ಆ್ಯಪ್ನಗರ

ಅನುದಿನದ ದಂದುಗ ಕೃತಿಗೆ ಗ್ರಂಥ ಪ್ರಶಸ್ತಿ

ದಾಂಡೇಲಿ : ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ಪ್ರತಿ ವರ್ಷ ಕವಿ, ಹೋರಾಟಗಾರ ದಿ.ರಾಮ ಜಾಧವ ಸ್ಮರಣಾರ್ಥ ನಾಡು-ನುಡಿ ನೆಲ-ಜಲದ ಬಗ್ಗೆ ಉತ್ತಮ ಗ್ರಂಥ ಬರೆದ ಲೇಖಕರಿಗೆ ಗ್ರಂಥ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು 2018ನೇ ಸಾಲಿನ ಈ ಪ್ರಶಸ್ತಿಗೆ ಲೇಖಕಿ ಡಾ.ವಿನಯಾ ಒಕ್ಕುಂದ ಅವರ 'ಅನುದಿನದ ದಂದುಗ' ಕೃತಿ ಆಯ್ಕೆಯಾಗಿದೆ.

Vijaya Karnataka 28 May 2019, 5:00 am
ದಾಂಡೇಲಿ : ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ಪ್ರತಿ ವರ್ಷ ಕವಿ, ಹೋರಾಟಗಾರ ದಿ.ರಾಮ ಜಾಧವ ಸ್ಮರಣಾರ್ಥ ನಾಡು-ನುಡಿ ನೆಲ-ಜಲದ ಬಗ್ಗೆ ಉತ್ತಮ ಗ್ರಂಥ ಬರೆದ ಲೇಖಕರಿಗೆ ಗ್ರಂಥ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು 2018ನೇ ಸಾಲಿನ ಈ ಪ್ರಶಸ್ತಿಗೆ ಲೇಖಕಿ ಡಾ.ವಿನಯಾ ಒಕ್ಕುಂದ ಅವರ 'ಅನುದಿನದ ದಂದುಗ' ಕೃತಿ ಆಯ್ಕೆಯಾಗಿದೆ.
Vijaya Karnataka Web grant award for anudina dandut kruti
ಅನುದಿನದ ದಂದುಗ ಕೃತಿಗೆ ಗ್ರಂಥ ಪ್ರಶಸ್ತಿ


ಮೇ 30 ರಂದು ಬೆಳಗ್ಗೆ 11.30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಪ್ರಶಸ್ತಿಯು 10 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಶಿವರಾಮ ಹೆಬ್ಬಾರ ಅಧ್ಯಕ್ಷ ತೆ ವಹಿಸಲಿದ್ದಾರೆ. ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ, ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ ಚೆನ್ನೇಗೌಡ, ಎಸ್‌.ಕೆ ಹಳ್ಳಿ, ಸತೀಶ ತುರುಮುರಿ, ಪ್ರಭುಸ್ವಾಮಿ ಕೆ.ಎಸ್‌, ಸಂತೋಶ ಹಾನಗಲ್‌, ಜ್ಯೋತಿಬಾ ಕೈರೋಜಿ ಮುಂತಾದವರು ಉಪಸ್ಥಿತರಿರುವರು. ಕವಿವಿ ಕನ್ನಡ ಪ್ರಾಧ್ಯಾಪಕ ಡಾ.ಜೆ.ಎಮ್‌ ನಾಗಯ್ಯ ಗ್ರಂಥ ಪರಿಚಯಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ