13 ಅಂಗಡಿಗಳಿಂದ ದಂಡ ವಸೂಲಿ
ಭಟ್ಕಳ: ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲೂಕು ತಂಬಾಕು ತನಿಖಾ ದಳದ ವತಿಯಿಂದ ಭಟ್ಕಳದ ಶಹರ ಭಾಗದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಯಿತು.
Vijaya Karnataka 23 Sep 2019, 5:00 am
ಭಟ್ಕಳ: ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲೂಕು ತಂಬಾಕು ತನಿಖಾ ದಳದ ವತಿಯಿಂದ ಭಟ್ಕಳದ ಶಹರ ಭಾಗದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಯಿತು.
ನಿಯಮಬಾಹಿರವಾಗಿ ತಂಬಾಕು ಮಾರಾಟದಲ್ಲಿತೊಡಗಿದ್ದ 13 ಅಂಗಡಿಕಾರರಿಂದ 2200 ರೂ. ದಂಡವನ್ನು ವಸೂಲಿ ಮಾಡಲಾಯಿತು. ತಾಲೂಕು ತಂಬಾಕು ತನಿಖಾ ದಳದ ಕಾರ್ಯಾಚರಣೆಯಲ್ಲಿಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ಎಎಸ್ಐ ಸೋಮರಾಜ್ ರಾಠೋಡ್, ಕಂದಾಯ ನಿರೀಕ್ಷಕ ಶಂಭು, ಜಿಲ್ಲಾತಂಬಾಕು ನಿಯಂತ್ರಣಾ ಸಮಿತಿಯ ಸಲಹೆಗಾರ ಪ್ರೇಮ್ಕುಮಾರ್ ಉಪಸ್ಥಿತರಿದ್ದರು. ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ತಂಬಾಕು ಮಾರಾಟ ಇನ್ನೂ ನಿಷೇಧ ಆಗಿಲ್ಲ. ಆದರೆ ಬಹಿರಂಗ ಮಾರಾಟಕ್ಕೆ ಮಿತಿ ಇದೆ. ನಿಯಮ ಮೀರಿದವರ ವಿರುದ್ಧ ದಂಡ ವಿಧಿಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
ನಿಯಮಬಾಹಿರವಾಗಿ ತಂಬಾಕು ಮಾರಾಟದಲ್ಲಿತೊಡಗಿದ್ದ 13 ಅಂಗಡಿಕಾರರಿಂದ 2200 ರೂ. ದಂಡವನ್ನು ವಸೂಲಿ ಮಾಡಲಾಯಿತು. ತಾಲೂಕು ತಂಬಾಕು ತನಿಖಾ ದಳದ ಕಾರ್ಯಾಚರಣೆಯಲ್ಲಿಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ಎಎಸ್ಐ ಸೋಮರಾಜ್ ರಾಠೋಡ್, ಕಂದಾಯ ನಿರೀಕ್ಷಕ ಶಂಭು, ಜಿಲ್ಲಾತಂಬಾಕು ನಿಯಂತ್ರಣಾ ಸಮಿತಿಯ ಸಲಹೆಗಾರ ಪ್ರೇಮ್ಕುಮಾರ್ ಉಪಸ್ಥಿತರಿದ್ದರು. ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್, ತಂಬಾಕು ಮಾರಾಟ ಇನ್ನೂ ನಿಷೇಧ ಆಗಿಲ್ಲ. ಆದರೆ ಬಹಿರಂಗ ಮಾರಾಟಕ್ಕೆ ಮಿತಿ ಇದೆ. ನಿಯಮ ಮೀರಿದವರ ವಿರುದ್ಧ ದಂಡ ವಿಧಿಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.