ಆ್ಯಪ್ನಗರ

ಪಾದರಕ್ಷೆ ಮಳಿಗೆಗೆ ಬೆಂಕಿ: ಹತೋಟಿಗೆ ಹರಸಾಹಸ

ಶಿರಸಿ : ಶಾರ್ಟ್‌ಸರ್ಕೀಟ್‌ನಿಂದಾಗಿ ತಗುಲಿದ ಬೆಂಕಿಗೆ ಇಲ್ಲಿನ ದೇವಿಕೆರೆ ರಸ್ತೆಯಲ್ಲಿನ ಪಾದರಕ್ಷೆ ಮಳಿಗೆಯೊಂದು ಸಂಪೂರ್ಣ ಸುಟ್ಟು ಸುಮಾರು 35 ಲಕ್ಷ ರೂ.ಗೂ ಹೆಚ್ಚಿನ ಹಾನಿ ಸಂಭವಿಸಿದೆ.

Vijaya Karnataka 25 Apr 2019, 5:00 am
ಶಿರಸಿ : ಶಾರ್ಟ್‌ಸರ್ಕೀಟ್‌ನಿಂದಾಗಿ ತಗುಲಿದ ಬೆಂಕಿಗೆ ಇಲ್ಲಿನ ದೇವಿಕೆರೆ ರಸ್ತೆಯಲ್ಲಿನ ಪಾದರಕ್ಷೆ ಮಳಿಗೆಯೊಂದು ಸಂಪೂರ್ಣ ಸುಟ್ಟು ಸುಮಾರು 35 ಲಕ್ಷ ರೂ.ಗೂ ಹೆಚ್ಚಿನ ಹಾನಿ ಸಂಭವಿಸಿದೆ.
Vijaya Karnataka Web fire to the shoe store strive for control
ಪಾದರಕ್ಷೆ ಮಳಿಗೆಗೆ ಬೆಂಕಿ: ಹತೋಟಿಗೆ ಹರಸಾಹಸ


ರತನ ಬೋರ್ಕರ್‌ ಅವರಿಗೆ ಸೇರಿದ ಪಾದರಕ್ಷೆ ಮಳಿಗೆಗೆ ಬೆಂಕಿ ತಗುಲಿ ಸುಮಾರು 25 ಲಕ್ಷ ರೂ. ಬೆಲೆಯ ಚರ್ಮದ, ರೆಗ್ಝಿನ್‌, ಪ್ಲಾಸ್ಟಿಕ್‌ ಪಾದರಕ್ಷೆಗಳು ಹಾಗೂ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಬೆಳಗ್ಗೆ ನಗರಸಭೆ ಸಿಬ್ಬಂದಿ ಶರತ್‌ ಕಾನಡೆ ಎಂಬವರು ಮಳಿಗೆಯಿಂದ ಒಂದೇ ಸಮನೆ ಹೊಗೆ ಬರುತ್ತಿರುವುದನ್ನು ಗಮನಿಸಿ ಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದಾರೆ. ಅಗ್ನಿ ಶಾಮಕ ದಳದವರು ತಕ್ಷಣವೇ ಸ್ಥಳಕ್ಕೆ ಬಂದು ಎಷ್ಟೇ ಪ್ರಯತ್ನ ನಡೆಸಿದರೂ, ಬೆಂಕಿ ಹತೋಟಿಗೆ ಬರಲಿಲ್ಲ. ಕೊನೆಗೆ ಅಗ್ನಿ ಶಾಮಕ ದಳದವರು ಮಳಿಗೆಯ ಹಿಂದಿನ ಗೋಡೆ ಒಡೆದು ಅಲ್ಲಿಂದ ನೀರು ಹಾಕುವ ಮೂಲಕ ಬೆಂಕಿ ನಿಯಂತ್ರಣಕ್ಕೆ ಪ್ರಯತ್ನ ನಡೆಸಿದರು. ಒಂದು ಕಡೆ ಮಳಿಗೆ ಮುಂದಿನಿಂದ ಇನ್ನೊಂದು ಕಡೆ ಮಳಿಗೆ ಗೋಡೆ ಒಡೆದು ಹಿಂದಿನಿಂದ ಮೂರು ತಾಸು ಕಾರ್ಯಾಚರಣೆ ನಡೆಸಿದರ ಫಲವಾಗಿ ಬೆಂಕಿಯು ನಂದಿತು. ಆದರೆ ಮಳಿಗೆ ಒಳಗಿನ ಪಾದರಕ್ಷೆ, ಪೀಠೋಪಕರಣಗಳೆಲ್ಲ ಸುಟ್ಟು ಕರಕಲಾಗಿವೆ.

ಯುವಕ ಅನುಮಾನಾಸ್ಪದ ಸಾವು : ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕಸ್ತೂರಬಾ ನಗರದಲ್ಲಿ ನಡೆದಿದೆ. ಮೃತನನ್ನು ಅಸ್ಲಾಮ್‌ ಎಂದು ಗುರುತಿಸಲಾಗಿದೆ. ಕಸ್ತೂರಬಾ ನಗರದ ಬಯಲು ಪ್ರದೇಶದಲ್ಲಿ ದೊರೆತ ಈತನ ಮೈ ಮೇಲೆ ರಕ್ತದ ಕಲೆಗಳು ಅಂಟಿಕೊಂಡಿವೆ. ಮೇಲ್ನೋಟಕ್ಕೆ ಕೊಲೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪಂಚ ನಾಮೆ ನಡೆಸಿ ಪೋಸ್ಟ್‌ ಮಾರ್ಟಮ್‌ ನಡೆಸಲು ಸರ್ಕಾರಿ ಆಸ್ಪತ್ರೆಗೆ ಶವ ಹಸ್ತಾಂತರಿಸಿದ್ದಾರೆ. ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ