ಆ್ಯಪ್ನಗರ

ಗೋಕರ್ಣಕ್ಕೆ ಬಂದ ಗಾಂಧಿ ಸಂಕಲ್ಪಯಾತ್ರೆ

ಗೋಕರ್ಣ : ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷವು ಕಾರವಾರದಿಂದ ಆರಂಭಿಸಿರುವ ಗಾಂಧಿ ಸಂಕಲ್ಪಯಾತ್ರೆ ಬುಧವಾರ ಸಂಜೆ ಗಂಗಾವಳಿ, ಬಂಕಿಕೊಡ್ಲಕ್ಕೆ ಆಗಮಿಸಿ, ಗುರುವಾರ ಗೋಕರ್ಣದಿಂದ ಮುಂದಿನ ಸ್ಥಳಗಳಿಗೆ ತೆರಳಿತು. ಯಾತ್ರೆಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.

Vijaya Karnataka 18 Oct 2019, 5:00 am
ಗೋಕರ್ಣ : ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷವು ಕಾರವಾರದಿಂದ ಆರಂಭಿಸಿರುವ ಗಾಂಧಿ ಸಂಕಲ್ಪಯಾತ್ರೆ ಬುಧವಾರ ಸಂಜೆ ಗಂಗಾವಳಿ, ಬಂಕಿಕೊಡ್ಲಕ್ಕೆ ಆಗಮಿಸಿ, ಗುರುವಾರ ಗೋಕರ್ಣದಿಂದ ಮುಂದಿನ ಸ್ಥಳಗಳಿಗೆ ತೆರಳಿತು. ಯಾತ್ರೆಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
Vijaya Karnataka Web 17 GKN 1 A_24


ಇದಕ್ಕೂ ಮೊದಲು ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದಲ್ಲಿದರ್ಶನ ಪಡೆದು ನಂತರ ಗೋಪೂಜೆ ನೆರವೇರಿಸಿ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ, ಮಾಲಾರ್ಪಾಣೆ ಮಾಡಿ ಸಂಕಲ್ಪಯಾತ್ರೆಗೆ ಚಾಲನೆ ನೀಡಲಾಯಿತು.

ರಥಬೀದಿಯಿಂದ ಮೇಲಿನಕೇರಿ ಮಾರ್ಗವಾಗಿ ಯಾತ್ರೆ ತೆರಳಿತು. ಈ ವೇಳೆ ಕಾರ್ಯದರ್ಶಿ ಹೇಮಂತ ಗಾಂವ್ಕರ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದಯಾನಂದ ನಾಯ್ಕ ತದಡಿ, ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ, ಗಣೇಶ ಪಂಡಿತ್‌, ತಾ.ಪಂ. ಸದಸ್ಯ ಮಹೇಶ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ರಮೇಶ ಪ್ರಸಾದ, ಗಣಪತಿ ನಾಯ್ಕ, ಪಕ್ಷದ ಕಾರ್ಯಕರ್ತರಾದ ಸುಬ್ಬು ಗೌಡ, ಮಂಜುನಾಥ ಶೆಟ್ಟಿ, ಸತೀಶ ಭಟ್‌ ಮುಂತಾದವರು ಉಪಸ್ಥಿತರಿದ್ದರು. ವೇ.ವಿN್ನೕಶ್ವರ ಕೊಡಗಿ ಗೋಪೂಜಾ ಕೈಂಕರ್ಯ ನೆರವೇರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ