ಆ್ಯಪ್ನಗರ

ನಾಗದೇವರಿಗೆ ಹಾಲಭಿಷೇಕ ಸಮರ್ಪಣೆ

ಯಲ್ಲಾಪುರ: ನಾಡಿಗೆ ದೊಡ್ಡ ಹಬ್ಬವೆಂದೇ ಕರೆಯಲಾಗುವ ನಾಗರ ಪಂಚಮಿ ಹಬ್ಬವನ್ನು ತಾಲೂಕಿನಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

Vijaya Karnataka 6 Aug 2019, 5:00 am
ಯಲ್ಲಾಪುರ: ನಾಡಿಗೆ ದೊಡ್ಡ ಹಬ್ಬವೆಂದೇ ಕರೆಯಲಾಗುವ ನಾಗರ ಪಂಚಮಿ ಹಬ್ಬವನ್ನು ತಾಲೂಕಿನಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
Vijaya Karnataka Web KWR-5 YLP 2


ಭಕ್ತಾದಿಗಳು ನಾಗರ ಕಟ್ಟೆಗಳಿಗೆ ತೆರಳಿ ನಾಗದೇವರಿಗೆ ಹಾಲಭಿಷೇಕ ಮಾಡಿ, ಹಣ್ಣು-ಕಾಯಿ ಸಮರ್ಪಿಸಿದರು. ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ಆವಾರದ ನಾಗರಕಟ್ಟೆ, ಗ್ರಾಮದೇವಿ ದೇವಾಲಯದ ಆವಾರದಲ್ಲಿರುವ ನಾಗರಕಟ್ಟೆ, ಬಸ್‌ ನಿಲ್ದಾಣ ಸಮೀಪದ ನಾಗರಕಟ್ಟೆ ಹಾಗೂ ಉದ್ಯಮನಗರದ ನಾಗಚೌಡೇಶ್ವರಿ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಭಕ್ತಾದಿಗಳು ನಾಗದೇವರಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ಮನೆಯ ಸಮೀಪದ ಅಡಕೆ ತೋಟ, ಗದ್ದೆಯ ಬದಿಗಳಲ್ಲಿನ ನಾಗರ ಸ್ಥಾನಕ್ಕೆ ತೆರಳಿ ನಾಗ ದೇವರಿಗೆ ಕ್ಷೀರಾಭಿಷೇಕ ಮಾಡಿ, ಅಕ್ಕಿ ಹಿಟ್ಟಿನಿಂದ ತಯಾರಿಸಿದ ವಿಶೇಷ ಖಾದ್ಯವಾದ ಚಪ್ಪೆ ರೊಟ್ಟಿಯನ್ನು ನೈವೇದ್ಯ ಮಾಡಿದರು. ಮಧ್ಯಾಹ್ನ ಕಾಯಿ ಕಡುಬು, ಪಾತೋಳಿ, ಕಡಲೆಬೇಳೆ ಪಾಯಸ ಮುಂತಾದ ಬಕ್ಷ ್ಯಗಳನ್ನೊಳಗೊಂಡ ಹಬ್ಬದ ಅಡುಗೆಯನ್ನು ತಯಾರಿಸಿ ಊಟ ಮಾಡಿದರು.

ನಾಗರ ಪಂಚಮಿಗೆ ಮಳೆ ಅಡ್ಡಿ; ತಾಲೂಕಿನ ಎಲ್ಲ ಭಾಗಗಳಲ್ಲಿ ಸೋಮವಾರ ಜೋರಾಗಿ ಮಳೆ ಸುರಿದ ಕಾರಣ ನಾಗರ ಪಂಚಮಿ ಹಬ್ಬದ ಆಚರಣೆಗೆ ಕೊಂಚ ಅಡ್ಡಿಯಾಯಿತು. ಮಳೆಯಲ್ಲಿ ನೆನೆಯುತ್ತಲೇ ನಾಗರಕಟ್ಟೆಯಲ್ಲಿ ನಾಗನಿಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ