ಆ್ಯಪ್ನಗರ

ಹನುಮಂತ ದೇವರ ರಥೋತ್ಸವ

ವಿಕ ಸುದ್ದಿಲೋಕ ಭಟ್ಕಳ ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವವು ಶನಿವಾರ ವಿಜ್ರಂಭಣೆಯಿಂದ ನೆರವೇರಿತು...

Vijaya Karnataka 14 Apr 2019, 5:00 am
ಭಟ್ಕಳ : ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವವು ಶನಿವಾರ ವಿಜ್ರಂಭಣೆಯಿಂದ ನೆರವೇರಿತು.
Vijaya Karnataka Web hanuman is the chariot of god
ಹನುಮಂತ ದೇವರ ರಥೋತ್ಸವ


ಶನಿವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ತಾಲೂಕಿನ ವಿವಿದೆಡೆಯಿಂದ ಬಂದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಸಂಜೆ ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ವಾದ್ಯಘೋಷಗಳೊಂದಿಗೆ 'ಚರ್ಕಿನ್‌' ಕುಟುಂಬದ ಸದಸ್ಯರ ಮನೆಗೆ ತೆರಳಿ ವೀಳ್ಯ ನೀಡಿ ರಥೋತ್ಸವಕ್ಕೆ ಆಮಂತ್ರಣ ನೀಡಲಾಯಿತು. ನಂತರ 5.30 ಸುಮಾರಿಗೆ ರಥ ಎಳೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಭಜನೆ, ತಟ್ಟಿರಾಯ, ಹುಲಿವೇಷ ಇತ್ಯಾದಿ ನೃತ್ಯಗಳು, ಜೊತೆಗೆ ಭಕ್ತರ ಭಜನೆ, ಹನುಮನ ಪರ ಘೋಷಣೆಗಳು ಜಾತ್ರೆಗೆ ಮೆರುಗನ್ನು ತಂದವು. ಕೇವಲ ಹಿಂದೂಗಳಲ್ಲದೇ ಮುಸ್ಲಿಂ ಧರ್ಮೀಯರೂ ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಮೇಲೆಯೂ ಜನರು ನಿಂತು ರಥೋತ್ಸವವನ್ನು ವೀಕ್ಷಿಸಿದರು. ಶಾಸಕ ಸುನಿಲ್‌ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ, ಮಾಜಿ ಶಾಸಕ ಜೆ.ಡಿ.ನಾಯ್ಕ ಸೇರಿದಂತೆ ಹಲವಾರು ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್‌, ಡಿವೈಎಸ್ಪಿ ವೆಲೆಂಟೈನ್‌ ಡಿಸೋಜಾ, ಸಿಪಿಐ ಕೆ.ಎಲ್‌.ಗಣೇಶ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ