ಆ್ಯಪ್ನಗರ

ಹಳಿಯಾಳ ಪ್ರವಾಹ ಪೀಡಿತ ; ವಿಶೇಷ ಪ್ಯಾಕೇಜ್‌ ಘೋಷಣೆಗೆ ಆರ್‌ವಿಡಿ ಆಗ್ರಹ

ಹಳಿಯಾಳ : ಹಳಿಯಾಳವನ್ನು ಪ್ರವಾಹ ಪೀಡಿತ ತಾಲೂಕೆಂದು ಘೋಷಿಸಲು ಸರಕಾರವು ಮುಂದಾಗಬೇಕೆಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಆಗ್ರಹಿಸಿದರು.ಪಟ್ಟಣದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ತಾಲೂಕಿನಲ್ಲಿಶೇ. 60ಕ್ಕಿಂತಲೂ ಅಧಿಕ ಪ್ರಮಾಣದಲ್ಲಿಮಳೆಯಾಗಿದೆ. ಇದರಿಂದ

Vijaya Karnataka 15 Sep 2020, 5:00 am
ಹಳಿಯಾಳ : ಹಳಿಯಾಳವನ್ನು ಪ್ರವಾಹ ಪೀಡಿತ ತಾಲೂಕೆಂದು ಘೋಷಿಸಲು ಸರಕಾರವು ಮುಂದಾಗಬೇಕೆಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಆಗ್ರಹಿಸಿದರು.ಪಟ್ಟಣದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ತಾಲೂಕಿನಲ್ಲಿಶೇ. 60ಕ್ಕಿಂತಲೂ ಅಧಿಕ ಪ್ರಮಾಣದಲ್ಲಿಮಳೆಯಾಗಿದೆ. ಇದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿಬೆಳೆದ ಬೆಳೆ ನೆಲಸಮವಾಗಿದೆ. ಅದರ ಜೊತೆಗೆ ನೂರಾರು ಮನೆಗಳು ಬಿದ್ದು ಜನರು ಬೀದಿಗೆ ಬರುವಂತಾಗಿದೆ. ಆದ್ದರಿಂದ ಸರಕಾರವು ತಕ್ಷಣ ಸಮೀಕ್ಷೆ ನಡೆಸಿ ಹಳಿಯಾಳ ತಾಲೂಕನ್ನು ಪ್ರವಾಹ ಪೀಡಿತ ತಾಲೂಕನ್ನಾಗಿ ಘೋಷಿಸಿ ವಿಶೇಷ ಪ್ಯಾಕೇಜ್‌ ಬಿಡುಗಡೆ ಮಾಡುವಂತೆ ಸರಕಾರವನ್ನು ಒತ್ತಾಯಿಸಿದರು.
Vijaya Karnataka Web rv deshpande


ಕೋವಿಡ್‌-19 ನಿಯಂತ್ರಿಸುವಲ್ಲಿಸರಕಾರವು ವಿಫಲವಾಗಿದ್ದು, ಜನರು ಭಯದ ವಾತಾವರಣದಲ್ಲಿಜೀವನ ನಡೆಸುವ ಅನಿವಾರ್ಯತೆ ಉಂಟಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು ಆರ್ಥಿಕತೆ ನೆಲಕಚ್ಚಿದೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ