ಆ್ಯಪ್ನಗರ

ಉಚಿತ ಕಬ್ಬಿನ ಹಾಲು ವಿತರಣೆ

ಕಾರವಾರ : ನರೇಂದ್ರ ಮೋದಿ ಅವರು ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ನಿಮಿತ್ತ ನಗರದಲ್ಲಿ ವ್ಯಾಪಾರಿಯೊಬ್ಬರು ಸಾರ್ವಜನಿಕರಿಗೆ ಉಚಿತವಾಗಿ ಕಬ್ಬಿನ ಹಾಲನ್ನು ನೀಡಿ ಸಂಭ್ರಮಿಸಿದರು.

Vijaya Karnataka 31 May 2019, 5:00 am
ಕಾರವಾರ : ನರೇಂದ್ರ ಮೋದಿ ಅವರು ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ನಿಮಿತ್ತ ನಗರದಲ್ಲಿ ವ್ಯಾಪಾರಿಯೊಬ್ಬರು ಸಾರ್ವಜನಿಕರಿಗೆ ಉಚಿತವಾಗಿ ಕಬ್ಬಿನ ಹಾಲನ್ನು ನೀಡಿ ಸಂಭ್ರಮಿಸಿದರು.
Vijaya Karnataka Web free cane milk delivery
ಉಚಿತ ಕಬ್ಬಿನ ಹಾಲು ವಿತರಣೆ


ಕಾರವಾರದ ಗ್ರೀನ್‌ ಸ್ಟ್ರೀಟ್‌ನಲ್ಲಿ ಓಂ ಫ್ಯಾನ್ಸಿ ಸ್ಟೋರ್‌ನ ಮಾಲೀಕ ಪ್ರಶಾಂತ ಪೆಡ್ನೇಕರ್‌ ಕಬ್ಬಿನ ಹಾಲು ವಿತರಿಸಿ ಸಂತಸ ಹಂಚಿಕೊಂಡರು. ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿರುವ ಪ್ರಶಾಂತ್‌ ಕೆಲ ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿಯೂ ಕೆಲಸ ಮಾಡುತ್ತಿದ್ದಾರೆ.

ಸಂಭ್ರಮಾಚರಣೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಪ್ರಶಾಂತ, ಕಳೆದ ಐದು ವರ್ಷದಲ್ಲಿ ಮೋದಿಯವರು ಹಿಂದುಳಿದ ವರ್ಗದವರ ಪರವಾಗಿ ಸಾಕಷ್ಟು ಯೋಜನೆ ತಂದಿದ್ದಾರೆ. ಅವರ ಕಾರ್ಯವೈಖರಿ ಇಷ್ಟ. ಈ ಹಿನ್ನೆಲೆಯಲ್ಲಿ ಮೋದಿಯವರ ಅಪ್ಪಟ ಅಭಿಮಾಯಾಗಿದ್ದೇನೆ ಎನ್ನುತ್ತಾರೆ.

ಈ ಬಾರಿ ಮೋದಿಯವರು ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸವನ್ನು ಪ್ರಶಾಂತ ವ್ಯಕ್ತಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ