ಆ್ಯಪ್ನಗರ

ಫ್ಯಾಮಿಲಿ ಪ್ಲ್ಯಾನಿಂಗ್‌ ಯೋಜನೆ ಆಯೋಜನೆ

ಧಾರವಾಡ : ಹೆರಿಗೆ ವೇಳೆ ಮಹಿಳೆಯ ಮರಣ ಪ್ರಮಾಣ ಇಳಿಸುವ ಜತೆಗೆ ಸರಕಾರದ ಆರೋಗ್ಯ ಸೇವೆ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್‌ - 2020 ಎಂಬ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಫ್ಯಾಮಿಲಿ ಪ್ಲ್ಯಾನಿಂಗ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ ಧಾರವಾಡ ಶಾಖೆ ಅಧ್ಯಕ್ಷೆ ಡಾ.ರತ್ನಮಾಲಾ ದೇಸಾಯಿ ಹೇಳಿದರು.

Vijaya Karnataka 13 Jul 2019, 5:00 am
ಧಾರವಾಡ : ಹೆರಿಗೆ ವೇಳೆ ಮಹಿಳೆಯ ಮರಣ ಪ್ರಮಾಣ ಇಳಿಸುವ ಜತೆಗೆ ಸರಕಾರದ ಆರೋಗ್ಯ ಸೇವೆ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್‌ - 2020 ಎಂಬ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಫ್ಯಾಮಿಲಿ ಪ್ಲ್ಯಾನಿಂಗ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ ಧಾರವಾಡ ಶಾಖೆ ಅಧ್ಯಕ್ಷೆ ಡಾ.ರತ್ನಮಾಲಾ ದೇಸಾಯಿ ಹೇಳಿದರು.
Vijaya Karnataka Web family planning planning
ಫ್ಯಾಮಿಲಿ ಪ್ಲ್ಯಾನಿಂಗ್‌ ಯೋಜನೆ ಆಯೋಜನೆ


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ಮಕ್ಕಳನ್ನು ಪಡೆಯುವ ಹಕ್ಕು ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ವರದಿಯ ಪ್ರಕಾರ ಸುಮಾರು 45ರಷ್ಟು ಯುವ ಮಹಿಳೆಯರು ನಾನಾ ಆರೋಗ್ಯ ಸೇವೆಗಳಿಂದ ವಂಚಿತವಾಗುತ್ತಿದ್ದಾರೆ. ಸಾಕಷ್ಟು ವಿವಾಹಿತ ಹಾಗೂ ಅವಿವಾಹಿತ ಯುವ ಜನರಿಗೆ ಗರ್ಭನಿರೋಧಕ (ಜನನದ ಅಂತರದ ಸಾಧನಗಳಾಗಿರಬಹುದು ಅಥವಾ ಗರ್ಭಧಾರಣೆ ತಡೆಯುವ ಸಾಧನಗಳಾಗಿರಬಹುದು) ಸೇವೆಗಳು ಸಿಗಲು ಅಡೆ-ತಡೆಗಳು ಉಂಟಾಗುತ್ತಿವೆ ಎಂದು ಅಧ್ಯಯನಗಳು ತಿಳಿಸಿವೆ ಎಂದರು.

ಯುವ ಜನತೆ ದೇಶದ ಶಕ್ತಿಯಾಗಿದ್ದು, ಅವರಿಗೆ ಲೈಂಗಿಕ ಶಿಕ್ಷ ಣ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. ಇಲ್ಲವಾದಲ್ಲಿ ದೇಶದ ಭದ್ರತೆಗೆ ಧಕ್ಕೆ ಉಂಟಾಗಲಿದೆ. ಲೈಂಗಿಕತೆ ಕುರಿತು ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ತಪ್ಪು ಕಲ್ಪನೆ ಇದೆ. ಶಾಲಾ- ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷ ಣದ ಬಗ್ಗೆ ತಿಳಿವಳಿಕೆ ನೀಡಿ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ