ಗೋಕರ್ಣ:ಇಲ್ಲಿಯ ಬಾವಿಕೋಡ್ಲಾದಲ್ಲಿ ಮಂಗಳವಾರ ಮಧ್ಯಾಹ್ನ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನ್ಯೂಯಾರ್ಕ ಮೂಲದ ಪ್ರವಾಸಿಗನೊಬ್ಬನಿಗೆ ಸಾರ್ವಜನಿಕರು ನೆರವಾಗಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಡೇವಿಡ್ ಎನ್ನುವ ವಿದೇಶಿಗ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ, ಸ್ಥಳೀಯರು 108 ಆಂಬ್ಯುಲೆನ್ಸ್ಗೆ ಕರೆಮಾಡಿದರು. ಕೂಡಲೇ 108ರ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೃತಕ ಆಮ್ಲಜನಕ ಪೂರೈಸಿ ಜೀವ ಉಳಿಸಿದ್ದಾರೆ. ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಡಾ. ಜಗದೀಶ ನಾಯ್ಕ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕುಮಟಾಕ್ಕೆ ಕಳಿಸಿದ್ದಾರೆ.
ವಿದೇಶಿ ಪ್ರವಾಸಿಗ ಪ್ರಾಣಾಪಾಯದಿಂದ ಪಾರು
ಗೋಕರ್ಣ:ಇಲ್ಲಿಯ ಬಾವಿಕೋಡ್ಲಾದಲ್ಲಿ ಮಂಗಳವಾರ ಮಧ್ಯಾಹ್ನ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನ್ಯೂಯಾರ್ಕ ಮೂಲದ ಪ್ರವಾಸಿಗನೊಬ್ಬನಿಗೆ ಸಾರ್ವಜನಿಕರು ನೆರವಾಗಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಡೇವಿಡ್ ಎನ್ನುವ ವಿದೇಶಿಗ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ, ಸ್ಥಳೀಯರು 108 ಆಂಬ್ಯುಲೆನ್ಸ್ಗೆ ಕರೆಮಾಡಿದರು. ಕೂಡಲೇ 108ರ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೃತಕ ಆಮ್ಲಜನಕ ಪೂರೈಸಿ ಜೀವ ಉಳಿಸಿದ್ದಾರೆ. ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಡಾ. ಜಗದೀಶ ನಾಯ್ಕ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕುಮಟಾಕ್ಕೆ ಕಳಿಸಿದ್ದಾರೆ.
Vijaya Karnataka 27 Feb 2019, 5:00 am