ಆ್ಯಪ್ನಗರ

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಟಿ ಹೆಗಡೆಗೆ ಸನ್ಮಾನ

ಶಿರಸಿ :ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಟಿ. ಹೆಗಡೆ ದಂಪತಿಯನ್ನು ತಾಲೂಕಿನ ಶಿಂಗ್ನಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಸುತ್ತಮುತ್ತಲ ಗ್ರಾಮಸ್ಥರು ಸನ್ಮಾನಿಸಿದರು.

Vijaya Karnataka 2 Dec 2018, 5:00 am
ಶಿರಸಿ :ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಟಿ. ಹೆಗಡೆ ದಂಪತಿಯನ್ನು ತಾಲೂಕಿನ ಶಿಂಗ್ನಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಸುತ್ತಮುತ್ತಲ ಗ್ರಾಮಸ್ಥರು ಸನ್ಮಾನಿಸಿದರು.
Vijaya Karnataka Web SRS-1SIRSI15


ಬಳಿಕ ಜಿ.ಟಿ.ಹೆಗಡೆಯವರು ಮಾತನಾಡಿ, ಸಹಕಾರಿ ಸಂಘಗಳ ಅಭಿವೃದ್ಧಿ ಎಂದರೆ ರೈತರ ಅಭಿವೃದ್ಧಿ ಎಂದರ್ಥ ಎಂದರು.

ಸಹಕಾರಿ ಕ್ಷೇತ್ರದಲ್ಲಿನ ಸದಸ್ಯರು ಪ್ರಾಮಾಣಿಕ ವ್ಯವಹಾರದ ಜೊತೆಯಲ್ಲಿ ನಂಬಿಕೆಯಿಟ್ಟಿದ್ದರಿಂದ ರಾಜ್ಯ ಮಟ್ಟದ ಸಹಕಾರಿ ರತ್ನ ಪ್ರಶಸ್ತಿ ದೊರೆತಿದೆ. ಸದಸ್ಯರ ಅನುಕೂಲಕ್ಕೆ ಸಹಕಾರಿ ಕ್ಷೇತ್ರದ ಮೂಲಕ ಇನ್ನಷ್ಟು ಸೇವೆ ನೀಡಲು ಹೆಚ್ಚಿನ ಜವಾಬ್ದಾರಿ ಬಂದಂತಾಗಿದೆ ಎಂದರು.

ಸಹಕಾರಿ ಪ್ರಮುಖ ಜಿ.ಎಸ್‌ ಭಟ್ಟ ಮಾತನಾಡಿ, ಜಿ.ಟಿ ಹೆಗಡೆಯವರು ಜಿಲ್ಲೆಗೆ ಸಹಕಾರಿ ಕ್ಷೇತ್ರದಲ್ಲಿ ಪ್ರೇರಕ ಶಕ್ತಿಯಾಗಿದ್ದಾರೆ. ಸಹಕಾರಿ ಕ್ಷೇತ್ರದ ಮೂಲ ತತ್ವಗಳ ಅಳವಡಿಕೆಯ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಒಳಿತನ್ನುಂಟು ಮಾಡಿದ್ದಾರೆ ಎಂದರು.

ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಾಯ ಹೆಗಡೆ, ಪ್ರಮುಖರಾದ ಕೃಷ್ಣ ಹೆಗಡೆ, ಗಣಪತಿ ಹೆಗಡೆ, ಗಣಪತಿ ರಾಮಯ್ಯ ಹೆಗಡೆ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿ.ಎಸ್‌ ಹೆಗಡೆ ಹಲಸರಿಗೆ ಸ್ವಾಗತಿಸಿದರು. ಆರ್‌.ಎಂ.ಹೆಗಡೆ ಹಲಸರಿಗೆ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ