ಆ್ಯಪ್ನಗರ

ಮೀನುಗಾರರ ದಿಕ್ಕು ತಪ್ಪಿಸುವ ಕಾರ‍್ಯ ಬೇಡ

ಶಿರಸಿ : ಸಾಗರಮಾಲಾ ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಹಾಗೂ ಟ್ಯಾಗೋರ್‌ ಬೀಚ್‌ಗೆ ತೊಂದರೆ ಮಾಡುವ ಉದ್ದೇಶ ಸರಕಾರಕ್ಕಿಲ್ಲ. ಯೋಜನೆಯಿಂದ ಅಪಾಯವಾಗುವುದು ವಾಸ್ತವವಾಗಿದ್ದರೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ, ಆದರೆ ಯಾವುದೇ ಕಾರಣಕ್ಕೂ ಮುಗ್ಧ ಮೀನುಗಾರರನ್ನು ದಿಕ್ಕು ತಪ್ಪಿಸುವ ಕಾರ್ಯ ಯಾರಿಂದಲೂ ಆಗಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

Vijaya Karnataka 19 Jan 2020, 5:00 am
ಶಿರಸಿ : ಸಾಗರಮಾಲಾ ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಹಾಗೂ ಟ್ಯಾಗೋರ್‌ ಬೀಚ್‌ಗೆ ತೊಂದರೆ ಮಾಡುವ ಉದ್ದೇಶ ಸರಕಾರಕ್ಕಿಲ್ಲ. ಯೋಜನೆಯಿಂದ ಅಪಾಯವಾಗುವುದು ವಾಸ್ತವವಾಗಿದ್ದರೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ, ಆದರೆ ಯಾವುದೇ ಕಾರಣಕ್ಕೂ ಮುಗ್ಧ ಮೀನುಗಾರರನ್ನು ದಿಕ್ಕು ತಪ್ಪಿಸುವ ಕಾರ್ಯ ಯಾರಿಂದಲೂ ಆಗಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
Vijaya Karnataka Web fishermen should not be distracted
ಮೀನುಗಾರರ ದಿಕ್ಕು ತಪ್ಪಿಸುವ ಕಾರ‍್ಯ ಬೇಡ


ನಗರದಲ್ಲಿಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಜಿ ಶಾಸಕ ಸತೀಶ ಸೈಲ್‌ ಅವಧಿಯಲ್ಲೇ ಈ ಯೋಜನೆಗೆ ಶಂಕುಸ್ಥಾಪನೆಯಾಗಿದೆ. ಆರ್‌.ವಿ.ದೇಶಪಾಂಡೆ ಅವರೇ ಆಗ ಜಿಲ್ಲಾಉಸ್ತುವಾರಿ ಸಚಿವರಾಗಿದ್ದರು. ಆದರೆ ಈಗ ಸೈಲ್‌ ವಿರೋಧ ಮಾಡುತ್ತಿರುವುದು ಯಾಕೆ ಎಂಬುದು ಅರ್ಥವಾಗಿಲ್ಲಎಂದರು.

ರಾಜಕೀಯ ಕಾರಣಕ್ಕೆ ಮೀನುಗಾರರಿಗೆ ತಪ್ಪು ತಿಳಿವಳಿಕೆ ನೀಡುವ ಕಾರ್ಯ ಆಗಬಾರದು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುತ್ತದೆ. ಎಲ್ಲಮುಖಂಡರು, ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿಯೋಚಿಸಬೇಕು. ಈಗಾಗಲೇ ಮೀನುಗಾರರು, ಮುಖಂಡರಿಗೆ ಸರಕಾರದ ನಿಲುವನ್ನು ಸ್ಪಷ್ಟ ಪಡಿಸಿದೆ ಎಂದರು.

ಬಂದರು ಅಭಿವೃದ್ಧಿಯಿಂದ ಮೀನುಗಾರಿಕೆ, ಪ್ರವಾಸೋದ್ಯಮ, ಟ್ರಾನ್ಸ್‌ಪೋರ್ಟ್‌ ಅಭಿವೃದ್ಧಿಯಾಗುತ್ತದೆ. ಯುವಕರಿಗೆ ಉದ್ಯೋಗ ಸಿಗಬೇಕು ಎಂದಾದರೆ ಇಂತಹ ಯೋಜನೆ ಜಾರಿಯಾಗಬೇಕು ಎಂದು ಹೆಬ್ಬಾರ ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ