ಆ್ಯಪ್ನಗರ

ಲಾಭದಲ್ಲಿಗೋಕರ್ಣ ವ್ಯವಸಾಯ ಸೇವಾ ಸಹಕಾರಿ ಸಂಘ

ಗೋಕರ್ಣ : ಇಲ್ಲಿಯ ಗೋಕರ್ಣ ವ್ಯವಸಾಯ ಸೇವಾ ಸಹಕಾರಿ ಸಂಘದ 2018-19ನೇ ಸಾಲಿನ ಮಹಾಸಭೆಯು ಸಂಘದ ಕಟ್ಟಡದಲ್ಲಿಇತ್ತೀಚೆಗೆ ನಡೆಯಿತು.

Vijaya Karnataka 11 Sep 2019, 5:00 am
ಗೋಕರ್ಣ : ಇಲ್ಲಿಯ ಗೋಕರ್ಣ ವ್ಯವಸಾಯ ಸೇವಾ ಸಹಕಾರಿ ಸಂಘದ 2018-19ನೇ ಸಾಲಿನ ಮಹಾಸಭೆಯು ಸಂಘದ ಕಟ್ಟಡದಲ್ಲಿಇತ್ತೀಚೆಗೆ ನಡೆಯಿತು.
Vijaya Karnataka Web 38259 GKN 1 A_24


ಸಂಘದ ಅಧ್ಯಕ್ಷ ರಾಜಗೋಪಾಲ ಅಡಿ ಮಾತನಾಡಿ, 'ಸಹಕಾರಂ ಗೆಲ್ಗೆ' ತತ್ವದಡಿ ನಂಬಿಕೆಯಿಟ್ಟಿರುವ ಸಂಘವು ಪ್ರಸಕ್ತ ವರ್ಷ 25 ಲಕ್ಷದ 23 ಸಾವಿರದ 77 ರೂ. ನಿವ್ವಳ ಲಾಭ ಗಳಿಸಿದ್ದು, ಶೇಕಡಾ 12ರಷ್ಟು ಡಿವಿಡೆಂಟ್‌ ಹಂಚಿಕೆ ಮಾಡಲಿದೆ. ಸದಸ್ಯರಿಗೆ ಎಲ್ಲತರಹದ ಸಾಲ ಸೌಲಭ್ಯಗಳನ್ನು ನೀಡಲು ಸಂಘ ಬದ್ಧ್ದವಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಸಂಘದಲ್ಲಿಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ತಮ್ಮೆಲ್ಲರ ಸಹಕಾರದಿಂದ ಕೈಗೊಂಡಿದ್ದು ಕಾರ್ಯಾಲಯವನ್ನು ಸಂಪೂರ್ಣ ಗಣಕೀಕರಣ ಗೊಳಿಸಲಾಗಿದೆ. ಯೋಗ್ಯದರದ ಅಂಗಡಿಗೆ ಬಯೋಮೆಟ್ರಿಕ್‌ ರೇಷನ್‌ ವಿತರಣೆಗಾಗಿ ಕೌಂಟರ ನಿರ್ಮಿಸಲಾಗಿದ್ದು, ಸಂಘದ ಎಲ್ಲಾಸ್ವತ್ತುಗಳ ರಕ್ಷಣೆಗಾಗಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗ್ರಾಹಕರಿಗೆ ಅನುಕೂಲಕರವಾಗಲೆಂದು ಪಿಗ್ಮಿ ಸಂಗ್ರಹಕರಿಗೆ ಪಾವತಿ ಯಂತ್ರವನ್ನು ನೀಡಲಾಗಿದ್ದು, ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಂಘದ ನೂತನ ಬೃಹತ್‌ ಕಟ್ಟಡಕ್ಕೆ ನೀಲನಕ್ಷೆ ಸಿದ್ದವಾಗಿದ್ದು ಸದ್ಯದಲ್ಲೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರಕಲಿದೆ ಎಂದು ಅವರು ಹೇಳಿದರು.

ಈ ಸಮಯದಲ್ಲಿಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರದೀಪ್‌ ಗಣಪತಿ ಆಚಾರ್ಯ ವಾರ್ಷಿಕ ವರದಿ ವಾಚನಮಾಡಿದರು. ಈ ಸಂದರ್ಭದಲ್ಲಿಸಂಘದ ಉಪಾಧ್ಯಕ್ಷ ಮಹೇಶ ಮಾರ್ಕಂಡೆ, ನಿರ್ದೇಶಕರಾದ ಗಣಪಯ್ಯ ಉಪಾಧ್ಯ, ಗಣಪತಿ ಆರ್‌. ಗೌಡ, ತಮ್ಮಣ್ಣ ನಾಯಕ್‌, ಜೈರಾಮ ಹೆಗಡೆ, ಮಂಗಳಮೂರ್ತ ಸಭಾಹಿತ್‌, ಸಂತೋಷ್‌ ಅಡಿ, ರಮಾ ಆಚಾರಿ, ಶುಭ ಭಟ್‌, ಲಂಬೋದರ ಸಭಾಹಿತ್‌, ಹುಲಿಯ ಗೌಡ, ನೂರಾರು ಸಂಖ್ಯೆಯಲ್ಲಿಸದಸ್ಯರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ