ಆ್ಯಪ್ನಗರ

ಬಂದ್‌, ಪ್ರತಿಭಟನೆ ನಡುವೆ ಕಾರವಾರದಲ್ಲಿ ಮತ್ತಷ್ಟು ಬಂದರು ಅಭಿವೃದ್ಧಿ

ಸಾಗರಮಾಲಾ ಯೋಜನೆಯಲ್ಲಿ ಬೇಲೇಕೇರಿಯಲ್ಲಿ ಹೊಸ ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರ ಈಗಾಗಲೇ 2,783 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಹೊನ್ನಾವರದ ಕಾಸರಕೋಡು ಬಳಿ 700 ಕೋಟಿ ರೂ. ವೆಚ್ಚದಲ್ಲಿ ಬಂದರು ಅಭಿವೃದ್ಧಿಗೆ ಚಿಂತನೆ ನಡೆದಿದೆ.

Vijaya Karnataka 16 Jan 2020, 8:31 pm

ಬೆಂಗಳೂರು: ಸಾಗರಮಾಲಾ ಯೋಜನೆ ಅನ್ವಯ ಉತ್ತರ ಕನ್ನಡ ಜಿಲ್ಲೆಯ ಇನ್ನಷ್ಟು ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದ್ದು, ಒಟ್ಟು 1200 ಕೋಟಿ ರೂ. ವೆಚ್ಚದಲ್ಲಿ ಬಂದರು ಅಭಿವೃದ್ಧಿ ಕಾಮಗಾರಿಗಳು ಭವಿಷ್ಯದಲ್ಲಿ ನಡೆಯಲಿವೆ.
Vijaya Karnataka Web Karwar Harbour


ಮೀನುಗಾರಿಕಾ ಸಚಿವಾಲಯ ಮೂಲಗಳಿಂದ ಈ ಮಾಹಿತಿ ತಿಳಿದು ಬಂದಿದ್ದು, ಕಾರವಾರದ ಜತೆಗೆ ಇನ್ನಷ್ಟು ಬಂದರು ಅಭಿವೃದ್ಧಿ ಕಾರ್ಯಗಳಿಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲುದಾರಿಕೆಯಲ್ಲಿಈ ಕಾಮಗಾರಿಗಳು ಆರಂಭವಾಗಬೇಕಿದೆ. ಹೀಗಾಗಿ ರಾಜ್ಯ ಸರಕಾರ ತನ್ನ ಪಾಲು ನೀಡುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್‌, ಕಾರವಾರ ಶಾಸಕಿ ರೂಪಾಲಿ ನಾಯ್ಕ್‌ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಸಾಗರಮಾಲಾ ವಿರುದ್ಧ 4ನೇ ದಿನವೂ ಮುಂದುವರಿದ ಪ್ರತಿಭಟನೆ, ಕಾರವಾರ ಸಂಪೂರ್ಣ ಬಂದ್‌

ಸಾಗರಮಾಲಾ ಯೋಜನೆಯಲ್ಲಿ ಬೇಲೇಕೇರಿಯಲ್ಲಿ ಹೊಸ ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರ ಈಗಾಗಲೇ 2,783 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಹೊನ್ನಾವರದ ಕಾಸರಕೋಡು ಬಳಿ 700 ಕೋಟಿ ರೂ. ವೆಚ್ಚದಲ್ಲಿ ಬಂದರು ಅಭಿವೃದ್ಧಿಗೆ ಚಿಂತನೆ ನಡೆದಿದೆ. ಅಮದಳ್ಳಿ ಬಂದರಿಗೆ 19 ಕೋಟಿ ರೂ., ಅಘನಾಶಿನಿಯಲ್ಲಿ ಪ್ರಯಾಣಿಕರ ಜಟ್ಟಿ ನಿರ್ಮಾಣಕ್ಕೆ 25 ಕೋಟಿ ರೂ., ನೇತ್ರಾಣಿ ನಡುಗಡ್ಡೆಗೆ ಹೋಗಲು ಪ್ಯಾಸೆಂಜರ್‌ ಜಟ್ಟಿ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರಕಾರ 10 ಕೋಟಿ ರೂ. ನಿಗದಿ ಮಾಡಿದೆ. ಇದರ ಜತೆಗೆ ಜಿಲ್ಲೆಯ ಇನ್ನಿತರ ಬಂದರು ಅಭಿವೃದ್ಧಿಯ ಮೂಲಕ ಸಾಗರ ಹಾಗೂ ಮತ್ಸ್ಯಾಧರಿತ ಉದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ 1,200 ಕೋಟಿ ರೂ. ವಿನಿಯೋಗಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ