ಆ್ಯಪ್ನಗರ

ಗ್ರಾಪಂ ಅಧ್ಯಕ್ಷರು, ಪಿಡಿಒಗೆ ನೋಟಿಸ್‌

ಮುಂಡಗೋಡ : ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಸಾಲಿ ಗ್ರಾಮದ ಬಳಿಯ ಅರಣ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೃಷಿಹೊಂಡ ನಿರ್ಮಾಣ ಕಾಮಗಾರಿಯನ್ನು ಜೆಸಿಬಿ ಯಂತ್ರದಿಂದ ಮಾಡಿರುವುದು ಧೃಡಪಟ್ಟಿರುವ ಹಿನ್ನಲೆಯಲ್ಲಿ ತಾಲೂಕಿನ ಕಾತೂರ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷ ರಿಗೆ ಎಚ್ಚರಿಕೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಒಂಬುಡ್ಸಮೆನ್‌ ರವಿರಾಜ್‌ ನಾರಾಯಣ ಎಂ. ತಿಳಿಸಿದ್ದಾರೆ.

Vijaya Karnataka 26 May 2019, 5:00 am
ಮುಂಡಗೋಡ : ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಸಾಲಿ ಗ್ರಾಮದ ಬಳಿಯ ಅರಣ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೃಷಿಹೊಂಡ ನಿರ್ಮಾಣ ಕಾಮಗಾರಿಯನ್ನು ಜೆಸಿಬಿ ಯಂತ್ರದಿಂದ ಮಾಡಿರುವುದು ಧೃಡಪಟ್ಟಿರುವ ಹಿನ್ನಲೆಯಲ್ಲಿ ತಾಲೂಕಿನ ಕಾತೂರ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷ ರಿಗೆ ಎಚ್ಚರಿಕೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಒಂಬುಡ್ಸಮೆನ್‌ ರವಿರಾಜ್‌ ನಾರಾಯಣ ಎಂ. ತಿಳಿಸಿದ್ದಾರೆ.
Vijaya Karnataka Web grapam president notice to pdo
ಗ್ರಾಪಂ ಅಧ್ಯಕ್ಷರು, ಪಿಡಿಒಗೆ ನೋಟಿಸ್‌


ತಾಲೂಕಿನ ಮುಡಸಾಲಿ ಗ್ರಾಮದ ಬಳಿಯ ಅರಣ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಲು ಪಂಚಾಯಿತಿಯವರು ಮಂಜೂರು ಮಾಡಿದ್ದರು. ಆದರೆ ಕೂಲಿ ಕಾರ್ಮಿಕರಿಂದ ಮಾಡಿಸಬೇಕಿದ್ದ ಕಾಮಗಾರಿಯನ್ನು ಜೆಸಿಬಿ ಯಂತ್ರದಿಂದ ಮಾಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯರು ದೂರು ಹಾಗೂ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ಒಂಬುಡ್ಸಮೆನ್‌ ಜೆಸಿಬಿ ಯಂತ್ರ ಬಳಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ನೋಟಿಸ್‌ ಜಾರಿ ಮಾಡಿದ್ದಾರೆ.

ಮುಡಸಾಲಿ ಅರಣ್ಯದಲ್ಲಿ ಜೆಸಿಬಿ ಯಂತ್ರ ಬಳಸಿ ಗ್ರಾಪಂ ವತಿಯಿಂದಲೇ ಕೃಷಿ ಹೊಂಡ ನಿರ್ಮಿಸಿದ್ದು ದೃಢಪಟ್ಟಿದೆ, ಅರಣ್ಯದಲ್ಲಿ ಅರಣ್ಯೇತರ ಚಟುವಟಿಕೆಗೆ ಜೆಸಿಬಿ ಬಳಕೆ ಮಾಡುವ ಮೂಲಕ ಪಿಡಿಒ ಹಾಗೂ ಅಧ್ಯಕ್ಷ ರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆಯವರು ಇಂತಹ ಕೆಲಸ ಮಾಡಬೇಡಿ ಎಂದು ತಿಳಿಸಿದ್ದರೂ ಸಹ ಮತ್ತೆ ಅದೆ ರೀತಿ ಮಾಡಿರುವುದು ಗಮನಿಸಿದರೆ ಇವರಿಗೆ ಕಾನೂನಿನ ಬಗ್ಗೆ ಗೌರವ ಇರುವುದಿಲ್ಲ ಅನಿಸುತ್ತದೆ. ಈಗಾಗಲೇ 10ಎನ್‌ಎಂಆರ್‌ಗಳನ್ನು ಶೂನ್ಯ ಮಾಡಲಾಗಿದೆ. ನಿಯಮ ಬಾಹಿರವಾಗಿ ಕೃಷಿಹೊಂಡ ಕಾಮಗಾರಿ ಮಾಡಿದ್ದು, ಕೆರೆ ನಿರ್ಮಾಣಕ್ಕೆ ತಗುಲುತ್ತಿದ್ದ 2.08.236 ರೂ. ಹಣವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪಿಡಿಒ ಹಾಗೂ ಅಧ್ಯಕ್ಷ ರು ಸೇರಿ ನರೇಗಾ ದಂತಹ ಮಹತ್ವದ ಯೋಜನೆಯ ಮೂಲ ಉದ್ದೇಶವನ್ನು ಬದಿಗೊತ್ತಿದ್ದು ಇನ್ನೂ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಪಾರದರ್ಶಕತೆ ಕಾಪಾಡಲು ಪ್ರತಿಯೊಂದು ಕಾಮಗಾರಿಗಳ ಅಂದಾಜು ಪಟ್ಟಿ, ತಾಂತ್ರಿಕ ಹಾಗೂ ಆರ್ಥಿಕ ಮಂಜೂರಾತಿ, ಜಿಯೋ ಟ್ಯಾಗ್‌ ಒಂದೆ ಆಗಿರತಕ್ಕದ್ದು ಒಂದು ಮಂಜೂರಾತಿ ಒಂದೆ ಕಾಮಗಾರಿಗೆ ಇರತಕ್ಕದ್ದು ಅದನ್ನು ವಿಭಜಿಸತಕ್ಕದ್ದಲ್ಲ ಅಧಿಕಾರ ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ಅವರು ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಮುಂದೆ ಇಂತಹ ಘಟನೆ ನಡೆದರೆ ಸೂಕ್ತ ಕಾನೂನು ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ