ಆ್ಯಪ್ನಗರ

ಭಾರತೀಯ ಸಂಸ್ಕೃತಿಯತ್ತ ವಿದೇಶಿಗರ ಒಲವು

ಗೋಕರ್ಣ : ಒಂದೆಡೆ ನಮ್ಮವರು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದರೆ ಇನ್ನೊಂದೆಡೆ ವಿದೇಶಿಗರು ನಮ್ಮ ಸಂಸ್ಕೃತಿ ಆಚರಣೆಯತ್ತ ಒಲವು ತೋರಿಸುತ್ತಿದ್ದಾರೆ. ವಿದೇಶಿಗರಿಗೆ ನಮ್ಮ ಆಚಾರ ವಿಚಾರಗಳನ್ನು ತಿಳಿಸಿ ಅವರಿಗೆ ಲಿಂಗ ದೀಕ್ಷೆ ನೀಡುವ ಕಾರ್ಯವನ್ನು ಕಾಶಿ ಜಂಗಮ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಕಳೆದ 18ವರ್ಷಗಳಿಂದ ಮಾಡುತ್ತ ಬಂದಿರುವುದು ಇದಕ್ಕೊಂದು ಉದಾಹರಣೆ. ಕಳೆದ ಎರಡು ವರ್ಷಗಳಿಂದ ಪುಣ್ಯ ಕ್ಷೇತ್ರದಲ್ಲಿ ಲಿಂಗ ದೀಕ್ಷೆ ನೀಡುತ್ತಾ ಬಂದಿದ್ದು ಅದರಂತೆ ಮಂಗಳವಾರ 50ಕ್ಕೂ ಹೆಚ್ಚು ರಷ್ಯನ್ನರಿಗೆ ಲಿಂಗ ದೀಕ್ಷೆ ನೀಡಲಾಯಿತು. ಇಲ್ಲಿನ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ಉಪದೇಶ ಕಾರ್ಯಕ್ರಮ ನಡೆಯಿತು. ಇದಕ್ಕೂ ಪೂರ್ವದಲ್ಲಿ ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆæ ಹೂಹಾರಹಾಕಿ ಶ್ರೀಗಳನ್ನು ಬರಮಾಡಿಕೊಂಡರು. ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಆವಾರದಲ್ಲಿ ಲಿಂಗ ದೀಕ್ಷೆ ನೀಡಲಾಯಿತು. ಮಹಾಬಲೇಶ್ವರ ದೇವಸ್ಥಾನದಿಂದ ಶ್ರೀಗಳಿಗೆ ಪೂಜಾ ಕೈಂಕರ್ಯ ವ್ಯವಸ್ಥೆ ಮಾಡಲಾಗಿತ್ತು, ಅಲ್ಲದೆ ಶಿಷ್ಯವರರ್ಗದವರಿಗೆ ಅಮೃತಾನ್ನ ವಿಭಾಗದಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.

Vijaya Karnataka 27 Mar 2019, 5:00 am
ಗೋಕರ್ಣ : ಒಂದೆಡೆ ನಮ್ಮವರು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದರೆ ಇನ್ನೊಂದೆಡೆ ವಿದೇಶಿಗರು ನಮ್ಮ ಸಂಸ್ಕೃತಿ ಆಚರಣೆಯತ್ತ ಒಲವು ತೋರಿಸುತ್ತಿದ್ದಾರೆ. ವಿದೇಶಿಗರಿಗೆ ನಮ್ಮ ಆಚಾರ ವಿಚಾರಗಳನ್ನು ತಿಳಿಸಿ ಅವರಿಗೆ ಲಿಂಗ ದೀಕ್ಷೆ ನೀಡುವ ಕಾರ್ಯವನ್ನು ಕಾಶಿ ಜಂಗಮ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಕಳೆದ 18ವರ್ಷಗಳಿಂದ ಮಾಡುತ್ತ ಬಂದಿರುವುದು ಇದಕ್ಕೊಂದು ಉದಾಹರಣೆ. ಕಳೆದ ಎರಡು ವರ್ಷಗಳಿಂದ ಪುಣ್ಯ ಕ್ಷೇತ್ರದಲ್ಲಿ ಲಿಂಗ ದೀಕ್ಷೆ ನೀಡುತ್ತಾ ಬಂದಿದ್ದು ಅದರಂತೆ ಮಂಗಳವಾರ 50ಕ್ಕೂ ಹೆಚ್ಚು ರಷ್ಯನ್ನರಿಗೆ ಲಿಂಗ ದೀಕ್ಷೆ ನೀಡಲಾಯಿತು. ಇಲ್ಲಿನ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ಉಪದೇಶ ಕಾರ್ಯಕ್ರಮ ನಡೆಯಿತು. ಇದಕ್ಕೂ ಪೂರ್ವದಲ್ಲಿ ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆæ ಹೂಹಾರಹಾಕಿ ಶ್ರೀಗಳನ್ನು ಬರಮಾಡಿಕೊಂಡರು. ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಆವಾರದಲ್ಲಿ ಲಿಂಗ ದೀಕ್ಷೆ ನೀಡಲಾಯಿತು. ಮಹಾಬಲೇಶ್ವರ ದೇವಸ್ಥಾನದಿಂದ ಶ್ರೀಗಳಿಗೆ ಪೂಜಾ ಕೈಂಕರ್ಯ ವ್ಯವಸ್ಥೆ ಮಾಡಲಾಗಿತ್ತು, ಅಲ್ಲದೆ ಶಿಷ್ಯವರರ್ಗದವರಿಗೆ ಅಮೃತಾನ್ನ ವಿಭಾಗದಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.
Vijaya Karnataka Web KWR-26 GKN 2 A


ದೀಕ್ಷಾ ಕಾರ್ಯಕ್ರಮ ನಡೆದು ಬಂದಿದ್ದು ಹೀಗೆ.. : ಶ್ರೀಗಳು ಇಂಗ್ಲಿಷ್‌ ಭಾಷೆಯಲ್ಲಿ ರಚಿಸಿದ ಚಂದ್ರಜ್ಞಾನ ಆಗಮ ಗ್ರಂಥವನ್ನು ರಷ್ಯಾದ ಯೋಗ ಉಪನ್ಯಾಸಕ ಡ್ಯಾನಿಷ ಓದಿದರು. ಇದರಿಂದ ಪ್ರೇರಿತರಾದ ಡ್ಯಾನಿಷ್‌ ಶಿವಯೋಗದ ಬಗ್ಗೆ ತಿಳಿಯುವ ಹಂಬಲದಿಂದ 2002ರಲ್ಲಿ ಕಾಶಿ ಜಂಗಮ ಮಠಕ್ಕೆ ಬಂದು ಶ್ರೀಗಳ ಜೊತೆ ಮಾತನಾಡಿ ಲಿಂಗ ಪೂಜೆ , ದೀಕ್ಷೆ ಪಡೆಯವ ಇಂಗಿತ ವ್ಯಕ್ತಪಡಿಸಿದರು. ಅದರಂತೆ ದೀಕ್ಷೆ ಪಡೆದು ತಮ್ಮ ಹೆಸರನ್ನು ಸಹ ದಿನೇಶ ಎಂದು ಬದಲಿಸಿಕೊಂಡಿದ್ದು, ಜೊತೆಯಲ್ಲಿ ಪತ್ನಿ ತಾಯಿ ಸಹ ಇವರ ಮಾರ್ಗದಲ್ಲಿ ನಡೆದರು. ಇವರು ಕೋರಿಕೆ ಮೆರೆಗೆ ಶ್ರೀಗಳು 2010ರಲ್ಲಿ ರಷ್ಯಾಕ್ಕೆ ಭೇಟಿ ನೀಡಿ ಶಿವಯೋಗ , ಶಿವ ಸಿದ್ಧಾಂತ ಕುರಿತು ಉಪನ್ಯಾಸ ನೀಡಿದರು. ಈಗಲೂ ಸಾಮೂಹಿಕ ಲಿಂಗ ಪೂಜೆ , ಶಿವಯೋಗ ಕುರಿತು ಕಾರ್ಯಕ್ರಮಗಳು ನಡೆಯುತ್ತಿವೆ.

17ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾರ್ಯಕ್ರಮ ಕಾಶಿ, ಪಾಟ್ನಾ, ಸೇರಿದಂತೆ ವಿವಿಧ ಕಡೆಗಳಲ್ಲಿ 3000ಕ್ಕೂ ಹೆಚ್ಚು ಜನ ಕಾಶಿ ಶ್ರೀಗಳಿಂದ ಲಿಂಗ ದೀಕ್ಷೆ ಪಡೆದಿದ್ದಾರೆ. ದೀಕ್ಷಾ ವಿಧಿಯನ್ನು ದಿನೇಶ ( ಡ್ಯಾನಿಶ್‌ ) ಭಾಷಾಂತರಿಸುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ