ಆ್ಯಪ್ನಗರ

ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ‍್ಯಕ್ರಮ

ಗೋಕರ್ಣ: ಇಲ್ಲಿಯ ಕೆನರಾ ಶಿಕ್ಷಣ ಪ್ರಸಾರಕ ಮಂಡಳಿಯ ಲೋಕಮಾತೆ ಹೆಸರಿನ ಶ್ರೀ ಭದ್ರಕಾಳಿ ಶಾಲೆಯಲ್ಲಿಇತ್ತೀಚೆಗೆ ಹಳೆ ವಿದ್ಯಾರ್ಥಿಗಳ ತಂಡದವರು ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ನಡೆಸಿದರು.

Vijaya Karnataka 19 Nov 2019, 5:00 am
ಗೋಕರ್ಣ: ಇಲ್ಲಿಯ ಕೆನರಾ ಶಿಕ್ಷಣ ಪ್ರಸಾರಕ ಮಂಡಳಿಯ ಲೋಕಮಾತೆ ಹೆಸರಿನ ಶ್ರೀ ಭದ್ರಕಾಳಿ ಶಾಲೆಯಲ್ಲಿಇತ್ತೀಚೆಗೆ ಹಳೆ ವಿದ್ಯಾರ್ಥಿಗಳ ತಂಡದವರು ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ನಡೆಸಿದರು.
Vijaya Karnataka Web gurudandana program by old students
ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ‍್ಯಕ್ರಮ


ಸುಮಾರು 90ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಾಥಮಿಕ, ಪ್ರೌಢ ಘಟ್ಟದಲ್ಲಿನ ತಪ್ಪುಗಳನ್ನು ತಿದ್ದಿ ಸರಿಯಾದ ಹಾದಿಯಲ್ಲಿಜೀವನ ನಡೆಸಲು ಮಾರ್ಗದರ್ಶನ ನೀಡಿದ ಶಿಕ್ಷಕರನ್ನು

ವಿದ್ಯಾರ್ಥಿಗಳು ನೆನೆಪಿಸಿಕೊಂಡರು. 10 ವರ್ಷಗಳ ಹಿಂದೆ ಅಕ್ಷರ ಜ್ಞಾನ ಕಲಿಸಿದ ಶಿಕ್ಷಕರನ್ನು ಕರೆತಂದು ಸನ್ಮಾನಿಸಿದರು. ಹಳೆಯ ವಿದ್ಯಾರ್ಥಿಗಳಾದ ದಿಲೀಪ ಹಾಗೂ ದಿನೇಶ ಹೀರೆಗಂಗೆ, ಗಣಪತಿ ಉಪ್ಪುಂದ ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮ ನಡೆಸುವ ತಯಾರಿಗೆ ಸಾಕ್ಷಿಯಾದರು.

ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿಆಡಳಿತ ಮಂಡಳಿ ಅಧ್ಯಕ್ಷ ಡಾ.ವಿ.ಆರ್‌ ಮಲ್ಲನ, ನಿವೃತ್ತ ಶಿಕ್ಷಕರಾದ ವಿಶ್ವನಾಥ ದೀಕ್ಷಿತ, ನಿರ್ಮಲಾ ನಾಯಕ, ವಿನಾಯಕ ಹೆಬ್ಬಾರ, ಉಪನ್ಯಾಸಕರಾದ ಸತ್ಯನಾರಾಯಣ, ಎನ್‌. ಲಮಾಣಿ, ಪ್ರೌಢಶಾಲೆ ಮುಖ್ಯಾಧ್ಯಾಪಕ ಸಿ.ಜಿ.ನಾಯಕ ದೊರೆ, ಸಹಾಯಕ ಶಿಕ್ಷಕರಾದ ಆರ್‌.ಜಿ.ನಾಯ್ಕ, ಜಯಾ ಬಡ್ತಿ ಹಾಗೂ ನಿವೃತ್ತ ಜವಾನ್‌ ಹರಿಶ್ಚಂದ್ರ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.

ತೇಜಸ್ವಿ ಅಡಿಯವರು ಸ್ವಾಗತಿಸಿದರು. ಭರತ ನಿರೂಪಿಸಿದರು. ದಿನೇಶ ಕಾಮತ ವಂದಿಸಿದರು. ಹಳೆಯ ವಿದ್ಯಾರ್ಥಿ ರಾಘವೇಂದ್ರ ಕವರಿ ಮಿಮಿಕ್ರಿ ಮಾಡಿ ಎಲ್ಲರ ಮನರಂಜಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ