ಆ್ಯಪ್ನಗರ

ಅರಣ್ಯನಾಶದಿಂದ ಜಾಗತಿಕ ತಾಪಮಾನ ಏರಿಕೆ

ಶಿರಸಿ : ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅರಣ್ಯನಾಶದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುವುದರೊಂದಿಗೆ ಜಲಮೂಲಗಳು ಬರಿದಾಗುತ್ತಿವೆ ಎಂದು ಎಂ.ಎಂ.ಕಾಲೇಜಿನ ಭೂಗೋಳಶಾಸ್ತ್ರ ವಿಭಾಗ ಮುಖ್ಯಸ್ಥೆ ಕೋಮಲಾ ಭಟ್ಟ ಹೇಳಿದರು.

Vijaya Karnataka 7 Mar 2019, 5:00 am
ಶಿರಸಿ : ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅರಣ್ಯನಾಶದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುವುದರೊಂದಿಗೆ ಜಲಮೂಲಗಳು ಬರಿದಾಗುತ್ತಿವೆ ಎಂದು ಎಂ.ಎಂ.ಕಾಲೇಜಿನ ಭೂಗೋಳಶಾಸ್ತ್ರ ವಿಭಾಗ ಮುಖ್ಯಸ್ಥೆ ಕೋಮಲಾ ಭಟ್ಟ ಹೇಳಿದರು.
Vijaya Karnataka Web SRS-6SRS9


ಗೋಳಿ ರಂಗಮಂದಿರದಲ್ಲಿ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರದಲ್ಲಿ ಜೀವಜಲ ಸಂರಕ್ಷ ಣೆಯ ಕುರಿತು ಅವರು ಉಪನ್ಯಾಸ ನೀಡಿದರು. ಮಾನವನಿಗೆ ಉಸಿರಾಡಲು ಗಾಳಿ ಹೇಗೆ ಅವಶ್ಯಕವೋ ಹಾಗೇ ಬದುಕಲು ಜೀವಜಲ ಅತ್ಯಗತ್ಯವಾಗಿದೆ. ಮಾನವನ ಮಿತಿಮೀರಿದ ಚಟುವಟಿಕೆಗಳಿಂದಾಗಿ ಜಲಮೂಲಗಳು ಮಲೀನವಾಗುತ್ತಿರುವುದಲ್ಲದೇ ಅತಿಯಾದ ಪರಿಸರ ನಾಶದಿಂದ ಜಲಮೂಲಗಳು ಬರಿದಾಗುತ್ತಿವೆ. ಕೇವಲ ಮಾನವನಷ್ಟೇ ಅಲ್ಲದೆ ವನ್ಯಮೃಗಗಳಿಗೂ ಕೂಡ ಕುಡಿಯಲು ನೀರಿಲ್ಲದೆ ಸಾವನ್ನಪ್ಪುತ್ತಿರುವುದು ವಿಷಾದಕರ ಸಂಗತಿ ಎಂದರು.

ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಪೃಥ್ವಿಯ ಮೇಲೆ ಮಾನವನ ಅಸ್ತಿತ್ವವೇ ಭವಿಷ್ಯದ ದಿನಗಳಲ್ಲಿ ಪ್ರಶ್ನಾತೀತವಾಗಿದೆ. ಭೂಮಿಯ ಮುಕ್ಕಾಲು ಭಾಗ ನೀರಿನಿಂದಲೇ ಕೂಡಿದ್ದರೂ ಶೇ.3 ನೀರು ಮಾತ್ರ ಪ್ರಾಣಿಗಳ ಬಳಕೆಗೆ ಸಿಗುತ್ತದೆ ಎಂದರು.

ಇಂದಿನ ದಿನಮಾನಗಳಲ್ಲಿ ಹನಿ ನೀರಿಗೂ ಕಾದಾಡುವ ಪರಿಸ್ಥಿತಿ ಬಂದೊದಗಿರುವುದಲ್ಲದೇ ಮುಂದಿನ ದಿನಗಳಲ್ಲಿ ಜಲಯುದ್ಧಗಳನ್ನೂ ಕೂಡ ನಿರೀಕ್ಷಿಸುವಂತಹ ಸ್ಥಿತಿ ಬಂದೊದಗಿದೆ. ಜೀವಜಲ ನಮ್ಮ ಸ್ವತ್ತಲ್ಲ ಅದು ನಾವು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ನಿಧಿ. ನಾವೆಲ್ಲರೂ ಈ ನಿಟ್ಟಿನಲ್ಲಿ ಪ್ರಜ್ಞಾವಂತಿಕೆಯಿಂದ ವರ್ತಿಸಿ ಮಿತವಾಗಿ ನೀರನ್ನು ಬಳಸಿ ಇರುವ ಕನಿಷ್ಟ ಪ್ರಮಾಣದ ಜಲ ಮೂಲಗಳನ್ನು ಉಳಿಸಬೇಕಿದೆ. ಯುವಜನತೆ ಈ ಕುರಿತು ಜಾಗೃತವಾಗಿ ಸಮಾಜದಲ್ಲಿ ತಿಳಿವಳಿಕೆ ನೀಡುವ ಮೂಲಕ ರಕ್ಷ ಣಾ ಕಾರ್ಯಕ್ಕೆ ಧುಮುಕಬೇಕಿದೆ ಎಂದರು.

ವಿದ್ಯಾಪ್ರಸಾರ ಸಮಿತಿ ಗೋಳಿಯ ಅಧ್ಯಕ್ಷ ವಿಶ್ವನಾಥ ಶರ್ಮಾ ನಾಡಗುಳಿ ಅಧ್ಯಕ್ಷ ತೆ ವಹಿಸಿದ್ದರು. ಎನ್‌ಎಸ್‌ಎಸ್‌ ಯೋಜನಾಧಿಕಾರಿ ಪ್ರೊ.ಕೆ.ಎನ್‌.ರೆಡ್ಡಿ, ಹಿಂದಿ ವಿಭಾಗದ ಪ್ರೊ. ಸುಜಾತಾ ಪಾತರಪೇಕರ್‌ ಉಪಸ್ಥಿತರಿದ್ದರು. ಸಿಂಧು ಸ್ವಾಗತಿಸಿದರು. ಸಚಿನ್‌ ನಾಯ್ಕ ವಂದಿಸಿದರು. ಅರ್ಚನಾ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ