ಆ್ಯಪ್ನಗರ

ಲಕ್ಕಲಕಟ್ಟಿಯಲ್ಲಿ ಜ್ವರ, ಕೀಲು ನೋವು

ಗಜೇಂದ್ರಗಡ : ಕುಡಿಯುವ ನೀರು ಅಭಾವದಿಂದ ತೊಂದರೆ ಅನುಭವಿಸಿರುವ ಸಮೀಪದ ಲಕ್ಕಲಕಟ್ಟಿ ಗ್ರಾಮಸ್ಥರಲ್ಲಿ ಸಾಮೂಹಿಕ ಕೈ, ಕಾಲು,ಕೀಲು ನೋವು,ತೀವೃತರ ಜ್ವರ ಕಂಡುಬಂದಿದೆ.

Vijaya Karnataka 27 Oct 2018, 5:00 am
ಗಜೇಂದ್ರಗಡ : ಕುಡಿಯುವ ನೀರು ಅಭಾವದಿಂದ ತೊಂದರೆ ಅನುಭವಿಸಿರುವ ಸಮೀಪದ ಲಕ್ಕಲಕಟ್ಟಿ ಗ್ರಾಮಸ್ಥರಲ್ಲಿ ಸಾಮೂಹಿಕ ಕೈ, ಕಾಲು,ಕೀಲು ನೋವು,ತೀವೃತರ ಜ್ವರ ಕಂಡುಬಂದಿದೆ.
Vijaya Karnataka Web fever and joint pain in lacquer
ಲಕ್ಕಲಕಟ್ಟಿಯಲ್ಲಿ ಜ್ವರ, ಕೀಲು ನೋವು


ರೋಗದಿಂದ ಬಳಲುತ್ತಿರುವವರು ಗಜೇಂದ್ರಗಡ ಸರಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಚಿಕಿತ್ಸೆಗೆ ದಾಖಲಾಗಿದ್ದಾರೆ. ಗ್ರಾಮದ ಶುದ್ಧ ಕುಡಿಯುವ ನೀರು ಘಟಕ ಬಳಿ ಪೂರೈಸುವ ವಾಲ್ವ್‌ನಲ್ಲಿ ನಿಂತಿರುವ ಕೊಳಚೆ ಕುಡಿಯುವ ನೀರಿನ ಜತೆಗೆ ಸೇರಿದೆ. ಚರಂಡಿಗಳು ಸ್ವಚ್ಛ ಮಾಡದಿರುವುದು ಗ್ರಾಮಸ್ಥರು ಮೂರು ದಿನದಿಂದ ರೋಗ ಬಾಧೆಯಿಂದ ಬಳಲುವಂತಾಗಿದೆ. ಜ್ವರ, ಕೀಲು ನೋವು ಹೆಚ್ಚಿದ್ದರಿಂದ ಚಿಕಿತ್ಸೆಗೆ ಬಂದಿರುವುದಾಗಿ ಗ್ರಾಮಸ್ಥರು ಹೇಳಿದರು.

ಗ್ರಾಮದ ಈಶಪ್ಪ ಹಡಪದ, ಲಲಿತಾ ಹಿರೇಉಪ್ಪಾರ, ನಾಗರಾಜ ಇಂಗಳಗಿ, ರತ್ನವ್ವಾ ಹಡಪದ, ಚೆನ್ನಪ್ಪ ಘೋರ್ಪಡೆ, ಮಲ್ಲಿಕಾರ್ಜುನ ಕೊಟಗಿ, ಅಭಿಲಾಷಾ ಕೊಟಗಿ, ರಾಘು ಗೌಡರ ಸೇರಿದಂತೆ ಇತರರು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಚಿಕುನ್‌ಗುನ್ಯಾ ಬಾದೆಗೆ ಒಳಗಾಗಿದ್ದೆವೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತ ಪಡಿಸಿದರು.

ಜ್ವರ, ಸಂದುನೋವಿಗೆ ನೋವು ನಿವಾರಕ ಔಷಧಿ ನೀಡಲಾಗುತ್ತಿದೆ. ಕಾಯಿಲೆ ತುತ್ತಾದವರಲ್ಲಿ ಬಹುಪಾಲು ಜನ ಸರಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ವೈದ್ಯರ ಬಳಿಗೆ ಹೊಗಿ ಆದಷ್ಟೂ ಪರಿಣಾಮಕಾರಿ ಔಷಧ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಚಿಕುನ್‌ಗುನ್ಯಾ ಪ್ರತ್ಯಕ್ಷ ?

ಜನರನ್ನು ಹಿಂಡಿಹಿಪ್ಪೆ ಮಾಡಿದ ಚಿಕುನ್‌ಗುನ್ಯಾ ರೋಗ ಈಗ ಮತ್ತೆ ಲಕ್ಕಲಕಟ್ಟಿಯಲ್ಲಿ ಪ್ರತ್ಯಕ್ಷ ವಾಗಿದೆಯಾ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ. ಕಾಯಿಲೆಯಿಂದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಮದ್ಯ ಇದರ ಪ್ರಮಾಣ ಕಡಿಮೆಯಾದರೂ ವ್ಯಾಪಕವಾಗಿ ಹರಡುತ್ತಿದೆ. ಚಿಕುನ್‌ಗುನ್ಯಾ ಪೀಡಿತರು ನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿಯೂ ಸಾಕಷ್ಟು ಜನ ಚಿಕತ್ಸೆ ಪಡೆಯುತ್ತಿದ್ದಾರೆ.

ದಿಟ್ಟ ಕ್ರಮ ಇಲ್ಲವೇ ಇಲ್ಲ :

ಜನರ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿರುವ ಗ್ರಾಮದಲ್ಲಿ ಮಲೇರಿಯಾ ಸಾಮಾನ್ಯವಾಗಿದೆ. ಅದರಲ್ಲೂ ಹೆಚ್ಚಿನ ಸೋಂಕಿತ ಪ್ರಕರಣ ಪತ್ತೆಯಾಗಿವೆ. ಚಿಕುನ್‌ಗುನ್ಯಾ ಅಂತಹ ಮಾರಕ ಜೀವ ಹಿಂಡಿ ಹಿಪ್ಪೆ ಮಾಡುವ ರೋಗವಾಗಿದೆ. ಹೀಗಾಗಿ ಪಕ್ಕದ ಊರಿನಲ್ಲಿ ರೋಗ ಬಂದಿದೆ. ಎಂಬ ಸುದ್ದಿ ಕಿವಿ ಮೇಲೆ ಬಿದ್ದರೂ ಜನ ಕಂಗಾಲಾಗುತಿ ದ್ದಾರೆ. ಇಲ್ಲಿಗೆ ಬರುವುದು ಬೇಡಪ್ಪ ಎಂದು ರೋಗಕ್ಕೆ ಕೈ ಮುಗಿಯುತ್ತಿದ್ದಾರೆ. ಈಡಿಸ್‌ ಇಜಿಪ್ಟಿ ಎಂಬ ಸೊಳ್ಳೆ ಕಡಿತದಿಂದ ಈ ರೋಗ ಹರಡುತ್ತದೆ. ಎಳೆ ಮಕ್ಕಳು ಹಾಗೂ ವೃದ್ದರಿಗೆ ಇದು ಕೊಡುವ ಯಾತನೆ ಇನ್ನಷ್ಟು ಹೆಚ್ಚು. ಇದೇ ಚಿಕುನ್‌ಗುನ್ಯಾ ರೋಗ ನಿರ್ದಿಷ್ಟ ವೈರಸ್‌ನಿಂದ ಬರುತ್ತದೆ. ಚಿಕುನ್‌ಗುನ್ಯಾ ಮಹಾಮಾರಿ ದಿನದಿಂದ ದಿನಕ್ಕೆ ಹರಡುತ್ತಿದೆ.

ಇಷ್ಟೆಲ್ಲ ಆದರೂ ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿದಿಗಳು ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರ ಆರೋಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ