ಆ್ಯಪ್ನಗರ

ಹಾಲು ಮಾರಾಟದಿಂದ ರೈತರಿಗೆ ಅನುಕೂಲ

ಶಿರಸಿ : ಹಾಲು ಹಾಗೂ ಹಾಲಿನ ಉತ್ಪನ್ನಗಳು ಹೆಚ್ಚೆಚ್ಚು ಮಾರಾಟವಾದರೆ ರೈತರು ಉತ್ಪಾದಿಸುವ ಹಾಲಿಗೆ ಹೆಚ್ಚಿನ ದರ ದೊರೆಯಲು ಸಾಧ್ಯ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.

Vijaya Karnataka 3 Jun 2019, 5:00 am
ಶಿರಸಿ : ಹಾಲು ಹಾಗೂ ಹಾಲಿನ ಉತ್ಪನ್ನಗಳು ಹೆಚ್ಚೆಚ್ಚು ಮಾರಾಟವಾದರೆ ರೈತರು ಉತ್ಪಾದಿಸುವ ಹಾಲಿಗೆ ಹೆಚ್ಚಿನ ದರ ದೊರೆಯಲು ಸಾಧ್ಯ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.
Vijaya Karnataka Web SRS-1SRS4


ನಗರದ ಅಜಿತಮನೋಚೇತನಾ ಸಂಸ್ಥೆಯ ವಿಕಾಸ ಶಾಲೆಯಲ್ಲಿ ಧಾರವಾಡ ಹಾಲು ಒಕ್ಕೂಟದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಉತ್ಪಾದಿಸುವ ಹಾಲಿಗೆ ಹೆಚ್ಚಿನ ಬೆಲೆ ದೊರೆತರೆ ಹೈನೋದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಾಲು ದಿನಾಚರಣೆ ಮೂಲಕ ಜಾಗೃತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ರೈತರು ಗುಣಮಟ್ಟದ ಹಾಲನ್ನು ಪೂರೈಸುತ್ತಿದ್ದಾರೆ. ಅದೇ ರೀತಿ ಹಾಲು ಸಂಘಗಳು ಸಹ ಪ್ರಾಮಾಣಿಕವಾಗಿ ರೈತರಿಗೆ ಹಣ ತಲುಪಿಸುತ್ತಿವೆ ಎಂದರು.

ಸ್ವಾತಂತ್ರ್ಯಾ ನಂತರ ಕಾಲದಲ್ಲಿ ದೇಶದಲ್ಲಿ ಹಾಲಿನ ಉತ್ಪಾದನೆಯಿರಲಿಲ್ಲ. ವಿದೇಶದಿಂದ ಹಸುಗಳನ್ನು ದೇಶಕ್ಕೆ ತರಲಾಗುತ್ತಿತ್ತು. ಆದರೆ ಈಗ ಭಾರತ ಹಾಲಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. 2001ರಿಂದ ವಿಶ್ವ ಹಾಲು ದಿನಾಚರಣೆ ಸಹ ಆಚರಿಸುತ್ತಾ ಬರಲಾಗಿದೆ ಎಂದರು.

ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದ್ದರೂ ಪ್ರತಿ ಮಗು, ಮನುಷ್ಯನಿಗೆ ಎಷ್ಟು ಪ್ರಮಾಣದಲ್ಲಿ ಹಾಲು ಸಿಗಬೇಕೋ ಅಷ್ಟು ಸಿಗುತ್ತಿಲ್ಲ. ಹೀಗಾಗಿ ಯಾವ ಪ್ರಮಾಣದಲ್ಲಿ ಸಿಗಬೇಕೋ ಅಷ್ಟು ಹಾಲು ಸಿಗುವಂತಾಗಲಿ ಎಂಬ ಉದ್ದೇಶದಿಂದಲೂ ಹಾಲಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ನಂದಿನಿ ಹಾಲು ಶುದ್ಧತೆಯ ಪ್ರತೀಕವಾಗಿದೆ. ನಂದಿನ ಹಾಲು ಒಂದೆರಡು ದಿನದಲ್ಲೇ ಹಾಳಾಗುತ್ತದೆ ಎಂಬ ಮಾತಿದೆ. ಆದರೆ ಬೇಗನೇ ಹಾಲು ಕೆಡುತ್ತದೆ ಎಂದಾದರೆ ಅದು ಶುದ್ಧವಾಗಿದೆ ಎಂದೇ ಅರ್ಥ. ನಾಲ್ಕೈದು ದಿನ ಇಟ್ಟರೂ ಕೆಟ್ಟಿಲ್ಲವೆಂದರೆ ಅದಕ್ಕೆ ಕೆಮಿಕಲ್‌ ಮಿಶ್ರಣವಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ನಂದಿನಿ ಹಾಲಿಗೆ ರಾಸಾಯನಿಕ ಮಿಶ್ರಣ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚಾರ್ಟಡ್‌ ಅಕೌಂಟೆಂಟ್‌ ಉದಯ ಸ್ವಾದಿ ಅಧ್ಯಕ್ಷ ತೆ ವಹಿಸಿದ್ದರು. ಲಯನ್ಸ್‌ ಶಿಕ್ಷ ಣ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಎಂ.ಭಟ್ಟ ಕಾರೇಕೊಪ್ಪ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ, ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು. ಜಿಲ್ಲಾ ಮುಖ್ಯ ಸಂಯೋಜಕ ಸಿ.ಎಸ್‌.ಪರಮೇಶ್ವರಪ್ಪ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ