ಆ್ಯಪ್ನಗರ

ಗೋಕರ್ಣಕ್ಕೆ ಬೇಕು ಸುಸಜ್ಜಿತ ಮೀನು ಮಾರುಕಟ್ಟೆ

ಗೋಕರ್ಣ : ಮಳೆ ಬಂದರೆ ನದಿ, ಮಳೆನಿಂತರೆ ಹೊಲಸು.. ಇದರ ಮಧ್ಯೆ ಮೀನು ವ್ಯಾಪಾರ.. ಜತೆಗೆ ವಾಹನಗಳ ದಟ್ಟಣೆ..

Vijaya Karnataka 10 Sep 2020, 5:00 am
ಗೋಕರ್ಣ : ಮಳೆ ಬಂದರೆ ನದಿ, ಮಳೆನಿಂತರೆ ಹೊಲಸು.. ಇದರ ಮಧ್ಯೆ ಮೀನು ವ್ಯಾಪಾರ.. ಜತೆಗೆ ವಾಹನಗಳ ದಟ್ಟಣೆ..
Vijaya Karnataka Web 9 GKN 1 B_24
ಗೋಕರ್ಣದಲ್ಲಿಗಲೀಜು ನೀರು ನಿಂತಿರುವ ರಸ್ತೆಯಲ್ಲಿಯೇ ಮೀನು ಮಾರಾಟ ಮಾಡಲಾಗುತ್ತಿದೆ.


ಇದು ಇಲ್ಲಿನ ಮೀನು ಮಾರುಕಟ್ಟೆಯ ಕಥೆ. ಇಲ್ಲಿಯ ಏಕ ಮುಖ ಸಂಚಾರದ ರಸ್ತೆ ಬದಿಯಲ್ಲಿಒಂದೆರಡು ಕಟ್ಟೆ ಕಟ್ಟಿ ಇಟ್ಟಿದ್ದು, ಇಲ್ಲಿಒಂದಿಷ್ಟು ಜನ ಕುಳಿತರೆ, ಇನ್ನು ಸ್ವಲ್ಪ ಜನ ರಸ್ತೆಯ ಅಂಚಿನಲ್ಲಿಯೇ ಕುಳಿತು ಮೀನು ವ್ಯಾಪಾರ ಮಾಡುತ್ತಾರೆ. ತೀರ ಕಿರಿದಾದ ಜಾಗದಲ್ಲಿವಾಹನ ಸಂಚಾರದಿಂದ ದಟ್ಟಣೆ ಉಂಟಾಗುತ್ತಿದೆ.

ಸ್ಥಳಾಂತರ ಬೇಡ : ಈ ಹಿಂದೆ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು.ಆದರೆ ಮೀನು ವ್ಯಾಪಾರಸ್ಥರಲ್ಲೇ ಬಿನ್ನಾಭಿಪ್ರಾಯ ಉಂಟಾಗಿ ಅಲ್ಲಿಗೇ ನಿಂತಿತ್ತು. ಮೀನು ಮಾರುಕಟ್ಟೆಯು ಬಸ್‌ ನಿಲ್ದಾಣದ ಹತ್ತಿರದಲ್ಲಿದ್ದು ಸುತ್ತಮುತ್ತಲಿನ ಹಳ್ಳಿಗಳಾದ ಗಂಗಾವಳಿ, ಬರ್ಗಿ, ಹಿಲ್ಲೂರು ಊರಿನ ಜನರಿಗೆ ಕೇಂದ್ರ ಸ್ಥಳವಾಗಿದ್ದು ಮೀನು ಕೊಂಡೊಯ್ಯಲು ಸುಲಭವಾಗಿದೆ. ಹಾಗೂ ವ್ಯಾಪಾರಸ್ಥರಿಗೂ ಉತ್ತಮ ಬೆಲೆ ದೊರೆಯುತ್ತದೆ. ಪ್ರಸ್ತು್ತತವಿರುವ ಮೀನು ಮಾರುಕಟ್ಟೆಯ ಎರಡೂ ಬದಿಗಳಲ್ಲಿಜಾಗವಿದ್ದು ಅಲ್ಲಿಯೇ ಅಗಲೀಕರಣ ನಡೆಸಿ ಕಟ್ಟಡ ನಿರ್ಮಿಸಿಕೊಡಬೇಕೆಂದು ಮೀನು ಮಾರಾಟಗಾರರು ತಿಳಿಸಿದ್ದಾರೆ.

ಶೀಘ್ರದಲ್ಲೇ ಆಗಲಿ : ಆದಷ್ಟು ಬೇಗ ಅಗಲೀಕರಣಗೊಳಿಸಿ ಕಟ್ಟಡ ನಿರ್ಮಿಸಿಕೊಡಬೇಕಾದ ಅವಶ್ಯಕತೆ ಇದೆ. ಮಳೆಬಿಸಿಲೆನ್ನದೇ ರಸ್ತೆಯ ಅಂಚಿನಲ್ಲಿಯೇ ಕುಳಿತು ಮೀನು ಮಾರುವ ಪರಿಸ್ಥಿತಿ ಮೀನು ಮಾರಾಟಗಾರರದ್ದಾಗಿದೆ. ವಾಹನ ಸಂಚಾರಕ್ಕೆ ದಟ್ಟಣೆಯೂ ಉಂಟಾಗುತ್ತದೆ. ಇನ್ನು ಸ್ವಚ್ಛತೆಯಂತೂ ದೂರದ ಮಾತಾಗಿದ್ದು ಸಾಮಾಜಿಕ ಅಂತರ, ಮಾಸ್ಕ್‌ ಬಳಕೆ, ಪ್ಲಾಸ್ಟಿಕ್‌ ನಿಷೇಧ ಎಲ್ಲವನ್ನೂ ಸಂಪೂರ್ಣ ಮರೆಯಲಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ