ಆ್ಯಪ್ನಗರ

ಎಲ್‌.ಟಿ.ಪಾಟೀಲ ಮನೆಗೆ ಗುಪ್ತಾ ಭೇಟಿ

ಮುಂಡಗೋಡ :ಆಸ್ಸಾಂ ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಗುಪ್ತಾ ಶನಿವಾರ ಬಿಜೆಪಿ ಮುಖಂಡ ಎಲ್‌.ಟಿ.ಪಾಟೀಲ ಮನೆಗೆ ಭೇಟಿ ನೀಡಿದರು.

Vijaya Karnataka 29 Apr 2018, 5:00 am
ಮುಂಡಗೋಡ :ಆಸ್ಸಾಂ ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಗುಪ್ತಾ ಶನಿವಾರ ಬಿಜೆಪಿ ಮುಖಂಡ ಎಲ್‌.ಟಿ.ಪಾಟೀಲ ಮನೆಗೆ ಭೇಟಿ ನೀಡಿದರು.
Vijaya Karnataka Web gupta visits lt patils house karnaaka election commission 2018
ಎಲ್‌.ಟಿ.ಪಾಟೀಲ ಮನೆಗೆ ಗುಪ್ತಾ ಭೇಟಿ


ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಲ್‌.ಟಿ.ಪಾಟೀಲರಿಗೆ ಟಿಕೆಟ್‌ ಸಿಗದ ಹಿನ್ನಲೆಯಲ್ಲಿ ಬೇಸರವುಂಟಾದ ಹಿನ್ನಲೆಯಲ್ಲಿ ಅವರು ಶನಿವಾರ ಎಲ್‌.ಟಿ.ಪಾಟೀಲರ ಮನೆಗೆ ಭೇಟಿ ನೀಡಿ ಚರ್ಚಿಸಿದರು. ಈ ವೇಳೆ ಎಲ್‌.ಟಿ.ಪಾಟೀಲ ಹಾಗೂ ಮುಖಂಡ ಪಿ.ಜಿ.ತಂಗಚ್ಚನ್‌ ಮತ್ತು ನಾಗರಾಜ ಬೆಣ್ಣಿ ಅವರು ತಮಗಾದ ಅನ್ಯಾಯದ ಕುರಿತು ಮಾಹಿತಿ ನೀಡಿದರು.

ಎಲ್ಲದಕಿಂತ ಪಕ್ಷ ದೊಡ್ಡದು ನಾವು ಅಭ್ಯರ್ಥಿ ಬದಲಾಗಿ ಪಕ್ಷ ನೋಡಿ ಪಕ್ಷ ದ ಗೆಲುವಿಗೆ ಶ್ರಮೀಸಬೇಕು. ಮೋದಿಯವರು ದೇಶದ ಅಭಿವೃದ್ಧಿ ಮಾಡುತ್ತಿದ್ದು ಅದನ್ನು ಯೋಚಿಸಿ ನಮ್ಮ ಕೆಲಸ ಮಾಡಬೇಕಿದೆ. ಪಕ್ಷ ದಲ್ಲಿ ತಮಗೆ ಮುಂದೆ ಉತ್ತಮ ಸ್ಥಾನ ಮಾನ ಸಿಗುತ್ತದೆ. ತಾವು ನೀಡಿರುವ ಎಲ್ಲ ಮಾಹಿತಿಯನ್ನು ನಾನು ಪಕ್ಷ ದ ವರಿಷ್ಠರಿಗೆ ಮುಟ್ಟಿಸುತ್ತೇನೆ ಎಂದರು. ಡಿ.ಎಫ್‌.ಮಡ್ಲಿ, ವೈ.ಪಿ.ಪಾಟೀಲ, ತುಕಾರಾಮ ಇಂಗಳೆ, ವಿನಾಯಕ ರಾಯ್ಕರ, ಉದಯ ಗೋಸಾವಿ, ಹನ್ಮಂತ ಕೊಮ್ಮರ್ಶಿಕೊಪ್ಪ, ಸುನೀಲ ಕಾಮತ್‌, ಪಿ.ಜಿ.ತಂಗಚ್ಚನ್‌, ನಾಗರಾಜ ಕುನ್ನೂರ, ಯಾಕೂಬ ಯಲಿವಾಳ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ