ಆ್ಯಪ್ನಗರ

ವೈಟಿಎಸ್‌ಎಸ್‌ ಶಾಲೆಯಲ್ಲಿಶಾರದೆ ಪೂರ್ತಿ ಪ್ರತಿಷ್ಠಾಪನೆ

ಯಲ್ಲಾಪುರ : ಪಟ್ಟಣದ ವೈಟಿಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿಶಾರದಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

Vijaya Karnataka 10 Oct 2019, 5:00 am
ಯಲ್ಲಾಪುರ : ಪಟ್ಟಣದ ವೈಟಿಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿಶಾರದಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
Vijaya Karnataka Web 37528 YLP 3_24


ಇಂಗ್ಲಿಷ್‌ ಮಾಧ್ಯಮ ಶಾಲೆಯ ಮಧ್ಯದಲ್ಲಿರುವ ಲಾನ್‌ನಲ್ಲಿನಿರ್ಮಿಸಲಾದ ಆಕರ್ಷಕ ಗುಡಿಯಲ್ಲಿವಿದ್ಯಾದಿದೇವತೆ ಶಾರದೆಯ ಕಟ್ಟಿಗೆಯ ಸುಂದರ ಶಾಶ್ವತ ಮೂರ್ತಿಯನ್ನು ಧಾರ್ಮಿಕ ಕಾರ್ಯಗಳೊಂದಿಗೆ ಅರ್ಚಕ ನಾರಾಯಣ ಭಟ್ಟ ಪ್ರತಿಷ್ಠಾಪಿಸಿದರು.

ಈ ಸಂದರ್ಭದಲ್ಲಿಸಂಸ್ಥೆಯ ಅಧ್ಯಕ್ಷ ಗಜಾನನ ಭಟ್ಟ ಮಾತನಾಡಿ, ವಿದ್ಯಾದಿದೇವತೆ ಶಾರದೆಯ ಕೃಪಾಕಟಾಕ್ಷ ನಮ್ಮ ವಿದ್ಯಾರ್ಥಿಗಳ ಮೇಲೆ ಸದಾ ಇರಲಿ. ಪ್ರತಿನಿತ್ಯ ನಮ್ಮ ವಿದ್ಯಾರ್ಥಿಗಳು ಶಾರದಾ ದೇವಿಗೆ ನಮಿಸಿ ಶಿಕ್ಷಣ ಆರಂಭಿಸಲಿ ಎಂಬ ಉದ್ದೇಶದಿಂದ ಶಾಲೆಯ ಆವಾರದಲ್ಲಿಶಾರದಾ ದೇವಿಯ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ ಎಂದರು.

ಮಾಜಿ ಶಾಸಕ ಶಿವರಾಂ ಹೆಬ್ಬಾರ, ವಿಜಯ್‌ ಮಿರಾಶಿ, ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ, ಸಹಕಾರ್ಯದರ್ಶಿ ರವಿ ಶಾನಭಾಗ, ನಿರ್ದೆಶಕರಾದ ರಾಜನ್‌ ಬಾಳಗಿ, ಬಾಲಕೃಷ್ಣ ನಾಯಕ, ನಾಗರಾಜ ಮದ್ಗುಣಿ, ವಿನಾಯಕ ಪೈ, ಪ್ರಾಂಶುಪಾಲ ಜೈರಾಮ ಗುನಗಾ, ಉಪ ಪ್ರಾಂಶುಪಾಲ ಸಿ.ಎಚ್‌.ಹಳ್ಳಿ, ಮುಖ್ಯಾದ್ಯಾಪಕಿ ಶೈಲಜಾ ಮಾಪ್ಸೇಕರ್‌, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿತೆರೆದ ಜೀಪಿನಲ್ಲಿಮೆರವಣಿಗೆಯಲ್ಲಿಮೂರ್ತಿಯನ್ನು ಕರೆತರಲಾಯಿತು. ಶಾರದಾ ಮೂರ್ತಿಯನ್ನು ಶಿವಣಿ ಕಟ್ಟಿಗೆಯಲ್ಲಿಸುಂದರವಾಗಿ ನಿರ್ಮಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ