ಆ್ಯಪ್ನಗರ

ದೇಶಸೇವೆಗೆ ಜೀವನ ಮೀಸಲಿಡಿ: ಗಾಂವ್ಕರಸ

ಯಲ್ಲಾಪುರ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸಾಂಸ್ಕೃತಿಕ ವೇದಿಕೆಯ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ 156ನೆಯ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.

Vijaya Karnataka 14 Jan 2019, 5:00 am
ಯಲ್ಲಾಪುರ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸಾಂಸ್ಕೃತಿಕ ವೇದಿಕೆಯ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ 156ನೆಯ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
Vijaya Karnataka Web give life to the country gavaskar
ದೇಶಸೇವೆಗೆ ಜೀವನ ಮೀಸಲಿಡಿ: ಗಾಂವ್ಕರಸ


ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷ ಗಾನ ಅರ್ಥಧಾರಿ, ಸಾಮಾಜಿಕ ಕಾರ್ಯಕರ್ತ ಶಿವರಾಮ ಗಾಂವ್ಕರ ಕನಕನಹಳ್ಳಿ ಮಾತನಾಡಿ, ನಿಸ್ವಾರ್ಥ ಭವನೆಯಿಂದ ಸಮಾಜಕ್ಕಾಗಿ, ದೇಶಕ್ಕಾಗಿ ಹಾಗೂ ಪ್ರಪಂಚಕ್ಕಾಗಿ ನಮ್ಮನ್ನು ನಾವು ವಿವೇಕಾನಂದರಂತೆ ಅರ್ಪಣೆ ಮಾಡಿಕೊಳ್ಳಬೇಕು. ಮೌಲ್ಯಯುತವಾದ ಶರೀರವನ್ನು ಬೇಡದ ಕಾರಣಗಳಿಗೆ ಉಪಯೋಗಿಸದೇ ಯುವಕರು ದೇಶಸೇವೆಗಾಗಿ ಮೀಸಲಿಡಬೇಕು ಎಂದು ಹೇಳಿದರು.

ಅಧ್ಯಕ್ಷ ತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ದಾಕ್ಷಾಯಣಿ ಹೆಗಡೆ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಂದು ಕ್ಷ ಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಇಟ್ಟುಕೊಂಡು ಗುರಿಯ ಸಾಧನೆಗೆ ನಿರಂತರ ಪ್ರಯತ್ನ ಮಾಡಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳು ನಿಮಗೆ ದಾರಿದೀಪವಾಗಲಿ ಎಂದರು.

ವಿವೇಕಾನಂದರ ಜೀವನ ಆದರ್ಶಗಳ ಬಗ್ಗೆ ಉಪನ್ಯಾಸ ನೀಡಿದ ಕನಕನಹಳ್ಳಿ ಶಿವರಾಮ ಗಾಂವ್ಕರ ಅವರಿಗೆ ಸಾಂಸ್ಕೃತಿಕ ಹಾಗೂ ಯುವ ರೆಡ್‌ಕ್ರಾಸ್‌ ಸಂಚಾಲಕ ಎಂ.ಎಂ.ಹೆಬ್ಬಳ್ಳಿ ಸನ್ಮಾನಿಸಿದರು.

ಕ್ರೀಡಾ ಸಂಚಾಲಕ ಡಿ.ಎಸ್‌.ಭಟ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಚಾಲಕ ಡಿ.ಜಿ.ತಾಪಸ್‌ ಉಪಸ್ಥಿತರಿದ್ದರು. ಸಿಂಧು ವೈದ್ಯ ಪ್ರಾರ್ಥಿಸಿದರು. ಐ.ಕ್ಯು.ಎ.ಸಿ. ಸಂಚಾಲಕ ಆರ್‌.ಡಿ. ಜನಾರ್ಧನ್‌ ಸ್ವಾಗತಿಸಿದರು. ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ರಾಮಕೃಷ್ಣ ಗೌಡ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಜ್ಯೋತಿ ಭಜಂತ್ರಿ ವಂದಿಸಿದರು. ಸಹನಾ ದೇವಾಡಿಗ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ