ಆ್ಯಪ್ನಗರ

ಶಾಂತಿಕಾ ಪರಮೇಶ್ವರಿಗೆ ಪುಷ್ಪಾಲಂಕಾರ

ಕುಮಟಾ : ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿಶುಕ್ರವಾರ ಹೂವಿನ ಪೂಜೆ ವಿಜೃಂಭಣೆಯಿಂದ ನಡೆಯಿತು. ಶ್ರೀದೇವಿಯನ್ನು ಅಸೀನಗೊಳಿಸಿದ ಹೂವಿನ ಮಂಟಪ ಜನಾಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

Vijaya Karnataka 22 Sep 2019, 5:00 am
ಕುಮಟಾ : ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿಶುಕ್ರವಾರ ಹೂವಿನ ಪೂಜೆ ವಿಜೃಂಭಣೆಯಿಂದ ನಡೆಯಿತು. ಶ್ರೀದೇವಿಯನ್ನು ಅಸೀನಗೊಳಿಸಿದ ಹೂವಿನ ಮಂಟಪ ಜನಾಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
Vijaya Karnataka Web florist shantika parameswara
ಶಾಂತಿಕಾ ಪರಮೇಶ್ವರಿಗೆ ಪುಷ್ಪಾಲಂಕಾರ


ಕುಮಟಾ ಗ್ರಾಮ ದೇವತೆ ದೇವರಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿಭಕ್ತರು ನೀಡಿದ ವಿವಿಧ ಜಾತಿಯ ಹೂವುಗಳಿಂದ ದೇವಿಯನ್ನು ಶೃಂಗರಿಸಿ, ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಹೂವುಗಳಿಂದಲೇ ಮಂಟಪ ನಿರ್ಮಿಸಿ, ಅದರಲ್ಲಿಶ್ರೀದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಆಕರ್ಷಣೀಯ ಹೂವಿನ ಮಂಟಪದಲ್ಲಿದೇವಿಯ ದರ್ಶನ ಪಡೆದ ಭಕ್ತರು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.

ಅರಿಷಿನ ಕುಂಕುಮ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸುಂದರ ಹೂವಿನ ಮಂಟಪ ವೀಕ್ಷಿಸಲು ತಾಲೂಕು ಸೇರಿದಂತೆ ನೆರೆಯ ತಾಲೂಕು ಮತ್ತು ಜಿಲ್ಲೆಗಳಿಂದ ಆಗಮಿಸಿದ್ದರು. ದೇವಸ್ಥಾನದಲ್ಲಿಕಂಗೊಳಿಸಿದ ದೀಪಾಲಂಕಾರ ಹೂವಿನ ಮಂಟಪಕ್ಕೆ ಮೆರಗು ನೀಡುತ್ತಿತ್ತು. ಸಂಜೆ ಭಜನೆ ನಡೆಯಿತು ರಾತ್ರಿ ಮಹಾ ಪೂಜೆಯ ಬಳಿಕ ತೀರ್ಥ ಪ್ರಸಾದ ವಿತರಣೆ ನಡೆಯಿತು.

ಸುಮಾರು ಲಕ್ಷ ರೂ. ಮೌಲ್ಯದ ಹೂವುಗಳನ್ನು ಬಳಸಿ ಆಕರ್ಷಕ ಹೂವಿನ ಮಂಟಪವನ್ನು ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿಶ್ರೀ ಶಾಂತಿಕಾ ಪರಮೇಶ್ವರಿ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಪೈ , ಸದಸ್ಯರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ