ಆ್ಯಪ್ನಗರ

ಸಂತೋಷದ ಜೀವನ ನಡೆಸಿ

ದಾಂಡೇಲಿ : ಭೂಮಿ, ಮಳೆ, ನೀರು ಮತ್ತು ಆಹಾರವನ್ನು ಆ ಭಗವಂತ ನಮಗೆ ನೀಡಿದ್ದಾನೆ. ಪ್ರಕೃತಿಯಿಂದ ಪ್ರತಿಯೊಂದು ಸೌಲಭ್ಯವನ್ನು ಪಡೆದ ನಾವು ಭಾಗ್ಯವಂತರು ಎಂದು ಅರಿತು ಪ್ರತಿಕ್ಷ ಣದಲ್ಲ್ಲೂ ಸಂತೋಷದ ಜೀವನ ನಡೆಸುವದನ್ನು ಕಲಿಯಬೇಕು ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Vijaya Karnataka 12 Mar 2019, 5:00 am
ದಾಂಡೇಲಿ : ಭೂಮಿ, ಮಳೆ, ನೀರು ಮತ್ತು ಆಹಾರವನ್ನು ಆ ಭಗವಂತ ನಮಗೆ ನೀಡಿದ್ದಾನೆ. ಪ್ರಕೃತಿಯಿಂದ ಪ್ರತಿಯೊಂದು ಸೌಲಭ್ಯವನ್ನು ಪಡೆದ ನಾವು ಭಾಗ್ಯವಂತರು ಎಂದು ಅರಿತು ಪ್ರತಿಕ್ಷ ಣದಲ್ಲ್ಲೂ ಸಂತೋಷದ ಜೀವನ ನಡೆಸುವದನ್ನು ಕಲಿಯಬೇಕು ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Vijaya Karnataka Web KWR-10-DND3
ದಾಂಡೇಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಮಹೇಶಾನಂದ ಸ್ವಾಮೀಜಿ ಉಪಸ್ಥಿತರಿದ್ದರು.


ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಗಂಣದಲ್ಲಿ ಏರ್ಪಡಿಸಲಾದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸತ್ಸಂಗದ ಮೂಲಗುರಿ ಮೂರು ಮಾತು ಅರಿತು ಕೊಳ್ಳುವದಾಗಿದೆ. ಅವು ಯಾವುವೆಂದರೆ ಪ್ರಕೃತಿಯಿಂದ ಮನುಕುಲಕ್ಕೆ ದೊರೆತಿರುವ ಅನ್ನ, ನೀರು, ಸತ್ಸಂಗ ಇವುಗಳನ್ನು ಪಡೆದು ಸಂತೃಪ್ತರಾಗಿ, ಬಲ್ಲವರ ಮಾತು ಕೇಳಿ ಈ ಲೋಕದಲ್ಲಿ ಬಾಳುವದಾಗಿದೆ. ಇದನ್ನು ಅರಿತು ಬಾಳಿದರೆ ಈ ಭೂಲೋಕವೇ ಸ್ವರ್ಗವೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಂಚನಾಳ, ಈಚಲಕರಂಜಿಯ ಭಕ್ತಿಯೋಗಾಶ್ರಮದ ಶ್ರೀ ಮಹೇಶಾನಂದ ಸ್ವಾಮೀಜಿ ಮಾತನಾಡಿ ಇಂದು ಪ್ರತಿಯೊಂದು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರದ ಅವಶ್ಯಕತೆ ಇದೆ. ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಂಡು, ತಂದೆ ತಾಯಿಗೆ ಗೌರವ ನೀಡಿ ಬದುಕಲು ಸತ್ಸಂಗದ ಮೂಲಕ ಶರಣರ ಮಾತು ಆಲಿಸಬೇಕು ಎಂದರು.

ಉಳವಿಯ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದ ಶಂಕರಯ್ಯ ಕಲ್ಮಠ ಶಾಸ್ತ್ರೀಗಳನ್ನು, ಮೃಂತುಜಯ ಮಠದ ಶಿವಪುತ್ರಯ್ಯಾ ಹಿರೇಮಠ, ನಗರದ ವೀರಭದ್ರೇಶ್ವರ ದೇವಸ್ಥಾನದ ಉದಯ ಬಸಯ್ಯಾ ಹಿರೇಮಠ ಸ್ವಾಮಿಗಳನ್ನು ಮತ್ತು ಮಾಜಿ ಶಾಸಕ ಸುನಿಲ ಹೆಗಡೆ ಇವರನ್ನು ಸನ್ಮಾನಿಸಲಾಯಿತು.

ಮಾನಸಾ ವಾಸರೆ ಪ್ರಾರ್ಥಿಸಿದರು. ಯು.ಎಸ್‌ ಪಾಟೀಲ್‌ ಸ್ವಾಗತಿಸಿದರು. ಹನುಮಂತ ಕುಂಬಾರ ನಿರೂಪಿಸಿದರು. ಗುರು ಮಠಪತಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ