ಆ್ಯಪ್ನಗರ

ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ

ಅಂಕೋಲಾ : ವಾಸರಕುದ್ರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಖಿ ಗೌಡರ ರಾಜೀನಾಮೆ ನೀಡಿರುವುದರಿಂದ ಸ್ಥಾನವನ್ನು ನಿಯಮಾನುಸಾರ ಭರಿಸಿ ಪಂಚಾಯಿತಿ ಕೆಲಸಗಳನ್ನು ಸುಸೂತ್ರವಾಗಿ ನಡೆಸಿಕೊಡಲು ಸಹಕರಿಸಬೇಕೆಂದು ಒತ್ತಾಯಿಸಿ ವಾಸರಕುದ್ರಿಗೆ ಗ್ರಾಮದ ನಾಗರಿಕರು ಮಂಗಳವಾರ ತಾಲೂಕು ದಂಡಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

Vijaya Karnataka 25 Sep 2019, 5:00 am
ಅಂಕೋಲಾ : ವಾಸರಕುದ್ರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಖಿ ಗೌಡರ ರಾಜೀನಾಮೆ ನೀಡಿರುವುದರಿಂದ ಸ್ಥಾನವನ್ನು ನಿಯಮಾನುಸಾರ ಭರಿಸಿ ಪಂಚಾಯಿತಿ ಕೆಲಸಗಳನ್ನು ಸುಸೂತ್ರವಾಗಿ ನಡೆಸಿಕೊಡಲು ಸಹಕರಿಸಬೇಕೆಂದು ಒತ್ತಾಯಿಸಿ ವಾಸರಕುದ್ರಿಗೆ ಗ್ರಾಮದ ನಾಗರಿಕರು ಮಂಗಳವಾರ ತಾಲೂಕು ದಂಡಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
Vijaya Karnataka Web 24ANK1_24


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುದ್ದೆ ರಾಜೀನಾಮೆ ನೀಡಿರುವುದರಿಂದ ಗ್ರಾಮ ಪಂಚಾಯಿತಿಯ ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಸರಕಾರದ ನಿಯಮಾವಳಿಯಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆ 2ಎ ಮಹಿಳೆಯರಿಗಾಗಿ ಸರಕಾರದಿಂದ ಮೀಸಲಿಡಲಾಗಿದೆ. ಈ ಮೀಸಲಾತಿಯಲ್ಲಿವಾಸರಕುದ್ರಿಗೆ ಗ್ರಾಮ ಪಂಚಾಯಿತಿಯಲ್ಲಿರಾಖಿ ಗೌಡ ಮತ್ತು ಶಾಂತಿ ನಾಯಕ ಇಬ್ಬರು ಸದಸ್ಯರಿದ್ದಾರೆ. ಇದೀಗ ಮೀಸಲಾತಿ ನಿಯಮದಂತೆ ಶಾಂತಿ ನಾಯಕ ಒಬ್ಬರೇ ಅರ್ಹರಾಗಿದ್ದಾರೆ. ಹೀಗಾಗಿ ವಿಳಂಬಕ್ಕೆ ಎಡೆ ಮಾಡಿಕೊಡದೇ ನಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆಯನ್ನು ಪಂಚಾಯಿತಿ ನಿಯಮಾನುಸಾರ ಶಾಂತಿ ನಾಯಕ ಅವರಿಗೆ ನೀಡಲು ಒತ್ತಾಯಿಸಿದರು.

ಮಹಿಳೆಯರಿಗಾಗಿ ಮೀಸಲಿಟ್ಟ ಹುದ್ದೆಯನ್ನು ಪುರುಷ ಸದಸ್ಯರಿಗೆ ತಾತ್ಪೂರ್ತಿಕವಾದರೂ ನೀಡಿದರೆ ಸರಿಯೇ ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗಿದೆ. ಉದ್ದೇಶಪೂರ್ವಕವಾಗಿ ಮಹಿಳೆಯರ ಕಡೆಗಣನೆ ಮತ್ತು ನ್ಯಾಯಸಮ್ಮತ ಹಕ್ಕಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸಲ್ಲಿಸಿದ ಮನವಿಯಲ್ಲಿತಿಳಿಸಿದ್ದಾರೆ.

ದೇವಾನಂದ ಎಂ. ನಾಯಕ, ಗೌರೀಶ ವಿಠ್ಠಲ ಗೌಡ, ತಿಮ್ಮಣ್ಣ ನಾಯಕ, ಶಾಂತಿ ತಿಮ್ಮಣ್ಣ ನಾಯಕ, ಸಾತು ಪೊಕ್ಕ ಗೌಡ ಹಲವರು ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ತಹಶೀಲ್ದಾರ ಅಶೋಕ ಗುರಾಣಿ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ