ಆ್ಯಪ್ನಗರ

ಮೇ ಆರಂಭದಲ್ಲೇ ಮೀನುಗಾರಿಕೆ ಸ್ಥಗಿತ, ಚಂಡಮಾರುತ ಹೊಡೆತ, ಒಂದೂವರೆ ತಿಂಗಳು ಆದಾಯ ಕಡಿತ

​​ಪ್ರತಿ ಬಾರಿಯೂ ಮೇ ತಿಂಗಳ ಪೂರ್ತಿ ಮೀನುಗಾರಿಕೆ ನಡೆಸಿ ಜೂನ್‌ನಲ್ಲಿ ವರ್ಷದ ದುಡಿಮೆಯ ಲೆಕ್ಕ ಮಾಡಿ ಕಾರ್ಮಿಕರಿಗೆ ಅವರ ಪಾಲು ನೀಡಲಾಗುತ್ತಿತ್ತು. ಈ ವರ್ಷ ಕೆಲವರು ಏಪ್ರಿಲ್‌ ತಿಂಗಳಲ್ಲಿಯೇ ಮೀನುಗಾರಿಕೆ ಸ್ಥಗಿತ ಮಾಡಿ ಕಾರ್ಮಿಕರಿಗೆ ದುಡಿಮೆ ಪಾಲು ಕೊಟ್ಟಿದ್ದಾರೆ.

Vijaya Karnataka Web 19 May 2022, 7:38 am
ಪ್ರಮೋದ ಹರಿಕಾಂತ, ಕಾರವಾರ
Vijaya Karnataka Web ಸಂಗ್ರಹ
ಸಂಗ್ರಹ


ಅಸಾನಿ ಚಂಡಮಾರುತದ ಪರಿಣಾಮ ಅವಧಿಗೂ ಮುನ್ನವೇ ಆಳ ಸಮುದ್ರ ಮೀನುಗಾರಿಕೆ ಸ್ಥಗಿತವಾಗುತ್ತಿದ್ದು, ನೂರಾರು ಕೋಟಿ ರೂ. ಆದಾಯ ಕೈ ತಪ್ಪಿದೆ.

ಪಶ್ಚಿಮ ಕರಾವಳಿಯಲ್ಲಿ ಪ್ರತಿ ವರ್ಷ ಮೇ 30 ರವರೆಗೆ ಮೀನುಗಾರಿಕೆ ನಡೆಯುತ್ತಿತ್ತು. ಈ ಬಾರಿ ಮೇ ಆರಂಭದಿಂದಲೇ ಅಸಾನಿ ಚಂಡಮಾರುತದಿಂದ ಆಳ ಸಮುದ್ರದಲ್ಲಿ ಗಾಳಿ ಅಬ್ಬರ ಸೃಷ್ಟಿಯಾಗಿದೆ. ಈಗಲೂ ಮೀನುಗಾರಿಕೆಗೆ ಆಳ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಅನೇಕ ಬೋಟುಗಳು ಅವಧಿಗೂ ಮುನ್ನವೇ ಈ ವರ್ಷದ ಮೀನುಗಾರಿಕೆ ಸ್ಥಗಿತ ಮಾಡಿವೆ.

ಉತ್ತರ ಕನ್ನಡದಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ! ಮೇ 18ಕ್ಕೆ ರೆಡ್‌ ಅಲರ್ಟ್‌ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಜಿಲ್ಲೆಯ ಜತೆಗೆ ಉಡುಪಿ, ದಕ್ಷಿಣ ಕನ್ನಡ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಮೀನುಗಾರ ಕಾರ್ಮಿಕರಾಗಿ ದುಡಿಯಲು ಹೋಗುತ್ತಾರೆ. ಈಗಾಗಲೇ ತಮಿಳುನಾಡು, ಕೇರಳಗಳಲ್ಲಿ ಮೀನುಗಾರಿಕೆ ಮೇಲೆ ಅಸಾನಿ ಪ್ರಭಾವ ಬೀರಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ವ್ಯತಿರಿಕ್ತ ವಾತಾವರಣ ಇರುವುದರಿಂದ ಮೀನುಗಾರಿಕೆ ಹಂಗಾಮಿನ ಕೊನೆಯ ತಿಂಗಳು ದುಬಾರಿಯಾಗಿದೆ.

ದುಡಿಮೆ ಪಾಲು ಹಂಚಿಕೆ

ಪ್ರತಿ ಬಾರಿಯೂ ಮೇ ತಿಂಗಳ ಪೂರ್ತಿ ಮೀನುಗಾರಿಕೆ ನಡೆಸಿ ಜೂನ್‌ನಲ್ಲಿ ವರ್ಷದ ದುಡಿಮೆಯ ಲೆಕ್ಕ ಮಾಡಿ ಕಾರ್ಮಿಕರಿಗೆ ಅವರ ಪಾಲು ನೀಡಲಾಗುತ್ತಿತ್ತು. ಈ ವರ್ಷ ಕೆಲವರು ಏಪ್ರಿಲ್‌ ತಿಂಗಳಲ್ಲಿಯೇ ಮೀನುಗಾರಿಕೆ ಸ್ಥಗಿತ ಮಾಡಿ ಕಾರ್ಮಿಕರಿಗೆ ದುಡಿಮೆ ಪಾಲು ಕೊಟ್ಟಿದ್ದಾರೆ. ಸದ್ಯ ಬೈತಖೋಲ್‌ ಬಂದರಲ್ಲಿ 7-8 ಬೋಟ್‌ಗಳು ಮಾತ್ರ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿವೆ.

ಜಿಲ್ಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆಯಿಂದಲೇ ವಾರ್ಷಿಕ 900 ಕೋಟಿ ರೂ. ಅಧಿಕ ಮೀನು ಉತ್ಪನ್ನ ಆಗುತ್ತಿತ್ತು. ಸದ್ಯ ಮಾರುಕಟ್ಟೆಗಳಲ್ಲಿ ಮೀನುಗಳೇ ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಕೊನೆಯ ತಿಂಗಳಲ್ಲಿ ಮೀನು ಉತ್ಪಾದನೆ ಕಡಿಮೆಯಾಗಿದೆ.

ಅಂಕೋಲಾದಲ್ಲಿ ಬಂಡಿ ಹಬ್ಬದ ಸಂಭ್ರಮ: ಕೃಷಿ ಕಾರ್ಯಗಳಿಗೆ ಚಾಲನೆ ನೀಡಲು ಕ್ಷಣಗಣನೆ!

ಕಾರ್ಮಿಕರ ಹಿಂದೇಟು

ಸದ್ಯ ಆಳ ಸಮುದ್ರ ಮೀನುಗಾರಿಕೆಯಲ್ಲಿ ಒಡಿಸ್ಸಾ ಸೇರಿ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕಳೆದ ತಿಂಗಳು ಅಸಾನಿ ಚಂಡಮಾರುತ ಪರಿಣಾಮದಿಂದ ಗಾಳಿ ರಭಸವಾಗಿದ್ದಕ್ಕೆ ಹೊರ ರಾಜ್ಯದ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಅವರು ಸದ್ಯಕ್ಕೆ ಮರಳಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ಕಾರ್ಮಿಕರ ಕೊರತೆ ಕೂಡ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ