ಆ್ಯಪ್ನಗರ

ಮಾತಾ ಪಿತರು, ಗುರುವಿನ ಸ್ಥಾನ ದೊಡ್ಡದು

ದಾಂಡೇಲಿ : ನಗರದ ಭಾರತೀಯ ಸಂಗೀತ ವಿದ್ಯಾಲಯದವರು ಗುರುಪೂರ್ಣಿಮಾ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಆಚರಿಸಿದರು.

Vijaya Karnataka 3 Aug 2019, 5:00 am
ದಾಂಡೇಲಿ : ನಗರದ ಭಾರತೀಯ ಸಂಗೀತ ವಿದ್ಯಾಲಯದವರು ಗುರುಪೂರ್ಣಿಮಾ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಆಚರಿಸಿದರು.
Vijaya Karnataka Web great is the position of the guru
ಮಾತಾ ಪಿತರು, ಗುರುವಿನ ಸ್ಥಾನ ದೊಡ್ಡದು


ಅತಿಥಿಗಳಾಗಿ ಉಪಸ್ಥಿತರಿದ್ದ ಸಿ.ಎನ್‌.ಸುರಕೊಡ ಮಾತನಾಡಿ, ನಮ್ಮ ದೇಶ, ಸಂಸ್ಕೃತಿ, ಪರಂಪರೆಯಂತೆ ಮಾತಾಪಿತರ ಮತ್ತು ಗುರುವಿನ ಸ್ಥಾನ ದೊಡ್ಡದು. ಪುರಾಣದ ರಾಮಾಯಣ-ಮಹಾಭಾರತ ಕಾಲದಿಂದಲೂ ಆಷಾಡ ಮಾಸ ಶುಕ್ಲ ಪಕ್ಷ ದ ಹುಣ್ಣಿಮೆ ಗುರುಪೂರ್ಣಿಮಾ ಆಚರಿಸುತ್ತ ಬಂದಿದ್ದು, ಗುರುವಂದನದ ಕುರಿತು ವಿವರವಾಗಿ ಮಾತನಾಡಿದರು.

ಸಂಗೀತ ವಿದ್ಯಾಲಯದ ಗುರುಗಳಾದ ಚಂದ್ರಶೇಖರ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮಹತ್ವ ಮತ್ತು ಸತತ ಕಲಿಕೆಯ ಮಹತ್ವದ ಕುರಿತು ವಿವರಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂಗೀತ ಕಾರ್ಯಕ್ರಮದಲ್ಲಿ 'ಕಲಿಸು ಗುರುವೆ ಕಲಿಸು' ಎಂಬ ಗೀತೆಯನ್ನು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಇಂಪಾಗಿ ಹಾಡಿ ಸಭಿಕರ ಮೆಚ್ಚುಗೆ ಪಡೆದರು. ಉಷಾ, ಸುರಕೊಡ ಸಿ.ಎನ್‌., ಮಂಜುಳಾ ನಾಕಾಡೆ ಮತ್ತು ಉಮಾ ಶಿಂಧೆ ಗುರುಗಳ ಗೀತೆ ಸಂಗೀತ ಮನ ನರ್ತಿಸುವಂತೆ ಹಾಡಿದರು. ಮೇಘಾ ಕು.ವಿಶ್ರೂತ, ಕು.ನಮನ, ಕು.ಜೈತ ಇಂಪಾಗಿ ಕೊಳಲು ವಾದನ ನುಡಿಸಿದರು. ಕು.ಜೈತ ರಾಗ ಯಮನನಲ್ಲಿ ಕೊಳಲು ನುಡಿಸಿ ನೆರೆದವರ ಪ್ರೀತಿಗೆ ಪಾತ್ರನಾದನು. ಸಂಗೀತ ಗುರುಗಳಾದ ಚಂದ್ರಶೇಖರ ಕರುಣಿಸೊ ರಂಗಾ ಕರುಣಿಸೊ ಕೃಷ್ಣ ಎಂಬ ಭಕ್ತಿಗೀತೆಯನ್ನು ಎಲ್ಲರೂ ಮೆಚ್ಚುವಂತೆ ಹಾಡಿದರು. ಜೊತೆಗೆ ಮಾಲಾ ಚಂದ್ರಶೇಖರ, ಲಕ್ಷ್ಮೀ ಜಾಧವ, ವಸುಧಾ ಗೊಠೆ ಹಾಗೂ ಮಂಜುಳಾ ತಂಬೂರಿ ಸಾಥ ನೀಡಿದರು.

ಉಷಾ ಪೂಜಾರಿ ಸ್ವಾಗತಿಸಿದರು. ಸುಮಾ ಮತ್ತು ವಸುಂಧರಾ ಗೊಠೆ ನಿರೂಪಿಸಿದರು. ಉಮಾ ಶಿಂಧೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ