ಕಾರವಾರ : ಕಾರ್ಮಿಕರು ಶೋಷಣೆಯ ವಿರುದ್ಧ ಹೋರಾಡಲು ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಗುತ್ತಿಗೆದಾರ ನೌಕರರ ಸಂಘಟನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಹಕ್ಕು-ಕಾನೂನಾತ್ಮಕ ಚಿಂತನೆ ಕಾ¿åರ್ಕ್ರಮವನ್ನು ಉದ್ಘಾಟಿಸಿ ಕಾರ್ಮಿಕರು ಸಂಘಟನೆ ಸ್ಥಾಪಿಸಿಕೊಳ್ಳುವುದು ಸಂವಿಧಾನ ಬದ್ಧವಾಗಿದ್ದು ಕಾನೂನಾತ್ಮಕ ಹೋರಾಟದಿಂದ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.
ಪ್ರಪಂಚದಲ್ಲಿ ಅಭಿವೃದ್ಧಿ ಹಾಗೂ ಸಂಪತ್ತಿನ ಉತ್ಪತ್ತಿಯು ಕಾರ್ಮಿಕರಿಂದಾಗಿರುವುದು. ಕಾರ್ಮಿಕರ ಅಭಿವೃದ್ಧಿಗೆ ಅನ್ಯಾಯವಾಗುತ್ತಿರುವುದು ಕಂಡು ಬರುತ್ತಿದೆ. ಸಂವಿಧಾನ ಮತ್ತು ಕಾರ್ಮಿಕರ ಕಾನೂನು ಕಾರ್ಮಿಕರ ಪರವಾಗಿದ್ದರೂ ಆಡಳಿತ ವ್ಯವಸ್ಥೆಯಿಂದ ಕಾರ್ಮಿಕ ವಿರೋಧಿ ನೀತಿ ಪ್ರಕಟವಾಗುತ್ತಿರುವುದು ವಿಷಾದಕರ. ಇಂತಹ ಕಾರ್ಮಿಕರ ವಿರೋಧಿ ನೀತಿಯ ವಿರುದ್ಧ ಸಂಘಟನಾತ್ಮಕ ಹೋರಾಟ ಅನಿವಾರ್ಯ. ಕಾರ್ಮಿಕರು ಹೋರಾಟದಿಂದಲೇ ಅವರ ಬದುಕು, ಸೌಲಭ್ಯ ಪಡೆದುಕೊಂಡಿರುವುದು ಇತಿಹಾಸದಿಂದ ತಿಳಿದುಬರುತ್ತದೆ ಎಂದು ಹೇಳಿದರು.
ಕಾರ್ಮಿಕರ ವಿರೋಧಿ ನೀತಿ ಇದ್ದಂತಹ ಸಂದರ್ಭದಲ್ಲಿ ಹೋರಾಟದಿಂದಲೇ ಕಾನೂನು ಬದಲಾವಣೆ ಮಾಡಲು ಸಾಧ್ಯ. ಇವೆಲ್ಲಕ್ಕೂ ಕಾರ್ಮಿಕರು ಕಾನೂನು ಜ್ಞಾನ ವೃದ್ಧಿಸಿಕೊಂಡರೆ ಮಾತ್ರ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯಾಧೀಶ ಟಿ.ಗೋವಿಂದಯ್ಯ ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಸಮಿತಿಯು ಶೋಷಣೆಗೊಳಗಾದ ಕಾರ್ಮಿಕರ ಹಿತರಕ್ಷ ಣೆ ಕಾಪಾಡುವುದರಲ್ಲಿ ಬದ್ಧವಾಗಿದ್ದು ಕಾರ್ಮಿಕರು ಅರ್ಜಿ ದಾಖಲಿಸುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಹೇಳಿದರು. ಹಿರಿಯ ವಕೀಲ ಹಾಗೂ ಸ್ಪಂದನ ಲೀಗಲ್ ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ ಕಾರ್ಮಿಕರ ಹಕ್ಕುಗಳು ಹಾಗೂ ಸಮಸ್ಯೆಗಳ ಪರಿಹಾರದ ಕುರಿತು ಉಪನ್ಯಾಸ ನೀಡಿದರು. ಸಂಘದ ಪದಾಧಿಕಾರಿಗಳಾದ ಕಿಶನ್ ಬಾರಿಕ್, ದೀಪ್ತಿ ನಾಯ್ಕ, ಪ್ರವೀಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಸ್ವಾಗತಿಸಿದರು. ಖೈರುನ್ನೀಸಾ ಶೇಖ ನಿರೂಪಿಸಿದರು. ತೃಪ್ತಿ ಕೊಡಾರಕರ ವಂದಿಸಿದರು.
ಇಲ್ಲಿನ ಗುರುಭವನದಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಗುತ್ತಿಗೆದಾರ ನೌಕರರ ಸಂಘಟನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಹಕ್ಕು-ಕಾನೂನಾತ್ಮಕ ಚಿಂತನೆ ಕಾ¿åರ್ಕ್ರಮವನ್ನು ಉದ್ಘಾಟಿಸಿ ಕಾರ್ಮಿಕರು ಸಂಘಟನೆ ಸ್ಥಾಪಿಸಿಕೊಳ್ಳುವುದು ಸಂವಿಧಾನ ಬದ್ಧವಾಗಿದ್ದು ಕಾನೂನಾತ್ಮಕ ಹೋರಾಟದಿಂದ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.
ಪ್ರಪಂಚದಲ್ಲಿ ಅಭಿವೃದ್ಧಿ ಹಾಗೂ ಸಂಪತ್ತಿನ ಉತ್ಪತ್ತಿಯು ಕಾರ್ಮಿಕರಿಂದಾಗಿರುವುದು. ಕಾರ್ಮಿಕರ ಅಭಿವೃದ್ಧಿಗೆ ಅನ್ಯಾಯವಾಗುತ್ತಿರುವುದು ಕಂಡು ಬರುತ್ತಿದೆ. ಸಂವಿಧಾನ ಮತ್ತು ಕಾರ್ಮಿಕರ ಕಾನೂನು ಕಾರ್ಮಿಕರ ಪರವಾಗಿದ್ದರೂ ಆಡಳಿತ ವ್ಯವಸ್ಥೆಯಿಂದ ಕಾರ್ಮಿಕ ವಿರೋಧಿ ನೀತಿ ಪ್ರಕಟವಾಗುತ್ತಿರುವುದು ವಿಷಾದಕರ. ಇಂತಹ ಕಾರ್ಮಿಕರ ವಿರೋಧಿ ನೀತಿಯ ವಿರುದ್ಧ ಸಂಘಟನಾತ್ಮಕ ಹೋರಾಟ ಅನಿವಾರ್ಯ. ಕಾರ್ಮಿಕರು ಹೋರಾಟದಿಂದಲೇ ಅವರ ಬದುಕು, ಸೌಲಭ್ಯ ಪಡೆದುಕೊಂಡಿರುವುದು ಇತಿಹಾಸದಿಂದ ತಿಳಿದುಬರುತ್ತದೆ ಎಂದು ಹೇಳಿದರು.
ಕಾರ್ಮಿಕರ ವಿರೋಧಿ ನೀತಿ ಇದ್ದಂತಹ ಸಂದರ್ಭದಲ್ಲಿ ಹೋರಾಟದಿಂದಲೇ ಕಾನೂನು ಬದಲಾವಣೆ ಮಾಡಲು ಸಾಧ್ಯ. ಇವೆಲ್ಲಕ್ಕೂ ಕಾರ್ಮಿಕರು ಕಾನೂನು ಜ್ಞಾನ ವೃದ್ಧಿಸಿಕೊಂಡರೆ ಮಾತ್ರ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯಾಧೀಶ ಟಿ.ಗೋವಿಂದಯ್ಯ ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಸಮಿತಿಯು ಶೋಷಣೆಗೊಳಗಾದ ಕಾರ್ಮಿಕರ ಹಿತರಕ್ಷ ಣೆ ಕಾಪಾಡುವುದರಲ್ಲಿ ಬದ್ಧವಾಗಿದ್ದು ಕಾರ್ಮಿಕರು ಅರ್ಜಿ ದಾಖಲಿಸುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಹೇಳಿದರು. ಹಿರಿಯ ವಕೀಲ ಹಾಗೂ ಸ್ಪಂದನ ಲೀಗಲ್ ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ ಕಾರ್ಮಿಕರ ಹಕ್ಕುಗಳು ಹಾಗೂ ಸಮಸ್ಯೆಗಳ ಪರಿಹಾರದ ಕುರಿತು ಉಪನ್ಯಾಸ ನೀಡಿದರು. ಸಂಘದ ಪದಾಧಿಕಾರಿಗಳಾದ ಕಿಶನ್ ಬಾರಿಕ್, ದೀಪ್ತಿ ನಾಯ್ಕ, ಪ್ರವೀಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಸ್ವಾಗತಿಸಿದರು. ಖೈರುನ್ನೀಸಾ ಶೇಖ ನಿರೂಪಿಸಿದರು. ತೃಪ್ತಿ ಕೊಡಾರಕರ ವಂದಿಸಿದರು.