ಮುಂಡಗೋಡ : ಅರಣ್ಯ ಸಿಬ್ಬಂದಿಗೆ ತಾಳ್ಮೆಯಿಂದ ಕೆಲಸ ಮಾಡಲು ಸೂಚನೆ ನೀಡಿ. ತಾಲೂಕಿನ ಜನರು ಬಡವರು, ಮುಗ್ಧರು ಇದ್ದಾರೆ. ಅವರನ್ನು ಹೆದರಿಸಬೇಡಿ. ತಪ್ಪು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಿ ಎಂದು ಜಿ.ಪಂ. ಸದಸ್ಯ ರವಿಗೌಡ ಪಾಟೀಲ್ ಅರಣ್ಯ ಅಧಿಕಾರಿಗೆ ಸೂಚನೆ ನೀಡಿದರು.
ಇಲ್ಲಿನ ತಾ.ಪಂ.ಸಭಾಭವನದಲ್ಲಿಶನಿವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿಅರಣ್ಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಅವರನ್ನು ಬೇಕಾದ್ರೆ ಮಾತನಾಡಿಸಬಹುದು. ಈ ಉಪವಲಯ ಅರಣ್ಯ ಅಧಿಕಾರಿಗಳನ್ನು ಮಾತನಾಡಿಸುವುದು ಕಷ್ಟವಾಗಿದೆ ಎಂದು ಹರಿಹಾಯ್ದರು.
ಸುಪ್ರೀಂ ಕೋರ್ಟ್ ಅಕೇಶಿಯಾ ಬ್ಯಾನ್ ಮಾಡಿದ್ದರೂ, ತಾಲೂಕಿನಲ್ಲಿಅರಣ್ಯ ನಿಗಮದವರು ನೂರಾರು ಎಕರೆಯಲ್ಲಿಅಕೇಶಿಯಾ ಬೆಳೆಯುತ್ತಿದ್ದಾರೆ. ಇವರಿಗೆ ಕಾನೂನು ಅನ್ವಯವಾಗಲ್ಲವೇ ಎಂದು ಪ್ರಶ್ನಿಸಿದರು.
ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿತಾಲೂಕಿನಲ್ಲಿಕೈಗೊಂಡಿರುವ ಪ್ಲಾಂಟೇಶನ್ ವಸ್ತುಸ್ಥಿತಿ ಜನಪ್ರತಿನಿಧಿಗಳಿಗೆ ಗೊತ್ತಾಗಬೇಕಿದೆ. ಮಾಧ್ಯಮದವರನ್ನು ಕರೆದುಕೊಂಡು ಒಂದು ದಿನ ಪ್ಲಾಂಟೇಶನ್ ವೀಕ್ಷಣೆಗೆ ದಿನ ನಿಗದಿ ಪಡಿಸಿ ಎಂದು ಜಿ.ಪಂ. ಸದಸ್ಯ ಎಲ್.ಟಿ.ಪಾಟೀಲ್ ಹೇಳಿದರು.
ಸಣ್ಣಪುಟ್ಟ ಸಮಸ್ಯೆ ಇದ್ದಾಗ ಫಾರೆಸ್ಟರ್ಗಳಿಗೆ ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ. ಮಾತನಾಡುವುದಿಲ್ಲ. ಹೀಗೇಕೆ ? ಎಂದು ಆಕ್ರೋಶದಿಂದ ಹೇಳಿದರು.
ತಾಲೂಕಿನ ಎಲ್ಲಕಡೆ ರಸ್ತೆಗಳಲ್ಲಿಗುಂಡಿಗಳು ತುಂಬಿವೆ. ಆದಷ್ಟು ಬೇಗ ದುರಸ್ತಿ ಮಾಡಿಸಬೇಕು. ಕೇವಲ ಮಣ್ಣು ಹಾಕಿದರೆ ಸಾಲದು. ತೀರಾ ಹದಗೆಟ್ಟಿರುವ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು. ನೆರೆ ಪರಿಹಾರದ ಹಣದಲ್ಲಿಶೇ.60 ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಬಳಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ ಎಂದು ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ್ ಹೇಳಿದರು.
ಶಿಡ್ಲಗುಂಡಿ ಸೇತುವೆ ಹಾನಿಯಿಂದ ಸಂಪರ್ಕ ಕಡಿತಗೊಂಡಿದ್ದು, ತಾತ್ಕಾಲಿಕವಾಗಿ ಡೇವಿಯೇಶನ್ ರಸ್ತೆ ನಿರ್ಮಿಸಲಾಗಿದೆ. ಭಾನುವಾರ ಸಂಚಾರಕ್ಕೆ ಮುಕ್ತವಾಗಲಿದೆ. ಶಿಡ್ಲಗುಂಡಿ ಸೇತುವೆ ನಿರ್ಮಾಣಕ್ಕೆ 2.62 ಕೋಟಿ ರೂ. ವುಂಜೂರಿಯಾಗಿದೆ. ಸನವಳ್ಳಿ ಹಾಗೂ ಮೈನಳ್ಳಿ ಸೇತುವೆ ನಿರ್ಮಾಣದ ಪ್ರಸ್ತಾಪಕ್ಕೆ ತಾಂತ್ರಿಕ ಅಡಚಣೆ ಆಗಿದ್ದು, ಅದನ್ನು ಸರಿಪಡಿಸಿ ಆ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗುವ ಭರವಸೆ ಇದೆ ಎಂದು ಲೋಕೋಪಯೋಗಿ ಎಇಇ ಬಿ.ಆರ್.ದಯಾನಂದ ಹೇಳಿದರು.
ತಾಲೂಕಿನಲ್ಲಿವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಗೋವಿನಜೋಳದ ಬೆಳೆ ಇನ್ನೊಂದು ವಾರದಲ್ಲಿಕಟಾವಿಗೆ ಬರಲಿದ್ದು, ಇಳುವರಿ ಕುಂಠಿತಗೊಂಡಿದೆ. ಗೋವಿನಜೋಳದ ಬೆಳೆ ಹೆಚ್ಚು ಹಾನಿಯಾಗಿರುವುದು ಕಂಡು ಬಂದಿದೆ. ಭತ್ತಕ್ಕೆ ಬೆಂಕಿ ರೋಗದ ಬಾಧೆ ಕಂಡು ಬಂದಿದ್ದು ಅಗತ್ಯ ಸಲಹೆ ನೀಡಲಾಗಿದೆ. ದೀಪಾವಳಿ ಒಳಗೆ ತಾಡಪತ್ರಿಗಳನ್ನು ರೈತರಿಗೆ ವಿತರಿಸಲಾಗುವುದು ಎಂದು ಕೃಷಿ ಅಧಿಕಾರಿ ಎಂ.ಎಸ್.ಕುಲಕರ್ಣಿ ಹೇಳಿದರು.
ಹನಿನೀರಾವರಿ ಯೋಜನೆಗೆ ಈ ಸಲ 72 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಆಗಸ್ಟ್ ಮಳೆಗೆ 103 ಜನರ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಎಲ್ಲಮಾಹಿತಿಯನ್ನು ಕಳಿಸಲಾಗಿದೆ ಎಂದು ತೋಟಗಾರಿಕಾ ಅಧಿಕಾರಿ ನಾಗಾರ್ಜುನಗೌಡ ಹೇಳಿದರು.
ತಾ.ಪಂ.ಅಧ್ಯಕ್ಷೆ ದಾಕ್ಷಾಯಿಣಿ ಸುರಗಿಮಠ, ಜಿ.ಪಂ.ಸದಸ್ಯೆ ಜಯಮ್ಮ ಕೃಷ್ಣ ಹಿರೇಹಳ್ಳಿ, ಇಒ ಪ್ರವೀಣ ಕಟ್ಟಿ, ತಾ.ಪಂ.ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇಲ್ಲಿನ ತಾ.ಪಂ.ಸಭಾಭವನದಲ್ಲಿಶನಿವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿಅರಣ್ಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಅವರನ್ನು ಬೇಕಾದ್ರೆ ಮಾತನಾಡಿಸಬಹುದು. ಈ ಉಪವಲಯ ಅರಣ್ಯ ಅಧಿಕಾರಿಗಳನ್ನು ಮಾತನಾಡಿಸುವುದು ಕಷ್ಟವಾಗಿದೆ ಎಂದು ಹರಿಹಾಯ್ದರು.
ಸುಪ್ರೀಂ ಕೋರ್ಟ್ ಅಕೇಶಿಯಾ ಬ್ಯಾನ್ ಮಾಡಿದ್ದರೂ, ತಾಲೂಕಿನಲ್ಲಿಅರಣ್ಯ ನಿಗಮದವರು ನೂರಾರು ಎಕರೆಯಲ್ಲಿಅಕೇಶಿಯಾ ಬೆಳೆಯುತ್ತಿದ್ದಾರೆ. ಇವರಿಗೆ ಕಾನೂನು ಅನ್ವಯವಾಗಲ್ಲವೇ ಎಂದು ಪ್ರಶ್ನಿಸಿದರು.
ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿತಾಲೂಕಿನಲ್ಲಿಕೈಗೊಂಡಿರುವ ಪ್ಲಾಂಟೇಶನ್ ವಸ್ತುಸ್ಥಿತಿ ಜನಪ್ರತಿನಿಧಿಗಳಿಗೆ ಗೊತ್ತಾಗಬೇಕಿದೆ. ಮಾಧ್ಯಮದವರನ್ನು ಕರೆದುಕೊಂಡು ಒಂದು ದಿನ ಪ್ಲಾಂಟೇಶನ್ ವೀಕ್ಷಣೆಗೆ ದಿನ ನಿಗದಿ ಪಡಿಸಿ ಎಂದು ಜಿ.ಪಂ. ಸದಸ್ಯ ಎಲ್.ಟಿ.ಪಾಟೀಲ್ ಹೇಳಿದರು.
ಸಣ್ಣಪುಟ್ಟ ಸಮಸ್ಯೆ ಇದ್ದಾಗ ಫಾರೆಸ್ಟರ್ಗಳಿಗೆ ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ. ಮಾತನಾಡುವುದಿಲ್ಲ. ಹೀಗೇಕೆ ? ಎಂದು ಆಕ್ರೋಶದಿಂದ ಹೇಳಿದರು.
ತಾಲೂಕಿನ ಎಲ್ಲಕಡೆ ರಸ್ತೆಗಳಲ್ಲಿಗುಂಡಿಗಳು ತುಂಬಿವೆ. ಆದಷ್ಟು ಬೇಗ ದುರಸ್ತಿ ಮಾಡಿಸಬೇಕು. ಕೇವಲ ಮಣ್ಣು ಹಾಕಿದರೆ ಸಾಲದು. ತೀರಾ ಹದಗೆಟ್ಟಿರುವ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು. ನೆರೆ ಪರಿಹಾರದ ಹಣದಲ್ಲಿಶೇ.60 ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಬಳಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ ಎಂದು ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ್ ಹೇಳಿದರು.
ಶಿಡ್ಲಗುಂಡಿ ಸೇತುವೆ ಹಾನಿಯಿಂದ ಸಂಪರ್ಕ ಕಡಿತಗೊಂಡಿದ್ದು, ತಾತ್ಕಾಲಿಕವಾಗಿ ಡೇವಿಯೇಶನ್ ರಸ್ತೆ ನಿರ್ಮಿಸಲಾಗಿದೆ. ಭಾನುವಾರ ಸಂಚಾರಕ್ಕೆ ಮುಕ್ತವಾಗಲಿದೆ. ಶಿಡ್ಲಗುಂಡಿ ಸೇತುವೆ ನಿರ್ಮಾಣಕ್ಕೆ 2.62 ಕೋಟಿ ರೂ. ವುಂಜೂರಿಯಾಗಿದೆ. ಸನವಳ್ಳಿ ಹಾಗೂ ಮೈನಳ್ಳಿ ಸೇತುವೆ ನಿರ್ಮಾಣದ ಪ್ರಸ್ತಾಪಕ್ಕೆ ತಾಂತ್ರಿಕ ಅಡಚಣೆ ಆಗಿದ್ದು, ಅದನ್ನು ಸರಿಪಡಿಸಿ ಆ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗುವ ಭರವಸೆ ಇದೆ ಎಂದು ಲೋಕೋಪಯೋಗಿ ಎಇಇ ಬಿ.ಆರ್.ದಯಾನಂದ ಹೇಳಿದರು.
ತಾಲೂಕಿನಲ್ಲಿವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಗೋವಿನಜೋಳದ ಬೆಳೆ ಇನ್ನೊಂದು ವಾರದಲ್ಲಿಕಟಾವಿಗೆ ಬರಲಿದ್ದು, ಇಳುವರಿ ಕುಂಠಿತಗೊಂಡಿದೆ. ಗೋವಿನಜೋಳದ ಬೆಳೆ ಹೆಚ್ಚು ಹಾನಿಯಾಗಿರುವುದು ಕಂಡು ಬಂದಿದೆ. ಭತ್ತಕ್ಕೆ ಬೆಂಕಿ ರೋಗದ ಬಾಧೆ ಕಂಡು ಬಂದಿದ್ದು ಅಗತ್ಯ ಸಲಹೆ ನೀಡಲಾಗಿದೆ. ದೀಪಾವಳಿ ಒಳಗೆ ತಾಡಪತ್ರಿಗಳನ್ನು ರೈತರಿಗೆ ವಿತರಿಸಲಾಗುವುದು ಎಂದು ಕೃಷಿ ಅಧಿಕಾರಿ ಎಂ.ಎಸ್.ಕುಲಕರ್ಣಿ ಹೇಳಿದರು.
ಹನಿನೀರಾವರಿ ಯೋಜನೆಗೆ ಈ ಸಲ 72 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಆಗಸ್ಟ್ ಮಳೆಗೆ 103 ಜನರ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಎಲ್ಲಮಾಹಿತಿಯನ್ನು ಕಳಿಸಲಾಗಿದೆ ಎಂದು ತೋಟಗಾರಿಕಾ ಅಧಿಕಾರಿ ನಾಗಾರ್ಜುನಗೌಡ ಹೇಳಿದರು.
ತಾ.ಪಂ.ಅಧ್ಯಕ್ಷೆ ದಾಕ್ಷಾಯಿಣಿ ಸುರಗಿಮಠ, ಜಿ.ಪಂ.ಸದಸ್ಯೆ ಜಯಮ್ಮ ಕೃಷ್ಣ ಹಿರೇಹಳ್ಳಿ, ಇಒ ಪ್ರವೀಣ ಕಟ್ಟಿ, ತಾ.ಪಂ.ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.