ಆ್ಯಪ್ನಗರ

ಜರ್ಮನಿ ವ್ಯಕ್ತಿಯ ರಂಪಾಟ

ಗೋಕರ್ಣ : ವ್ಯಕ್ತಿಯೊಬ್ಬ ಅಂಗಡಿಯೊಂದನ್ನು ಹೊಕ್ಕು ಸಾಮಗ್ರಿ ಹಾಳು ಮಾಡಿ ಅದನ್ನು ತಡೆಯಲು ಬಂದ ಸ್ಥಳೀಯರಿಗೆ ಹಿಗ್ಗಾಮುಗ್ಗಾ ಹೊಡೆದು, ಕೊನೆಗೆ ಪೊಲೀಸರ ಅತಿಥಿಯಾಗಿ ಆಸ್ಪತ್ರೆ ಸೇರಿದ ಪ್ರಸಂಗ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದಲ್ಲಿ ಗುರುವಾರ ನಡೆದಿದೆ.

Vijaya Karnataka 12 Jan 2019, 5:00 am
ಗೋಕರ್ಣ : ವ್ಯಕ್ತಿಯೊಬ್ಬ ಅಂಗಡಿಯೊಂದನ್ನು ಹೊಕ್ಕು ಸಾಮಗ್ರಿ ಹಾಳು ಮಾಡಿ ಅದನ್ನು ತಡೆಯಲು ಬಂದ ಸ್ಥಳೀಯರಿಗೆ ಹಿಗ್ಗಾಮುಗ್ಗಾ ಹೊಡೆದು, ಕೊನೆಗೆ ಪೊಲೀಸರ ಅತಿಥಿಯಾಗಿ ಆಸ್ಪತ್ರೆ ಸೇರಿದ ಪ್ರಸಂಗ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದಲ್ಲಿ ಗುರುವಾರ ನಡೆದಿದೆ.
Vijaya Karnataka Web germany is a persons cruelty
ಜರ್ಮನಿ ವ್ಯಕ್ತಿಯ ರಂಪಾಟ


ಜರ್ಮನಿ ದೇಶದ, ಭಾರತ ಮೂಲದ ಹೆಸರಿನ ವ್ಯಕ್ತಿಯೊಬ್ಬರು ಇಲ್ಲಿಯ ಅಂಗಡಿಯೊಂದರ ಒಳ ಹೊಕ್ಕಿ ಸಾಮಗ್ರಿಗಳನ್ನು ಹಾಳು ಮಾಡಿದ್ದಾರೆ. ಅಲ್ಲದೆ, ಅವರನ್ನು ಹಿಡಿಯಲು ಮುಂದಾದ ಅಂಗಡಿ ಮಾಲೀಕ ಹಾಗೂ ಸ್ಥಳೀಯರಿಗೆ ಹಿಗ್ಗಾಮುಗ್ಗಾ ಹೊಡೆದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆæ. ಶತಪ್ರಯತ್ನ ಮಾಡಿ ಕೊನೆಗೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೈರಾಣಾದ ಪೊಲೀಸರು : ಶುಕ್ರವಾರ ರಾತ್ರಿ ಹೇಗೋ ಮಾಡಿ ಸ್ಥಳೀಯರು ಹಿಡಿದು ಠಾಣೆಗೆ ತಂದು ಬಿಟ್ಟರು. ಆದರೆ ಮಾದಕದ್ರವ್ಯ ವ್ಯಸನದಿಂದ ಮಾನಸಿಕ ಸೀಮಿತ ಕಳೆದುಕೊಂಡಿದ್ದ ಅವರನ್ನು ಠಾಣೆಯಲ್ಲಿ ಇಟ್ಟುಕೊಳ್ಳುವುದೇ ಪೊಲೀಸರಿಗೆ ಹರಸಾಹಸವಾಗಿತ್ತು. ಅಮಲಿನಲ್ಲಿ ಪ್ರತಿಯೊಬ್ಬರ ಮೇಲೂ ರೇಗಾಡುತ್ತ ಸಿಬ್ಬಂದಿ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದ. ಅಂತೂ ಕೊನೆಗೆ ಶುಕ್ರವಾರ ಬೆಳಗ್ಗೆ ಅವರ ತಂದೆ ಜತೆ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

-----

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ