ಕೃಷ್ಣಮೂರ್ತಿ ಟಿ.ಕೆರೆಗದ್ದೆ, ಶಿರಸಿ
ಶಿರಸಿ: ಸಂಬಾರ ಬೆಳೆ ಬೆಳೆಯುವುದಕ್ಕೆ ಉತ್ತೇಜಿಸಿ ಉತ್ಪಾದನೆ ಸಮೃದ್ಧಗೊಳಿಸಬೇಕಾದ ಸಂಬಾರ ಮಂಡಳಿ ಜಿಲ್ಲೆಯ ಮಟ್ಟಿಗೆ ಹೆಸರಿಗಷ್ಟೇ ಎನ್ನುವಂತಾಗಿದೆ. ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನದಲ್ಲಿ ಜಿಲ್ಲೆಯ ಸಂಬಾರ ಬೆಳೆ ಗುರುತಾಗಿದ್ದರೂ ಅನುದಾನ ಮಾತ್ರ ಬಿಡಿಗಾಸು ಎನ್ನುವಂತಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಂಬಾರ ಮಂಡಳಿಯ ಜಿಲ್ಲೆಯ ವ್ಯಾಪ್ತಿಯ ಕ್ಷೇತ್ರಾಧಿಕಾರಿಗಳ ಕಚೇರಿ ನಗರದ ಹುಬ್ಬಳ್ಳಿ ಮಾರ್ಗದಂಚಿನಲ್ಲಿದೆ. ಸಿಬ್ಬಂದಿ ಕೊರತೆ, ಸೀಮಿತ ಅನುದಾನ, ಯೋಜನೆಗಳ ವ್ಯಾಪಕ ಪ್ರಚಾರ ಇಲ್ಲದಿರುವುದು ಸಾಕಷ್ಟು ರೈತರಿಗೆ ಜಿಲ್ಲೆಯಲ್ಲಿ ಸಂಬಾರ ಮಂಡಳಿ ಇದೆ ಎನ್ನುವುದೇ ಗೊತ್ತಿಲ್ಲ. ಸಂಬಾರ ಬೆಳೆ ಬೆಳೆಯುವುದಕ್ಕೆ ರೈತರು ಆಸಕ್ತಿ ತೋರುತ್ತಿಲ್ಲ ಎನ್ನುವುದಕ್ಕಿಂತ ವೈಜ್ಞಾನಿಕವಾಗಿ ರೈತರನ್ನು ಹೇಗೆ ಪ್ರೋತ್ಸಾಹಿಸಬಹುದು, ರೈತರು ಬೆಳೆಯುತ್ತಿರುವ ಬೆಳೆಯಲ್ಲೇ ಯಾವುದಕ್ಕೆ ಸಹಾಯಧನ ನೀಡಬಹುದು ಎಂಬುದನ್ನು ಸಮರ್ಪಕವಾಗಿ ಅವಲೋಕಿಸದೇ ಇರುವುದು ಸಂಬಾರ ಮಂಡಳಿ ಕಾರ್ಯ ಚಟುವಟಿಕೆ ಮರೆಯಾಗುತ್ತಿರುವುದಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಕೇಂದ್ರ ಸರಕಾರದ ಸಂಬಾರ ಮಂಡಳಿಯ ಕಥೆ ಹೀಗಿದ್ದರೆ ಇನ್ನು ರಾಜ್ಯ ಸರಕಾರ ವ್ಯಾಪ್ತಿಯ ಸಂಬಾರ ಮಂಡಳಿ ಸ್ಥಿತಿಯೂ ಅಷ್ಟೇ. ಹುಬ್ಬಳ್ಳಿಯಲ್ಲಿರುವ ಕಚೇರಿಯ ಕಾರ್ಯಗಳೂ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಹೀಗಾದರೆ ಕೇಂದ್ರ ಸರಕಾರದ ಒಂದು ಬೆಳೆ ಒಂದು ಉತ್ಪನ್ನ ಯೋಜನೆ ಹೇಗೆ ಯಶಸ್ವಿಯಾಗಲು ಸಾಧ್ಯ. ಸರಕಾರಗಳು ಇದನ್ನು ಅರ್ಥ ಮಾಡಿಕೊಂಡು ಹೆಚ್ಚಿನ ಅನುದಾನ ಒದಗಿಸಿ ಮಂಡಳಿಯ ಕಾರ್ಯಚಟುವಟಿಕೆ ಕ್ರಿಯಾಶೀಲವಾಗುವಂತೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಸಿಬ್ಬಂದಿ ಕೊರತೆ
ಭೌಗೋಳಿಕವಾಗಿ ಮಲೆನಾಡು, ಅರೆಬಯಲುಸೀಮೆ, ಕರಾವಳಿ ವ್ಯಾಪ್ತಿಯ ವಿಸ್ತಾರ ಜಿಲ್ಲೆಯಲ್ಲಿ ಸಂಬಾರ ಬೆಳೆ ಕೃಷಿಗೆ ಉತ್ತೇಜಿಸಲು ಕ್ಷೇತ್ರಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಕ್ಷೇತ್ರಾಧಿಕಾರಿ ಸೊರಬ, ಸಾಗರ ಜವಾಬ್ದಾರಿಯನ್ನು ಹೊಂದಿದ್ದಾರೆ. ಇನ್ನೆರಡು ಸಿಬ್ಬಂದಿ ಮಾತ್ರ ಇದ್ದಾರೆ. ಇಷ್ಟೊಂದು ದೊಡ್ಡ ಜಿಲ್ಲೆಗೆ ಈ ಸಂಖ್ಯೆ ಯಾವುದಕ್ಕೂ ಸಾಲದು ಎಂಬ ಅಭಿಪ್ರಾಯವಿದೆ.
ಇನ್ನು ಜಿಲ್ಲೆಯಲ್ಲಿ ಏಲಕ್ಕಿಯಂತ ಸಂಬಾರ ಬೆಳೆ ಬೆಳೆಯುವುದಕ್ಕೆ ಮಂಗಗಳ ಕಾಟವಿದೆ. ಇದಕ್ಕೆ ರೈತರ ನಿರಾಸಕ್ತಿಯಿದೆ. ಆದರೆ ಸಾಧ್ಯವಿರುವ ಬೆಳೆಗಳನ್ನು ಪ್ರೋತ್ಸಾಹಿಸಬಹುದಾಗಿದೆ. ಸಂಸ್ಕರಣೆಗೆ ಸೌಲಭ್ಯ ನೀಡಬಹುದಾಗಿದೆ. ವೆನಿಲ್ಲಾದಂತಹ ಬೆಳೆಯನ್ನು ರೋಗರಹಿತವಾಗಿ ಬೆಳೆಯುವುದಕ್ಕೆ ಮಾರ್ಗದರ್ಶನ ಮಾಡಬಹುದಾಗಿದೆ ಎಂಬುದು ರೈತ ವಲಯದಿಂದ ಕೇಳಿ ಬಂದಿದೆ.
ಬಿಡಿಗಾಸು ಅನುದಾನ
ಕೇಂದ್ರ ಸಂಬಾರ ಮಂಡಳಿ ವ್ಯಾಪ್ತಿಯಲ್ಲಿ 52 ಬೆಳೆಗಳಿದ್ದರೂ, ಜಿಲ್ಲೆಯ ಮಟ್ಟಿಗೆ ಏಲಕ್ಕಿ ಮತ್ತು ಕಾಳುಮೆಣಸು ಬೆಳೆ ಮಾತ್ರ ಇದು ಒಳಗೊಂಡಿದೆ. ಏಲಕ್ಕಿ ಮರು ನಾಟಿ ಯೋಜನೆ ಹಾಗೂ ಕಾಳುಮೆಣಸು ಬಿಡಿಸುವ ಯಂತ್ರಕ್ಕೆ ಸಬ್ಸಿಡಿ ಸೌಲಭ್ಯ ದೊರೆಯುತ್ತಿದೆ. ಮರುನಾಟಿಯಲ್ಲಿ ಹೆಕ್ಟೇರ್ಗೆ ಎರಡು ವರ್ಷ ತಲಾ 25 ಸಾವಿರ ರೂ. ನೀಡಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 20 ಹೆಕ್ಟೇರ್ ಪ್ರದೇಶದ ಮರುನಾಟಿಗೆ 56 ರೈತರಿಗೆ ಸಬ್ಸಿಡಿ ನೀಡಲಾಗಿತ್ತು. ಆದರೆ ಈ ಬಾರಿ ಕೇವಲ 5 ಹೆಕ್ಟೇರ್ಗೆ ಅನುದಾನ ಬಂದಿದ್ದು, 15 ಅರ್ಜಿಗಳು ಬಂದಿವೆ. ಆದರೆ ಅನುದಾನ ಮಾತ್ರ ಬಿಡಿಗಾಸು ಎನ್ನುವಂತಾಗಿದೆ. ಇನ್ನು ಕಳೆದ ವರ್ಷ 20 ಮಂದಿಗೆ ಕಾಳುಮೆಣಸು ಬಿಡಿಸುವ ಯಂತ್ರ ನೀಡಿದ್ದರೆ ಈ ಬಾರಿ 10 ಮಂದಿಗೆ ಮಾತ್ರ ದೊರೆಯುವ ಸಾಧ್ಯತೆಯಿದೆ.
6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ
ಜಿಲ್ಲೆಯಲ್ಲಿ ಸಂಬಾರ ಮಂಡಳಿಗಳ ಪ್ರೋತ್ಸಾಹ ಇಲ್ಲದೇ ಇದ್ದರೂ ಕಾಳುಮೆಣಸನ್ನು 5 ಸಾವಿರ ಹೆಕ್ಟೇರ್, ಅರಿಶಿಣ 100 ಹೆಕ್ಟೇರ್, ಶುಂಠಿ 500 ಹೆಕ್ಟೇರ್, ಏಲಕ್ಕಿ 500 ಹೆಕ್ಟೇರ್, ವೆನಿಲ್ಲಾ100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹೀಗೆ ಬೆಳೆಯುವ ರೈತರಿಗೆ ಇನ್ನಷ್ಟು ಉತ್ತೇಜನ, ಸಹಾಯಧನ ನೀಡಿದರೆ ಜಿಲ್ಲೆಯ ಸಂಬಾರ ಬೆಳೆಗಳ ಉತ್ಪಾದನೆ ಹೆಚ್ಚಿಸಬಹುದು ಎಂಬ ಮಾತುಗಳು ಕೇಳಿ ಬಂದಿವೆ.
ಜಿಲ್ಲೆಯಲ್ಲಿ ಕೇಂದ್ರಿಯ ಸಂಬಾರ ಮಂಡಳಿ ಕಾರ್ಯಚಟುವಟಿಕೆ ಅಷ್ಟಕಷ್ಟೇ ಎನ್ನುವಂತಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡು ಯೋಜನೆಯನ್ನು ರೈತರಿಗೆ ತಲುಪಲು ಅವಕಾಶವಿತ್ತು. ಆದರೆ ಜಿಲ್ಲೆಯ ಮಟ್ಟಿಗೆ ಮಂಡಳಿಗೆ ಅನುದಾನ, ಯೋಜನೆಯೇ ಬರುತ್ತಿಲ್ಲ.
ದೀಪಕ ದೊಡ್ಡೂರು, ಕೃಷಿಕ
ಜಿಲ್ಲೆಯಲ್ಲಿ ಏಲಕ್ಕಿ, ಕಾಳುಮೆಣಸು ಉತ್ತೇಜನಕ್ಕೆ ಸಂಬಾರ ಮಂಡಳಿ ಪ್ರಯತ್ನಿಸುತ್ತಿದೆ. ಆದರೆ ಪ್ರಾಣಿಗಳ ಬಾಧೆ ಮತ್ತಿತರ ಕಾರಣದಿಂದ ರೈತರು ನಿರೀಕ್ಷೆಯಷ್ಟು ಆಸಕ್ತಿ ತೋರುತ್ತಿಲ್ಲ.
ರಮೇಶ, ಕ್ಷೇತ್ರಾಧಿಕಾರಿ, ಸಂಬಾರ ಮಂಡಳಿ, ಶಿರಸಿ
ಶಿರಸಿ: ಸಂಬಾರ ಬೆಳೆ ಬೆಳೆಯುವುದಕ್ಕೆ ಉತ್ತೇಜಿಸಿ ಉತ್ಪಾದನೆ ಸಮೃದ್ಧಗೊಳಿಸಬೇಕಾದ ಸಂಬಾರ ಮಂಡಳಿ ಜಿಲ್ಲೆಯ ಮಟ್ಟಿಗೆ ಹೆಸರಿಗಷ್ಟೇ ಎನ್ನುವಂತಾಗಿದೆ. ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನದಲ್ಲಿ ಜಿಲ್ಲೆಯ ಸಂಬಾರ ಬೆಳೆ ಗುರುತಾಗಿದ್ದರೂ ಅನುದಾನ ಮಾತ್ರ ಬಿಡಿಗಾಸು ಎನ್ನುವಂತಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಂಬಾರ ಮಂಡಳಿಯ ಜಿಲ್ಲೆಯ ವ್ಯಾಪ್ತಿಯ ಕ್ಷೇತ್ರಾಧಿಕಾರಿಗಳ ಕಚೇರಿ ನಗರದ ಹುಬ್ಬಳ್ಳಿ ಮಾರ್ಗದಂಚಿನಲ್ಲಿದೆ. ಸಿಬ್ಬಂದಿ ಕೊರತೆ, ಸೀಮಿತ ಅನುದಾನ, ಯೋಜನೆಗಳ ವ್ಯಾಪಕ ಪ್ರಚಾರ ಇಲ್ಲದಿರುವುದು ಸಾಕಷ್ಟು ರೈತರಿಗೆ ಜಿಲ್ಲೆಯಲ್ಲಿ ಸಂಬಾರ ಮಂಡಳಿ ಇದೆ ಎನ್ನುವುದೇ ಗೊತ್ತಿಲ್ಲ. ಸಂಬಾರ ಬೆಳೆ ಬೆಳೆಯುವುದಕ್ಕೆ ರೈತರು ಆಸಕ್ತಿ ತೋರುತ್ತಿಲ್ಲ ಎನ್ನುವುದಕ್ಕಿಂತ ವೈಜ್ಞಾನಿಕವಾಗಿ ರೈತರನ್ನು ಹೇಗೆ ಪ್ರೋತ್ಸಾಹಿಸಬಹುದು, ರೈತರು ಬೆಳೆಯುತ್ತಿರುವ ಬೆಳೆಯಲ್ಲೇ ಯಾವುದಕ್ಕೆ ಸಹಾಯಧನ ನೀಡಬಹುದು ಎಂಬುದನ್ನು ಸಮರ್ಪಕವಾಗಿ ಅವಲೋಕಿಸದೇ ಇರುವುದು ಸಂಬಾರ ಮಂಡಳಿ ಕಾರ್ಯ ಚಟುವಟಿಕೆ ಮರೆಯಾಗುತ್ತಿರುವುದಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಸಿಬ್ಬಂದಿ ಕೊರತೆ
ಭೌಗೋಳಿಕವಾಗಿ ಮಲೆನಾಡು, ಅರೆಬಯಲುಸೀಮೆ, ಕರಾವಳಿ ವ್ಯಾಪ್ತಿಯ ವಿಸ್ತಾರ ಜಿಲ್ಲೆಯಲ್ಲಿ ಸಂಬಾರ ಬೆಳೆ ಕೃಷಿಗೆ ಉತ್ತೇಜಿಸಲು ಕ್ಷೇತ್ರಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಕ್ಷೇತ್ರಾಧಿಕಾರಿ ಸೊರಬ, ಸಾಗರ ಜವಾಬ್ದಾರಿಯನ್ನು ಹೊಂದಿದ್ದಾರೆ. ಇನ್ನೆರಡು ಸಿಬ್ಬಂದಿ ಮಾತ್ರ ಇದ್ದಾರೆ. ಇಷ್ಟೊಂದು ದೊಡ್ಡ ಜಿಲ್ಲೆಗೆ ಈ ಸಂಖ್ಯೆ ಯಾವುದಕ್ಕೂ ಸಾಲದು ಎಂಬ ಅಭಿಪ್ರಾಯವಿದೆ.
ಇನ್ನು ಜಿಲ್ಲೆಯಲ್ಲಿ ಏಲಕ್ಕಿಯಂತ ಸಂಬಾರ ಬೆಳೆ ಬೆಳೆಯುವುದಕ್ಕೆ ಮಂಗಗಳ ಕಾಟವಿದೆ. ಇದಕ್ಕೆ ರೈತರ ನಿರಾಸಕ್ತಿಯಿದೆ. ಆದರೆ ಸಾಧ್ಯವಿರುವ ಬೆಳೆಗಳನ್ನು ಪ್ರೋತ್ಸಾಹಿಸಬಹುದಾಗಿದೆ. ಸಂಸ್ಕರಣೆಗೆ ಸೌಲಭ್ಯ ನೀಡಬಹುದಾಗಿದೆ. ವೆನಿಲ್ಲಾದಂತಹ ಬೆಳೆಯನ್ನು ರೋಗರಹಿತವಾಗಿ ಬೆಳೆಯುವುದಕ್ಕೆ ಮಾರ್ಗದರ್ಶನ ಮಾಡಬಹುದಾಗಿದೆ ಎಂಬುದು ರೈತ ವಲಯದಿಂದ ಕೇಳಿ ಬಂದಿದೆ.
ಬಿಡಿಗಾಸು ಅನುದಾನ
ಕೇಂದ್ರ ಸಂಬಾರ ಮಂಡಳಿ ವ್ಯಾಪ್ತಿಯಲ್ಲಿ 52 ಬೆಳೆಗಳಿದ್ದರೂ, ಜಿಲ್ಲೆಯ ಮಟ್ಟಿಗೆ ಏಲಕ್ಕಿ ಮತ್ತು ಕಾಳುಮೆಣಸು ಬೆಳೆ ಮಾತ್ರ ಇದು ಒಳಗೊಂಡಿದೆ. ಏಲಕ್ಕಿ ಮರು ನಾಟಿ ಯೋಜನೆ ಹಾಗೂ ಕಾಳುಮೆಣಸು ಬಿಡಿಸುವ ಯಂತ್ರಕ್ಕೆ ಸಬ್ಸಿಡಿ ಸೌಲಭ್ಯ ದೊರೆಯುತ್ತಿದೆ. ಮರುನಾಟಿಯಲ್ಲಿ ಹೆಕ್ಟೇರ್ಗೆ ಎರಡು ವರ್ಷ ತಲಾ 25 ಸಾವಿರ ರೂ. ನೀಡಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 20 ಹೆಕ್ಟೇರ್ ಪ್ರದೇಶದ ಮರುನಾಟಿಗೆ 56 ರೈತರಿಗೆ ಸಬ್ಸಿಡಿ ನೀಡಲಾಗಿತ್ತು. ಆದರೆ ಈ ಬಾರಿ ಕೇವಲ 5 ಹೆಕ್ಟೇರ್ಗೆ ಅನುದಾನ ಬಂದಿದ್ದು, 15 ಅರ್ಜಿಗಳು ಬಂದಿವೆ. ಆದರೆ ಅನುದಾನ ಮಾತ್ರ ಬಿಡಿಗಾಸು ಎನ್ನುವಂತಾಗಿದೆ. ಇನ್ನು ಕಳೆದ ವರ್ಷ 20 ಮಂದಿಗೆ ಕಾಳುಮೆಣಸು ಬಿಡಿಸುವ ಯಂತ್ರ ನೀಡಿದ್ದರೆ ಈ ಬಾರಿ 10 ಮಂದಿಗೆ ಮಾತ್ರ ದೊರೆಯುವ ಸಾಧ್ಯತೆಯಿದೆ.
6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ
ಜಿಲ್ಲೆಯಲ್ಲಿ ಸಂಬಾರ ಮಂಡಳಿಗಳ ಪ್ರೋತ್ಸಾಹ ಇಲ್ಲದೇ ಇದ್ದರೂ ಕಾಳುಮೆಣಸನ್ನು 5 ಸಾವಿರ ಹೆಕ್ಟೇರ್, ಅರಿಶಿಣ 100 ಹೆಕ್ಟೇರ್, ಶುಂಠಿ 500 ಹೆಕ್ಟೇರ್, ಏಲಕ್ಕಿ 500 ಹೆಕ್ಟೇರ್, ವೆನಿಲ್ಲಾ100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹೀಗೆ ಬೆಳೆಯುವ ರೈತರಿಗೆ ಇನ್ನಷ್ಟು ಉತ್ತೇಜನ, ಸಹಾಯಧನ ನೀಡಿದರೆ ಜಿಲ್ಲೆಯ ಸಂಬಾರ ಬೆಳೆಗಳ ಉತ್ಪಾದನೆ ಹೆಚ್ಚಿಸಬಹುದು ಎಂಬ ಮಾತುಗಳು ಕೇಳಿ ಬಂದಿವೆ.
ಜಿಲ್ಲೆಯಲ್ಲಿ ಕೇಂದ್ರಿಯ ಸಂಬಾರ ಮಂಡಳಿ ಕಾರ್ಯಚಟುವಟಿಕೆ ಅಷ್ಟಕಷ್ಟೇ ಎನ್ನುವಂತಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡು ಯೋಜನೆಯನ್ನು ರೈತರಿಗೆ ತಲುಪಲು ಅವಕಾಶವಿತ್ತು. ಆದರೆ ಜಿಲ್ಲೆಯ ಮಟ್ಟಿಗೆ ಮಂಡಳಿಗೆ ಅನುದಾನ, ಯೋಜನೆಯೇ ಬರುತ್ತಿಲ್ಲ.
ದೀಪಕ ದೊಡ್ಡೂರು, ಕೃಷಿಕ
ಜಿಲ್ಲೆಯಲ್ಲಿ ಏಲಕ್ಕಿ, ಕಾಳುಮೆಣಸು ಉತ್ತೇಜನಕ್ಕೆ ಸಂಬಾರ ಮಂಡಳಿ ಪ್ರಯತ್ನಿಸುತ್ತಿದೆ. ಆದರೆ ಪ್ರಾಣಿಗಳ ಬಾಧೆ ಮತ್ತಿತರ ಕಾರಣದಿಂದ ರೈತರು ನಿರೀಕ್ಷೆಯಷ್ಟು ಆಸಕ್ತಿ ತೋರುತ್ತಿಲ್ಲ.
ರಮೇಶ, ಕ್ಷೇತ್ರಾಧಿಕಾರಿ, ಸಂಬಾರ ಮಂಡಳಿ, ಶಿರಸಿ