ಆ್ಯಪ್ನಗರ

ಬಾಲ್ಯದ ಗೆಳೆಯರ ಬಳಗದಿಂದ ಆಹಾರ ಧಾನ್ಯ ವಿತರಣೆ

ಹಿರೇಕೆರೂರು : ಸ್ಥಳೀಯ ಬಾಲ್ಯದ ಗೆಳೆಯರ ಬಳಗದಿಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್‌ ವಿತರಿಸಲು ಶುಕ್ರವಾರ ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿತಹಸೀಲ್ದಾರ್‌ ಆರ್‌.ಎಚ್‌.ಭಾಗವಾನ್‌ ಚಾಲನೆ ನೀಡಿದರು.

Vijaya Karnataka 25 Apr 2020, 5:00 am
ಹಿರೇಕೆರೂರು : ಸ್ಥಳೀಯ ಬಾಲ್ಯದ ಗೆಳೆಯರ ಬಳಗದಿಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್‌ ವಿತರಿಸಲು ಶುಕ್ರವಾರ ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿತಹಸೀಲ್ದಾರ್‌ ಆರ್‌.ಎಚ್‌.ಭಾಗವಾನ್‌ ಚಾಲನೆ ನೀಡಿದರು.
Vijaya Karnataka Web 24HKR 1_23
ಹಿರೇಕೆರೂರಿನ ಬಾಲ್ಯದ ಗೆಳೆಯರ ಬಳಗದಿಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್‌ ವಿತರಿಸಲು ತಹಸೀಲ್ದಾರ್‌ ಆರ್‌.ಎಚ್‌.ಭಾಗವಾನ್‌, ಚಂದ್ರಶೇಖರ್‌ ಉಣಕಲ್‌ ಚಾಲನೆ ನೀಡಿದರು.


ತಾಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್‌ ಉಣಕಲ್‌ ಮಾತನಾಡಿ, ಕೊರೊನಾ ಸೋಂಕು ಹಿನ್ನೆಲೆ ಲಾಕ್‌ಡೌನ್‌ ಆಗಿದ್ದರಿಂದ ಬಡವರು ಕೂಲಿ ಕೆಲಸ ಇಲ್ಲದೇ ಒಪ್ಪತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ ಇಂಥವರ ಹಸಿದ ಹೊಟ್ಟೆಗೆ ಅನ್ನ ನೀಡುವ ಉದ್ದೇಶದಿಂದ ನಾವು ಬಾಲ್ಯದ ಗೆಳೆಯರು ಸೇರಿ ಸುಮಾರು 70 ಸಾವಿರ ರೂ. ಬೆಲೆ ಬಾಳುವ ನೂರು ಆಹಾರ ಧಾನ್ಯ ಕಿಟ್‌ನ್ನು ವಿತರಿಸಿದ್ದೇವೆ ಎಂದು ಹೇಳಿದರು.

ಲಾಕ್‌ಡೌನ್‌ ಮುಂದುವರಿದರೆ ಇನ್ನಷ್ಟು ಬಡವರಿಗೆ ಆಹಾರ ಧಾನ್ಯ ಕಿಟ್‌ನ್ನು ವಿತರಿಸಲು ನಾವು ಸಿದ್ದರಿದ್ದೇವೆ. ಕೊರೊನಾ ವಿರುದ್ದ ಹೋರಾಡುವವರಿಗೆ ನಾವು 500 ಮಾಸ್ಕ್‌ಗಳನ್ನು ತಹಸೀಲ್ದಾರ್‌ಗೆ ನೀಡಿದ್ದೇವೆ ಎಂದು ಹೇಳಿದರು.

ತಾಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಚಂದ್ರಶೇಖರ್‌ ಉಣಕಲ್‌, ದೇವರಾಜ್‌ ಹನುಮ ರೆಡ್ಡೇರ್‌, ವಿನಯ್‌ ಖಾಂಡ್ಕೆ, ಶಶಿಧರ್‌ ಕಂಬಾರ್‌, ಚನ್ನಬಸಪ್ಪ ಚೌಟಗಿ, ನಿರಂಜನ್‌ ಸಣ್ಣಪ್ಪನವರ್‌, ಪ್ರವೀಣ್‌ ಕಡೇಮನಿ, ನವೀನ್‌ ಕುರುಬರ್‌, ಅಖ್ಬರ್‌ ಮನ್ನಂಗಿ ಹಾಗೂ ಬಾಲ್ಯದ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ