ಆ್ಯಪ್ನಗರ

ಭಾವಿಕೇರಿಯ ಗ್ರಾಪಂಗೆ ಗಾಂಧಿ ಪುರಸ್ಕಾರ

ಅಂಕೋಲಾ :ಗ್ರಾಮೀಣಾಭಿವೃದ್ಧಿ ಇಲಾಖೆ ಕೆಲಸಗಳಲ್ಲಿ ಮೇಲಗೈ ಸಾಧಿಸಿದ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯಿತಿಗೆ ಈ ಭಾರಿಯ ಗಾಂಧಿ ಪುರಸ್ಕಾರ ದೊರೆತಿದೆ. ಅಭಿವೃದ್ಧಿ ಕಾರ್ಯಗಳ ಅಭ್ಯುದಯಕ್ಕಾಗಿ, ಪ್ರಾಮಾಣಿಕವಾಗಿ ದುಡಿಯುತ್ತಿರುವ ಮತ್ತು ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸಲು, ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ ಕಾರಣಕ್ಕಾಗಿ ಈ ಪ್ರಶಸ್ತಿ ಭಾವಿಕೇರಿಯ ಗ್ರಾಮದ ಶಕ್ತಿ ಕೇಂದ್ರ ಗ್ರಾಮ ಪಂಚಾಯಿತಿ ಪಾಲಾಗಿದೆ.

Vijaya Karnataka 4 Oct 2018, 5:00 am
ಅಂಕೋಲಾ :ಗ್ರಾಮೀಣಾಭಿವೃದ್ಧಿ ಇಲಾಖೆ ಕೆಲಸಗಳಲ್ಲಿ ಮೇಲಗೈ ಸಾಧಿಸಿದ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯಿತಿಗೆ ಈ ಭಾರಿಯ ಗಾಂಧಿ ಪುರಸ್ಕಾರ ದೊರೆತಿದೆ. ಅಭಿವೃದ್ಧಿ ಕಾರ್ಯಗಳ ಅಭ್ಯುದಯಕ್ಕಾಗಿ, ಪ್ರಾಮಾಣಿಕವಾಗಿ ದುಡಿಯುತ್ತಿರುವ ಮತ್ತು ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸಲು, ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ ಕಾರಣಕ್ಕಾಗಿ ಈ ಪ್ರಶಸ್ತಿ ಭಾವಿಕೇರಿಯ ಗ್ರಾಮದ ಶಕ್ತಿ ಕೇಂದ್ರ ಗ್ರಾಮ ಪಂಚಾಯಿತಿ ಪಾಲಾಗಿದೆ.
Vijaya Karnataka Web gandhi award for aakkaria grapam
ಭಾವಿಕೇರಿಯ ಗ್ರಾಪಂಗೆ ಗಾಂಧಿ ಪುರಸ್ಕಾರ


ಆಯ್ಕೆ ಆಗಿದ್ದು ಹೇಗೆ :

2017-18 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ರಾಜ್ಯ ಸರಕಾರ ರಾಜ್ಯದ 30 ಜಿಲ್ಲೆಗಳ ಗ್ರಾಪಂ ಗಳಿಂದ ಪಂಚ ತಂತ್ರ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ 30 ಜಿಲ್ಲೆಗಳಲ್ಲಿ, 176 ಗ್ರಾಪಂ ಗಳು ಆಯ್ಕೆಯಾಗಿವೆ.

ಮಾನದಂಡಗಳಲ್ಲಿ ಮುಂಚೂಣಿ :

ಗಾಂಧಿ ಪುರಸ್ಕಾರಕ್ಕೆ ಗ್ರಾಪಂ ಗಳಿಂದ ಅರ್ಜಿ ಆಹ್ವಾನಿಸಿದ ಸರಕಾರ ಇದಕ್ಕೆ ವಿವಿಧ ಕ್ಷೇತ್ರಗಳ ಸಾಧನೆ ಗುರುತಿಸಲು 150 ಅಂಕ ನಿಗದಿಪಡಿಸಿತ್ತು. ಭಾವಿಕೇರಿ ಗ್ರಾಪಂ ಕಂದಾಯ ವಸೂಲಿಯಲ್ಲಿ ಪ್ರಗತಿ, ಬಯಲು ಬಹಿರ್ದೆಸೆ ಮುಕ್ತ ಸಾಧನೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಪ್ರಗತಿ ಸಾಧನೆಯನ್ನು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಅನುಷ್ಠಾನಗೊಳಿಸಿರುವ ಎಲ್ಲ ಯೋಜನೆಗಳಲ್ಲೂ, ಸಹ ಉತ್ತಮ ಸಾಧನೆ ಮಾಡಿದ್ದರಿಂದ ಈ ಪ್ರಶಸ್ತಿಗೆ ಭಾವಿಕೇರಿ ಗ್ರಾಪಂ ಅನ್ನು ಆಯ್ಕೆ ಮಾಡಲಾಗಿದೆ.

ಯಶಸ್ವಿ ಗ್ರಾಮ ಸಭೆ ಆಯೋಜನೆ :

ಭಾವಿಕೇರಿ ಗ್ರಾಪಂ ನಲ್ಲಿ ಸಕಲಕ್ಕೆ ಗ್ರಾಮ ಸಭೆ, ಮಕ್ಕಳ, ಮಹಿಳೆಯರ ಹಾಗೂ ವಿಶೇಷ ಗ್ರಾಮ ಸಭೆ ಆಯೋಜಿಸಿ, ಗ್ರಾಮಸ್ಥರೊಂದಿಗೆ ಉತ್ತಮ ಸಂಬಂಧವನ್ನು ಗ್ರಾಪಂ ಅಧ್ಯಕ್ಷ ರು, ಉಪಾಧ್ಯಕ್ಷ ರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಂದಿದ್ದರು.

ಗ್ರಾಪಂ ಉಪಾಧ್ಯಕ್ಷೆ ಶೋಭಾ ನಾಯ್ಕ, ಮತ್ತು ಸದಸ್ಯರು, ಕಾರ್ಯದರ್ಶಿ ಮಾದೇವ ಗೌಡ, ಲೆಕ್ಕ ಬರಹಗಾರ್ತಿ ರೇಷ್ಮಾ ನಾಯ್ಕ, ಬಿಲ್‌ ಕಲೆಟ್ಟರ ಸತೀಶ, ಗಣಕಯಂತ್ರ ನಿರ್ವಾಹಕಿ ಸುರೇಖಾ ಅವರ ವಿಶೇಷ ಕಾರ್ಯ ಮರೆಯುವಂತಿಲ್ಲ.

5 ಲಕ್ಷ ರೂ. ಪ್ರೋತ್ಸಾಹ ಧನ :

ಹಳ್ಳಿಗಳ ವಿಧಾನಸಭೆ ಎನಿಸಿಕೊಂಡಿರುವ ಗ್ರಾಮ ಪಂಚಾಯಿತಿಗಳು ಮತ್ತಷ್ಟು ಒಳ್ಳೆಯ ಕೆಲಸ ಮಾಡಿ ಗ್ರಾಮಸ್ಥರಿಗೆ ಉತ್ತಮ ಸೇವೆ ನೀಡಲಿ ಎಂಬ ಆಶಯ ಸರಕ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಕೆಲಸ ಹಾಗೂ ವಿಶೇಷ ಸಾಧನೆ ಮಾಡಲು ಅವಕಾಶ ಮಾಡಿ ಕೊಡುವುದರ ಜತೆಗೆ ಗ್ರಾಪಂ ಗಾಂಧಿ ಪುರಸ್ಕಾರ ನೀಡಿ, ಗ್ರಾಮದ ಅಭಿವೃದ್ಧಿಗೆ 5 ಲಕ್ಷ ರೂ. ವಿಶೇಷ ಪ್ರೋತ್ಸಾಹ ಧನ ನೀಡಿರುವುದು ಗ್ರಾಮ ಅಭಿವರದ್ಧಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ