ಆ್ಯಪ್ನಗರ

ಜ್ಞಾನದ ಜತೆ ನೀರೂ ಕೊಡಿ

ಯಲ್ಲಾಪುರ : ಅಕ್ಷ ರ ಪ್ರೀತಿಗೆ ನಿತ್ಯ ಸೇವೆ ಒದಗಿಸುವ ಗ್ರಂಥಾಲಯಗಳು ಜ್ನಾನ ದಾಹ ತೀರಿಸುವ ಶ್ರದ್ಧಾ ಕೇಂದ್ರಗಳೂ ಹೌದು. ಸಾರ್ವಜನಿಕ ಗ್ರಂಥಾಲಯಗಳು ಓದುಗರ ಸೇವೆಗೆ ಸಂಪೂರ್ಣವಾದ ಅವಕಾಶ ಮಾಡಿಕೊಟ್ಟಾಗ ಆ ಗ್ರಂಥಾಲಯಗಳ ಸಾರ್ಥಕತೆಯೂ ಆಗಬಲ್ಲದು. ಪುಸ್ತಕಗಳು, ಓದುಗರು, ಸಿಬ್ಬಂದಿ ಗ್ರಂಥಾಲಯದ ಮುಖ್ಯ ಭಾಗಗಳು. ಜೊತೆಗೆ ಅಲ್ಲಿಯ ಮೂಲ ಸೌಕರ‍್ಯಗಳ ಬಗೆಗೂ ಹೆಚ್ಚಿನ ಗಮನಕೊಡಬೇಕಾಗುತ್ತದೆ. ಹಾಗಾದಾಗ ಮಾತ್ರ ಜ್ಞಾನದ ಶಾಖೆಗಳು ವಿಸ್ತರಿಸಿದಂತೆ. ಈ ನಿಟ್ಟಿನಲ್ಲಿ ಯಲ್ಲಾಪುರದ ಸಾರ್ವಜನಿಕ ಗ್ರಂಥಾಲಯ ತನ್ನ ಎಲ್ಲಾ ಮೂಲ ಸೌಲಭ್ಯಗಳನ್ನು ಹೊಂದಿದ್ದರೂ ಓದುಗರಿಗೆ ಅಗತ್ಯವಾದ ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ.

Vijaya Karnataka 14 Apr 2019, 5:00 am
ಯಲ್ಲಾಪುರ : ಅಕ್ಷ ರ ಪ್ರೀತಿಗೆ ನಿತ್ಯ ಸೇವೆ ಒದಗಿಸುವ ಗ್ರಂಥಾಲಯಗಳು ಜ್ನಾನ ದಾಹ ತೀರಿಸುವ ಶ್ರದ್ಧಾ ಕೇಂದ್ರಗಳೂ ಹೌದು. ಸಾರ್ವಜನಿಕ ಗ್ರಂಥಾಲಯಗಳು ಓದುಗರ ಸೇವೆಗೆ ಸಂಪೂರ್ಣವಾದ ಅವಕಾಶ ಮಾಡಿಕೊಟ್ಟಾಗ ಆ ಗ್ರಂಥಾಲಯಗಳ ಸಾರ್ಥಕತೆಯೂ ಆಗಬಲ್ಲದು. ಪುಸ್ತಕಗಳು, ಓದುಗರು, ಸಿಬ್ಬಂದಿ ಗ್ರಂಥಾಲಯದ ಮುಖ್ಯ ಭಾಗಗಳು. ಜೊತೆಗೆ ಅಲ್ಲಿಯ ಮೂಲ ಸೌಕರ‍್ಯಗಳ ಬಗೆಗೂ ಹೆಚ್ಚಿನ ಗಮನಕೊಡಬೇಕಾಗುತ್ತದೆ. ಹಾಗಾದಾಗ ಮಾತ್ರ ಜ್ಞಾನದ ಶಾಖೆಗಳು ವಿಸ್ತರಿಸಿದಂತೆ. ಈ ನಿಟ್ಟಿನಲ್ಲಿ ಯಲ್ಲಾಪುರದ ಸಾರ್ವಜನಿಕ ಗ್ರಂಥಾಲಯ ತನ್ನ ಎಲ್ಲಾ ಮೂಲ ಸೌಲಭ್ಯಗಳನ್ನು ಹೊಂದಿದ್ದರೂ ಓದುಗರಿಗೆ ಅಗತ್ಯವಾದ ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ.
Vijaya Karnataka Web give it with knowledge
ಜ್ಞಾನದ ಜತೆ ನೀರೂ ಕೊಡಿ


ತೀರಾ ಅಗತ್ಯವಾದ ಕುಡಿಯುವ ನೀರು ಇತರೇ ಅಗತ್ಯ ಸೌಲಭ್ಯಗಳ ಜತೆ ಅನಿವಾರ‍್ಯವಾಗಿದ್ದರೂ ಶಾಖಾ ಗ್ರಂಥಾಲಯಕ್ಕೆ ನೀರು ನೀಡಲು ಪಟ್ಟಣ ಪಂಚಾಯಿತಿ ಮೀನ ಮೇಷ ಎಣಿಸುತ್ತಿರುವುದು ಓದುಗರು ಅಚ್ಚರಿ ಪಡುವಂತಾಗಿದೆ.

ಯಲ್ಲಾಪುರ ಪಟ್ಟಣದ ಹೃದಯ ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯವು ಅಕ್ಷ ರ ಪ್ರೇಮಿಗಳಿಗೆ ಓದಿನ ದಾಹ ತೀರಿಸುತ್ತಿದೆ. ಸುಮಾರು ಮೂವತ್ತೊಂದು ಸಾವಿರಕ್ಕೂ ಮಿಕ್ಕಿರುವ ಪುಸ್ತಕ ಸಂಗ್ರಹದ ಶಾಖಾ ಗ್ರಂಥಾಲಯದಲ್ಲಿ ಹನ್ನೆರಡುನೂರಕ್ಕೂ ಮಿಕ್ಕಿ ಓದುಗರು ತಮ್ಮ ಸದಸ್ಯತ್ವವನ್ನು ನೋಂದಾಯಿಸಿಕೊಂಡಿದ್ದಾರೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓದುಗರು ನಿಯತಕಾಲಿಕೆ, ಪುಸ್ತಕಗಳನ್ನು ಓದಲು ಈ ಶಾಖಾ ಗ್ರಂಥಾಲಯಕ್ಕೆ ಭೇಟಿ ಕೊಡುತ್ತಾರೆ. ಗ್ರಂಥಾಲಯದ ಒಳಾಂಗಣದಲ್ಲಿ ಆರಾಮದಾಯಕವಾಗಿ ಓದುಗರು ಓದುವ ಸೌಲಭ್ಯ ಹೊಂದಿದೆ.

ಇವರಲ್ಲಿ ವಿದ್ಯಾರ್ಥಿಗಳು, ಶಿಕ್ಷ ಕರು ಅಲ್ಲದೇ ಬೇರೆ ಬೇರೆ ಕ್ಷೇತ್ರದಲ್ಲಿ ಸೇವೆ ನೀಡುವ ಗಣ್ಯರೂ ಇದ್ದು, ಸಾರ್ವಜನಿಕವಾಗಿ ನಿತ್ಯ ಉತ್ತಮ ಸೇವೆ ನೀಡುತ್ತಿರುವ ಅಪರೂಪದ ಗ್ರಂಥಾಲಯಗಳಲ್ಲಿ ಯಲ್ಲಾಪುರದ ಶಾಖಾ ಗ್ರಂಥಾಲಯವೂ ಕೂಡಾ ಒಂದು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಓದುಗರಿಗೆ ಮೌಲ್ಯಯುತ ಪುಸ್ತಕಗಳ ಓದಿನ ಕೇಂದ್ರವಾಗಿ ಶಾಖಾ ಗ್ರಂಥಾಲಯ ಕೆಲಸಮಾಡುತ್ತಿದೆ.

ನವೀಕೃತ ಶಾಖಾ ಗ್ರಂಥಾಲಯದ ಹೊಸಕಟ್ಟಡದಲ್ಲಿ ಉತ್ತಮ ಗಾಳಿ, ಬೆಳಕು, ಕುಳಿತುಕೊಳ್ಳಲು ಆಸನಗಳು, ಪುಸ್ತಕಗಳ ವ್ಯವಸ್ಥಿತ ಜೋಡಣೆ, ಮಾಹಿತಿ ನೀಡುವ ಸಿಬ್ಬಂದಿ ಎಲ್ಲವೂ ಇದೆ. ಆದರೆ ಗ್ರಂಥಾಲಯವು ಪಟ್ಟಣ ಪಂಚಾಯಿತಿಯ ಪಕ್ಕದಲ್ಲಿಯೇ ಇದ್ದರೂ ಓದುಗರಿಗೆ ಕುಡಿಯುವ ನೀರು ಮತ್ತು ಶೌಚಾಲಯ ಬಳಕೆಗೆ ಅವಶ್ಯವಾದ ನೀರಿನ ಸಂಪರ್ಕ ಸಿಗದಿರುವುದು ಅಕ್ಷ ರ ಪ್ರೇಮಿಗಳಿಗೆ ಬೇಸರ ತರಿಸಿದೆ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ