ಆ್ಯಪ್ನಗರ

​ ಕಪ್ಪು ಚಿರತೆ ಹತ್ಯೆಘಿಪ್ರಕರಣ: ಒಬ್ಬನ ಬಂಧನ

ಅಂಕೋಲಾ :ಗುಂಡಬಾಳ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆಯ ಉಗುರು ಹಾಗೂ ಹಲ್ಲಿಗಾಗಿ ಮುಂಗಾಲು ಹಾಗೂ ರುಂಡವನ್ನು ಕದ್ದೊಯ್ದ ಪ್ರಕರಣವನ್ನು ಬೇಧಿಸಿರುವ

ವಿಕ ಸುದ್ದಿಲೋಕ 1 Dec 2016, 5:00 am
ಅಂಕೋಲಾ :ಗುಂಡಬಾಳ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆಯ ಉಗುರು ಹಾಗೂ ಹಲ್ಲಿಗಾಗಿ ಮುಂಗಾಲು ಹಾಗೂ ರುಂಡವನ್ನು ಕದ್ದೊಯ್ದ ಪ್ರಕರಣವನ್ನು ಬೇಧಿಸಿರುವ ಹಿರೇಗುತ್ತಿ ವಲಯ ಅರಣ್ಯಾಧಿಕಾರಿಗಳು ಒಬ್ಬನನ್ನು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Vijaya Karnataka Web hatyeghiprakarana black leopard one arrested
​ ಕಪ್ಪು ಚಿರತೆ ಹತ್ಯೆಘಿಪ್ರಕರಣ: ಒಬ್ಬನ ಬಂಧನ

ತಾಲೂಕಿನ ನೇವಳ್ಸೆ ಗ್ರಾಮದ ಅರುಣ (ಬುದ್ದು )ಮಂಕಾಳಿ ಗೌಡ (19)ಎಂಬಾತನನ್ನು ಬಂಧಿಸಿ ಚಿರತೆಯ ತಲೆ, ಅದನ್ನು ಕೊಲ್ಲಲು ಬಳಸಿದ ಕತ್ತಿಯನ್ನು ವಶಪಡಿಸಿ ಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಯಾಗಿದ್ದು, ಅವರ ಬಳಿ ಚಿರತೆಯ ಮುಂಗಾಲುಗಳು ಇದ್ದು, ಅವರ ಪತ್ತೆಗೆ ಇನ್ನೊಂದು ವಿಶೇಷ ತಂಡ ರಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮೋಹನ ಬಿದರಿ ತಿಳಿಸಿದ್ದಾರೆ.
ಅಂಕೋಲಾ ತಾಲೂಕಿನ ಗುಂಡಬಾಳದ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆಯ ಕಳೆಬರ ಶುಕ್ರವಾರ ಪತ್ತೆಯಾಗಿತ್ತು. ಇದನ್ನು ಅರಣ್ಯಾಧಿಕಾರಿಗಳು ಗಮನಿಸಿದಾಗ ಹಲ್ಲು ಹಾಗೂ ಉಗುರಿಗಾಗಿ ಚಿರತೆಯನ್ನು ಕೊಂದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು.
ಎಸ್.ವಿ. ನಾಯ್ಕ ತನಿಖೆ ನಡೆಸಿದ್ದಾರೆ. ಉಪ ವಲಯ ಅರಣ್ಯಾಧಿಕಾರಿಗಳಾದ ವೈಘಿ.ಎಲ್. ಹಮಾಣಿ, ಜಗದೀಶ ಎಂ. ದೇವಾಡಿಗ, ಪ್ರಶಾಂತ ಬಿ. ಪಟಗಾರ, ಪ್ರದೀಪ ಎಂ. ನಾಯ್ಕ, ಆರ್.ಎಚ್. ನಾಯ್ಕ ಕಾರ್ಯಾಚರಣೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ