ಆ್ಯಪ್ನಗರ

ಗೋಕರ್ಣ:ಅನಂತಕುಮಾರ ಅಸ್ಥಿ ವಿಸರ್ಜನೆ

ಗೋಕರ್ಣ : ಗೋಕರ್ಣಕ್ಕೆ ಬಂದಿದ್ದ ಕೇಂದ್ರ ಸಚಿವ ಎಚ್‌.ಎನ್‌.ಅನಂತಕುಮಾರ್‌ ಅವರ ಅಸ್ಥಿಯನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶನಿವಾರ ತಾಮೃಪರ್ಣಿ ತೀರ್ಥದಲ್ಲಿ ವಿಸರ್ಜಿಸಿದರು. ಅಸ್ಥಿ ವಿಸರ್ಜನೆ ನಿಮಿತ್ತ ಕೋಟೀತೀರ್ಥದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹವನಗಳ ಮೂಲಕ ಅಸ್ಥಿಶುದ್ಧ ಕಾರ್ಯ ನಡೆಸಲಾಯಿತು.

Vijaya Karnataka 2 Dec 2018, 5:00 am
ಗೋಕರ್ಣ : ಗೋಕರ್ಣಕ್ಕೆ ಬಂದಿದ್ದ ಕೇಂದ್ರ ಸಚಿವ ಎಚ್‌.ಎನ್‌.ಅನಂತಕುಮಾರ್‌ ಅವರ ಅಸ್ಥಿಯನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶನಿವಾರ ತಾಮೃಪರ್ಣಿ ತೀರ್ಥದಲ್ಲಿ ವಿಸರ್ಜಿಸಿದರು. ಅಸ್ಥಿ ವಿಸರ್ಜನೆ ನಿಮಿತ್ತ ಕೋಟೀತೀರ್ಥದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹವನಗಳ ಮೂಲಕ ಅಸ್ಥಿಶುದ್ಧ ಕಾರ್ಯ ನಡೆಸಲಾಯಿತು.
Vijaya Karnataka Web KWR-1 GKN 1 E-65030


ಅಸ್ಥಿ ವಿಸರ್ಜನೆ ಬಳಿಕ ಶ್ರೀ ಮಹಾಬಳೇಶ್ವರ ಮಂದಿರದಲ್ಲಿ ಕಾಗೇರಿಯವರು ವಿಶೇಷ ಪೂಜೆ ಕೈಗೊಂಡರು. ಶಾಸಕ ದಿನಕರ ಶೆಟ್ಟಿ, ಹಿರಿಯ ಮುಖಂಡರಾದ ವಿನೋದ ಪ್ರಭು, ಡಾ.ಎಸ್‌.ವಿ.ಜಠಾರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಿ.ಆರ್‌.ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಅಂಕೋಲಾದ ಭಾಸ್ಕರ್‌ ನಾವೇಕರ್‌, ಯುವಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು, ಬಿಜೇಪಿ ಮುಖಂಡ ಆನಂದು ಕವರಿ, ನಾಗರಾಜ ನಾಯಕ ತೊರ್ಕೆ, ಅಂಕೋಲಾದ ಬಿಜೇಪಿ ಮುಖಂಡ ಬಿಂದೇಶ್‌ ನಾಯಕ ಮುಂತಾದವರು ಇದ್ದರು.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ