ಆ್ಯಪ್ನಗರ

ಮಂಟಪಕ್ಕೆ ತೆರಳಲು ಗಜಮುಖ ರೆಡಿ

ಶಿರಸಿ : ಪ್ರಥಮ ವಂದಿತ ಶ್ರೀ ಗಣೇಶನ ಆರಾಧನೆಗೆ ಮನೆಮನೆಗಳಲ್ಲಿಸಿದ್ಧತೆ ನಡೆದಿದ್ದು ಕಲಾಕಾರರು ವಿವಿಧ ವಿನ್ಯಾಸದ ಮಣ್ಣಿನ ಮೂರ್ತಿಗಳನ್ನು ವರ್ಣಾಂಲಕಾರದಲ್ಲಿಸಜ್ಜುಗೊಳಿಸಿದ್ದಾರೆ.

Vijaya Karnataka 1 Sep 2019, 5:00 am
ಶಿರಸಿ : ಪ್ರಥಮ ವಂದಿತ ಶ್ರೀ ಗಣೇಶನ ಆರಾಧನೆಗೆ ಮನೆಮನೆಗಳಲ್ಲಿಸಿದ್ಧತೆ ನಡೆದಿದ್ದು ಕಲಾಕಾರರು ವಿವಿಧ ವಿನ್ಯಾಸದ ಮಣ್ಣಿನ ಮೂರ್ತಿಗಳನ್ನು ವರ್ಣಾಂಲಕಾರದಲ್ಲಿಸಜ್ಜುಗೊಳಿಸಿದ್ದಾರೆ.
Vijaya Karnataka Web gajamukh ready to get to the mandap
ಮಂಟಪಕ್ಕೆ ತೆರಳಲು ಗಜಮುಖ ರೆಡಿ


ಗಣೇಶ ಚತುರ್ಥಿಗೆ ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಕಲಾಕಾರರ ಅಂಗಳದಲ್ಲಿಗಣೇಶನ ಮೂರ್ತಿ ಅರಳಿ ನಿಂತಿದೆ. ಎರಡು ತಿಂಗಳಿನಿಂದ ಹಲವು ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿರುವ ಕಲಾಕಾರರು ಮನೆಯಂಗಳದಲ್ಲಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಲ್ಲಿಪ್ರತಿಷ್ಠಾಪನೆಗೆ ನೀಡುತ್ತಿದ್ದಾರೆ. ಇತ್ತ ತಾಲೂಕಿನಲ್ಲಿ50ಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳಿಂದ ಗಣೇಶನ ಮಂಟಪವನ್ನು ಆಕರ್ಷಕವಾಗಿ ರೂಪಿಸುವ ಕಾರ್ಯ ಭರದಿಂದ ಸಿದ್ಧತೆ ನಡೆಯುತ್ತಿದೆ. ಇನ್ನು ಮನೆಯಂಗಳದಲ್ಲೂಈ ಕಾರ್ಯ ಮಾಡಲಾಗುತ್ತಿದೆ.

ನಗರದ ಹತ್ತಾರು ಗುಡಿಗಾರರು ಗಣೇಶ ಮೂರ್ತಿಯನ್ನು ತಯಾರಿಕೆ ಕೈಕಂರ್ಯ ನಡೆಸಿದ್ದಾರೆ. ಇಲ್ಲಿಂದ ಹಾವೇರಿ, ಹಾನಗಲ್‌, ಗದಗ ಸೇರಿದಂತೆ ಹೊರ ಜಿಲ್ಲೆಗಳಿಗೂ ಮೂರ್ತಿಗಳನ್ನು ಕೊಂಡೊಯ್ಯಲು ಭಕ್ತರು ಅಣಿಯಾಗಿದ್ದಾರೆ.

ಮರಾಠಿಕೊಪ್ಪದ ಶಿವಾ ವುಡ್‌ ಕಾರ್ವಿಂಗ್‌ನಲ್ಲಿವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಆಕರ್ಷಿಸುತ್ತಿವೆ. 7ಪುಟ್‌ ಎತ್ತರದ ಮೂರ್ತಿಗಳು ಇಲ್ಲಿವೆ. ಸಿಂಹದ ಮೇಲೆ ಕುಳಿತ ಗಣಪ, ಸಿಂಹಾಸನರೂಢ ಗಜಮುಖ, ವಿಠೋಬ ಗಣಪ, ಕಾಲಿನ ಮೇಲೆ ಇಲಿ ಕುಳ್ಳಿರಿಸಿಕೊಂಡಿರುವ ಗಣಪ ಹೀಗೆ ವಿವಿಧ ನಮೂನೆಯಲ್ಲಿಗಣೇಶ ಮೂರ್ತಿ ತಯಾರಿಸಿದ್ದೇವೆ ಎಂದು ಗಿರೀಶ ಮುರಳೀಧರ ಗುಡಿಗಾರ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ