ಶಿರಸಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ಥಾಪನೆಯಾದ ದಿನದ ಪ್ರಯುಕ್ತ ವಿದ್ಯಾರ್ಥಿ ದಿವಸ ಕಾರ್ಯಕ್ರಮ ಮಾರಿಕಾಂಬಾ ಕಾಲೇಜಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಗರದ ನಿಲೇಕಣಿ, ಪ್ರೊಗ್ರೆಸ್ಸಿವ್, ಮಾರಿಗುಡಿ, ಮಾರಿಕಾಂಬಾ, ಚೈತನ್ಯ, ಎಂಇಎಸ್, ಜೆಎಮ್ಜೆ ಕಾಲೇಜಿನ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಆಹ್ವಾನಿಸಿ ಸನ್ಮಾನಿಸಲಾಯಿತು..
ವಕ್ತಾರರಾಗಿ ಪಾಲ್ಗೊಂಡ ಮಲ್ಲಿಕಾರ್ಜುನ ಬಾಳೇಕಾಯಿ, ವಿದ್ಯಾರ್ಥಿ ಪರಿಷತ್ನ ರಾಷ್ಟ್ರಮಟ್ಟದ ಸಾಧನೆ ಪ್ರಸ್ತುತವಾಗಿ ನಡೆಯುತ್ತಿರುವಂತಹ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕ ನಾಗೇಶ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಕಾರ್ಯಚಟುವಟಿಕೆಗಳು ಖುಷಿ ಕೊಟ್ಟಿವೆ ಎಂದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ನಗರದ ಸಂಘಟನಾ ಕಾರ್ಯದರ್ಶಿ ಶಿವಕಾಂತ, ಶಿರಸಿ ಜಿಲ್ಲಾ ಸಂಚಾಲಕ ಕಮಲಾಕರ ಮರಾಠಿ, ಜಿಲ್ಲಾ ವಿದ್ಯಾರ್ಥಿ ಪ್ರಮುಖ ರೇಣುಕಾ ಮೋಗೇರ ಹಾಗೂ ಶ್ರೀಧರ ನಗರದ, ಚಂದ್ರಶೇಖರ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಗರದ ನಿಲೇಕಣಿ, ಪ್ರೊಗ್ರೆಸ್ಸಿವ್, ಮಾರಿಗುಡಿ, ಮಾರಿಕಾಂಬಾ, ಚೈತನ್ಯ, ಎಂಇಎಸ್, ಜೆಎಮ್ಜೆ ಕಾಲೇಜಿನ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಆಹ್ವಾನಿಸಿ ಸನ್ಮಾನಿಸಲಾಯಿತು..
ವಕ್ತಾರರಾಗಿ ಪಾಲ್ಗೊಂಡ ಮಲ್ಲಿಕಾರ್ಜುನ ಬಾಳೇಕಾಯಿ, ವಿದ್ಯಾರ್ಥಿ ಪರಿಷತ್ನ ರಾಷ್ಟ್ರಮಟ್ಟದ ಸಾಧನೆ ಪ್ರಸ್ತುತವಾಗಿ ನಡೆಯುತ್ತಿರುವಂತಹ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕ ನಾಗೇಶ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಕಾರ್ಯಚಟುವಟಿಕೆಗಳು ಖುಷಿ ಕೊಟ್ಟಿವೆ ಎಂದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ನಗರದ ಸಂಘಟನಾ ಕಾರ್ಯದರ್ಶಿ ಶಿವಕಾಂತ, ಶಿರಸಿ ಜಿಲ್ಲಾ ಸಂಚಾಲಕ ಕಮಲಾಕರ ಮರಾಠಿ, ಜಿಲ್ಲಾ ವಿದ್ಯಾರ್ಥಿ ಪ್ರಮುಖ ರೇಣುಕಾ ಮೋಗೇರ ಹಾಗೂ ಶ್ರೀಧರ ನಗರದ, ಚಂದ್ರಶೇಖರ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.