ಆ್ಯಪ್ನಗರ

ಅರ್ಧಮರ್ಧ ಊಟ, ವಿದ್ಯಾರ್ಥಿಗಳ ದೂರು

ಮುಂಡಗೋಡ: ಬಿಸಿಯೂಟವನ್ನು ಹೊಟ್ಟೆ ತುಂಬ ನೀಡುತ್ತಿಲ್ಲಎಂದು ಆರೋಪಿಸಿ ಪಟ್ಟಣದ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 22 Jan 2020, 5:00 am
ಮುಂಡಗೋಡ: ಬಿಸಿಯೂಟವನ್ನು ಹೊಟ್ಟೆ ತುಂಬ ನೀಡುತ್ತಿಲ್ಲಎಂದು ಆರೋಪಿಸಿ ಪಟ್ಟಣದ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web half a meal students complain
ಅರ್ಧಮರ್ಧ ಊಟ, ವಿದ್ಯಾರ್ಥಿಗಳ ದೂರು


ಹಲವು ದಿನಗಳಿಂದ ತಮಗೆ ಹೊಟ್ಟೆ ತುಂಬ ಊಟ ನೀಡದೇ ವಂಚನೆ ಮಾಡಲಾಗುತ್ತಿದೆ. ಅರ್ಧಂಬರ್ಧ ಊಟ ನೀಡಿ ಖಾಲಿ ಆಯಿತು ಹೋಗಿ ಎನ್ನುತ್ತಾರೆ. ಮಧ್ಯಾಹ್ನ ಮೊದಲು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಊಟ ಹಾಕಿ ಬಳಿಕ ಕೊನೆಯಲ್ಲಿತಮಗೆ ಊಟ ಬಡಿಸುತ್ತಾರೆ. ಅದೂ ಅರ್ಧಂಬರ್ಧ. ಸ್ವಲ್ಪ ಅನ್ನ ಹಾಗೂ ಉಳಿದ ಸಾಂಬಾರಿಗೆ ಮೆಣಸಿನ ಪುಡಿ ಹಾಗೂ ಉಪ್ಪು ಮಿಶ್ರಣ ಮಾಡಿ ಬಡಿಸುತ್ತಾರೆ. ಮತ್ತೆ ಅನ್ನ ಹಾಕಿ ಎಂದು ಕೇಳಿದರೆ ಖಾಲಿ ಆಯಿತು ಎನ್ನುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು.

ಕೆಲವು ಬಾರಿ ಅನ್ನದಲ್ಲಿನುಸಿ, ಹುಳು ಇರುತ್ತವೆ. ಅದನ್ನೇ ಸೇವಿಸುವುದು ನಮಗೆ ಅನಿವಾರ್ಯವಾಗಿದೆ ಎಂದು 5, 6 ಹಾಗೂ 7ನೇ ತರಗತಿ ಮಕ್ಕಳು ದೂರಿದ್ದಾರೆ. ಶನಿವಾರ ಪಲಾವ್‌ ಹಾಗೂ ಉಪಹಾರವನ್ನು ಸಹ ಸರಿಯಾಗಿ ನೀಡುವುದಿಲ್ಲ. ಉಪ್ಪಿನಕಾಯಿ ದವಸ ಧಾನ್ಯಗಳನ್ನು ಅಡುಗೆಯವರು ಮನೆಗೆ ಸಾಗಿಸುತ್ತಾರೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಇಲ್ಲಿಗೆ ವ್ಯಾಸಂಗಕ್ಕೆ ಬರುತ್ತಾರೆ. ಆದರೆ ಹೊಟ್ಟೆತುಂಬ ಊಟ ನೀಡದ ಕಾರಣ ಉಪವಾಸ ಇರಬೇಕಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬೆದರಿಸಲಾಗುತ್ತದೆ ಎಂದು ಮಕ್ಕಳು ಭಯದಿಂದಲೇ ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ