ 2 ಲಕ್ಷ ರೂ. ನಂತೆ ಜಿಲ್ಲಾಡಳಿತ ಪರಿಹಾರ ವಿತರಿಸಿದೆ.
Vijaya Karnataka Web extra relief delivery to the claimant
ವಾರಸುದಾರರಿಗೆ ಹೆಚ್ಚುವರಿ ಪರಿಹಾರ ವಿತರಣೆ


ಈ ಹಿಂದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ದೋಣಿದುರಂತದಲ್ಲಿ ಮೃತಮಟ್ಟ 16 ಜನರ ವಾರಸುದಾರರಿಗೆ ತಲಾ 2 ಲಕ್ಷ ರೂ. ಪರಿಹಾರ ವಿತರಿಸಲಾಗಿತ್ತು. ಜಿಲ್ಲಾಡಳಿತದಿಂದ ಕೇಂದ್ರ ಸರಕಾರಕ್ಕೆ ಘಟನೆಕುರಿತು ವರದಿ ಸಲ್ಲಿಸಿ ಪ್ರಧಾನ ಮಂತ್ರಿರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಮಂಜೂರು ಮಾಡುವಂತೆ ಕೋರಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಬ್ಯಾಂಕ್‌Üಖಾತೆಗೆ ಕೇಂದ್ರ ಸರಕಾರದ ಪರಿಹಾರ ನಿಧಿ ಸಂದಾಯವಾಗಿದ್ದು,ಜಿಲ್ಲಾಧಿಕಾರಿಡಾ.ಹರೀಶ್‌ಕುಮಾರ್‌ಅವರು ದುರಂತದಲ್ಲಿ ಮೃತರಾದವರ ವಾರಸುದಾರರಿಗೆ ತಲಾ 2 ಲಕ್ಷ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ.

ಕೂರ್ಮಗಡ ಜಾತ್ರೆಯ ದಿನ ನಡೆದ ದೋಣಿದುರಂತದಲ್ಲಿ ಹಾವೇರಿಜಿಲ್ಲೆಯ ಒಂದೇ ಕುಟುಂಬದ 9 ಮಂದಿ ಸೇರಿದಂತೆ ಒಟ್ಟು 16 ಮಂದಿ ಮೃತಪಟ್ಟಿದ್ದು ಉತ್ತರಕನ್ನಡಜಿಲ್ಲೆಯಲ್ಲಿ ನಡೆದ ಬಹು ದೊಡ್ಡ ದುರಂತವಾಗಿತ್ತು. ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರಕಾರ ತಕ್ಷ ಣ 2 ಲಕ್ಷ ರೂ. ಪರಿಹಾರ ಘೋಷಿಸಿ ವಿತರಿಸಲು ಕ್ರಮ ವಹಿಸಲಾಗಿತ್ತು. ಪ್ರಸ್ತುತ ಕೇಂದ್ರ ಸರಕಾರ ಹೆಚ್ಚುವರಿಯಾಗಿ 2 ಲಕ್ಷ ಪರಿಹಾರ ಬಿಡುಗಡೆ ಮಾಡಿರುವುದರಿಂದ ತಲಾ 4 ಲಕ್ಷ ರೂ.ಪರಿಹಾರ ವಿತರಿಸಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ