ಆ್ಯಪ್ನಗರ

ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ

ಶಿರಸಿ: ವಿದ್ಯಾರ್ಥಿಗಳು ವ್ಯಸನಗಳಿಗೆ ಬಲಿಯಾಗದಂತೆ ತಡೆಯಲು ಸಂಸ್ಕಾರ ಮತ್ತು ಸೂಕ್ತ ಮಾರ್ಗದರ್ಶನಗಳಿಂದ ಮಾತ್ರ ಸಾಧ್ಯ ಎಂದು ಮಕ್ಕಳ ತಜ್ಞ ಡಾ.ದಿನೇಶ ಹೆಗಡೆ ಹೇಳಿದರು.

Vijaya Karnataka 21 Nov 2019, 5:00 am
ಶಿರಸಿ: ವಿದ್ಯಾರ್ಥಿಗಳು ವ್ಯಸನಗಳಿಗೆ ಬಲಿಯಾಗದಂತೆ ತಡೆಯಲು ಸಂಸ್ಕಾರ ಮತ್ತು ಸೂಕ್ತ ಮಾರ್ಗದರ್ಶನಗಳಿಂದ ಮಾತ್ರ ಸಾಧ್ಯ ಎಂದು ಮಕ್ಕಳ ತಜ್ಞ ಡಾ.ದಿನೇಶ ಹೆಗಡೆ ಹೇಳಿದರು.
Vijaya Karnataka Web give proper guidance to children
ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ


ಆಳ್ವಾ ಫೌಂಡೇಶನ್‌, ಐಎಂಎ ಮತ್ತು ಅರುಣೋದಯ ಟ್ರಸ್ಟ್‌ ಸಹಯೋಗದಲ್ಲಿನಾಣಿಕಟ್ಟಾ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿಯುವಕ ಯುವತಿಯರಿಗಾಗಿ ಹಮ್ಮಿಕೊಂಡಿದ್ದ ವ್ಯಸನಗಳ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಹುಟ್ಟಿನಿಂದ ಪಡೆದುಕೊಂಡ ಸಂಸ್ಕಾರವು ಒಂದು ಅಶ್ವಬಲವಾಗಿದ್ದರೆ, ದುಶ್ಚಟಗಳು ಹತ್ತು ಅಶ್ವಬಲಗಳಿಂದ ಮನಸೆಳೆಯುವ ಕಾರಣ ಹದಿಹರೆಯದ ಮಕ್ಕಳು ಬಹುಬೇಗ ವ್ಯಸನಗಳಿಗೆ ಬಲಿಯಾಗುತ್ತಾರೆ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ ತಿಳಿವಳಿಕೆ ಮೂಡಿಸುವುದು ಹದಿಹರೆಯದ ವಯೋ ಸಹಜ ಚಿತ್ತ ಚಾಂಚಲ್ಯದಿಂದ ಹೊರಬರಲು ಸಹಾಯಕವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಮ್‌. ಕೆ.ನಾಯ್ಕ ವಿದ್ಯಾರ್ಥಿಗಳಲ್ಲಿಜಾಗೃತಿ ಮೂಡಿಸುತ್ತಿರುವ ಆಳ್ವಾ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ ಎಂದರು. ಉಪನ್ಯಾಸಕರುಗಳಾದ ನಾಗವೇಣಿ ಹೆಚ್‌.ನಾಯ್ಕ, ಓಂಕಾರಪ್ಪ ಶಿಂಧೆ, ಮಂಜುನಾಥ ಹೆಗಡೆ, ಎ.ಎಲ್‌.ನಾಯ್ಕ, ಶೈಲಾ ಕೆ. ಹೆಗಡೆ, ತನುಜಾ ನಾಯ್ಕ, ಅರುಣೋದಯ ಟ್ರಸ್ಟ್‌ನ ಸುಭಾಶ್‌ ಮುಂಡೂರ, ಚಂದ್ರಕಾಂತ ಪವಾರ, ಸವಿತಾ ಮುಂಡೂರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ