ಆ್ಯಪ್ನಗರ

ಕುಟುಂಬದವರೆಲ್ಲದುಡಿದರೆ ಆರ್ಥಿಕ ಸಮಸ್ಯೆ ದೂರ

ಮುಂಡಗೋಡ : ಕುಟುಂಬದ ಸದಸ್ಯರೆಲ್ಲರೂ ದುಡಿದಾಗ ಮಾತ್ರ ಮನೆಯ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಎಂದು ದೇಶಪಾಂಡೆ ಅರ್‌.ಸೆಟಿ ಹಳಿಯಾಳದ ನಿರ್ದೇಶಕ ನಿತ್ಯಾನಂದ ವೈದ್ಯ ಹೇಳಿದರು.

Vijaya Karnataka 5 Jan 2020, 5:00 am
ಮುಂಡಗೋಡ : ಕುಟುಂಬದ ಸದಸ್ಯರೆಲ್ಲರೂ ದುಡಿದಾಗ ಮಾತ್ರ ಮನೆಯ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಎಂದು ದೇಶಪಾಂಡೆ ಅರ್‌.ಸೆಟಿ ಹಳಿಯಾಳದ ನಿರ್ದೇಶಕ ನಿತ್ಯಾನಂದ ವೈದ್ಯ ಹೇಳಿದರು.
Vijaya Karnataka Web family problems are far from a financial concern
ಕುಟುಂಬದವರೆಲ್ಲದುಡಿದರೆ ಆರ್ಥಿಕ ಸಮಸ್ಯೆ ದೂರ


ಕೆನರಾ ಬ್ಯಾಂಕ್‌ ದೇಶಪಾಂಡೆ ಅರ್‌.ಸೆಟಿ ಹಳಿಯಾಳ, ವಿಸ್ತರಣಾ ಶಾಖೆ ಮುಂಡಗೋಡ ವತಿಯಿಂದ ಇತ್ತೀಚೆಗೆ ಬಸಾಪುರ ಗ್ರಾಮದಲ್ಲಿನಡೆದ ಹೊಲಿಗೆ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಬ್ಯಾಂಕ್‌ಗಳು ಹಣಕಾಸು ಸಹಾಯ ನೀಡುವುದಲ್ಲದೆ ಸಮಾಜಮುಖಿ ಸೇವೆಯನ್ನು ಮಾಡುತ್ತಿವೆ. ಮಹಿಳೆಯರಿಗೆ ನಮ್ಮ ಸಂಸ್ಥೆಯು ಹಲವಾರು ರೀತಿಯ ಸ್ವಾವಲಂಬಿಯ ಸ್ವ ಉದ್ಯೋಗವನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಎಚ್‌.ಎಂ.ನಾಯ್ಕ ಮಾತನಾಡಿದರು. ಕೆಜಿಜಿ ಬ್ಯಾಂಕ್‌ ಮ್ಯಾನೇಜರ್‌ ರಾಮಚಂದ್ರ ನಾಯ್ಕ ಮಾತನಾಡಿ, ಸ್ವ ಉದ್ಯೋಗ ಮಾಡಬೇಕನ್ನುವ ಮಹಿಳೆಯರಿಗೆ ಹಾಗೂ ಸ್ವ ಸಹಾಯ ಸಂಘಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುತ್ತೇವೆ ಎಂದರು.

ಯೋಜನಾ ಸಂಯೋಜಕ ವಿನಾಯಕ ಚೌವ್ಹಾಣ, ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಮಹಾಬಲೇಶ್ವ ನಾಯ್ಕ, ಕಲ್ಲಪ್ಪಾ ಬಂಡಿವಾಡ, ಪರಶುರಾಮ, ಹನುಮಂತಪ್ಪಾ ಕಂಬಾರ. ಈರಯ್ಯಾ ಚಿಕ್ಕಮಠ, ಶಾಂತಕುಮಾರ ಕೆ. ಉಪಸ್ಥಿತರಿದ್ದರು. ದೀಪಾ ಸಂಗಡಿಗರು ಪ್ರಾರ್ಥಿಸಿದರು. ಅಂಜು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಚೈತ್ರಾ ಸ್ವಾಗತಿಸಿದರು. ರೂಪಾ ವಂದಿಸಿದರು. ಶಿಲ್ಪಾ ಅಂಗಡಿ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ