ಆ್ಯಪ್ನಗರ

ಋುಣಾತ್ಮಕ ಚಿಂತನೆಯಿಂದ ಹೃದಯ ಕಾಯಿಲೆ

ಕಾರವಾರ : ಒತ್ತಡ, ಋುಣಾತ್ಮಕ ಚಿಂತನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಇವುಗಳಿಂದ ಮನುಷ್ಯ ದೂರವಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗಬೇಕಿದ್ದು, ಸಮುದಾಯದ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಕೆ. ಅಭಿಪ್ರಾಯಪಟ್ಟರು.

Vijaya Karnataka 28 Jul 2019, 5:00 am
ಕಾರವಾರ : ಒತ್ತಡ, ಋುಣಾತ್ಮಕ ಚಿಂತನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಇವುಗಳಿಂದ ಮನುಷ್ಯ ದೂರವಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗಬೇಕಿದ್ದು, ಸಮುದಾಯದ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಕೆ. ಅಭಿಪ್ರಾಯಪಟ್ಟರು.
Vijaya Karnataka Web heart disease from negative thinking
ಋುಣಾತ್ಮಕ ಚಿಂತನೆಯಿಂದ ಹೃದಯ ಕಾಯಿಲೆ


ಪುಣೆಯ ಗ್ಲೋಬಲ್‌ ಹಾರ್ಟ್‌ ಫೌಂಡೇಶನ್‌ ನಗರದ ಅಜ್ವಿ ಓಶನ್‌ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ ಜಿ.ಎನ್‌., ಆಯುರ್ವೇದ ಪದ್ಧತಿಯ ಮೂಲಕ ಹೃದಯ ರೋಗಕ್ಕೆ ಚಿಕಿತ್ಸೆ ನೀಡುವ ಪದ್ಧತಿ ಹೊಸದು. ಇಂತಹವುಗಳನ್ನು ಪರಿಚಯಿಸುವ ಮೂಲಕ ಆರೋಗ್ಯ ಕ್ಷೇತ್ರದ ವಿಸ್ತಾರವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಲಲಿತಾ ಶೆಟ್ಟಿ, ಆಯುರ್ವೇದಿಕ್‌ ಔಷಧಗಳಿಂದ ಅನೇಕ ರೀತಿಯ ರೋಗ ಗುಣಪಡಿಸಲು ಸಾಧ್ಯವಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ, ಔಷಧ ಪದ್ಧತಿಯಿಂದ ಗುಣಪಡಿಸುವುದು ಉತ್ತಮ ಬೆಳವಣಿಗೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ನಗರಸಭೆ ಸದಸ್ಯರಾದ ಡಾ.ನಿತಿನ್‌ ಪಿಕಳೆ, ಪುಣೆಯ ಸಂಸ್ಥೆ ಹೃದ್ರೋಗಕ್ಕೆ ಒದಗಿಸುವ ಚಿಕಿತ್ಸೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದರು. ಪುಣೆಯ ಹೃದ್ರೋಗ ತಜ್ಞ ಡಾ.ಪ್ರಸಾದ್‌ ಅರುಂದೇಕರ್‌ ಚಿಕಿತ್ಸಾ ವಿಧಾನದ ಕುರಿತು ಮಾಹಿತಿ ಒದಗಿಸಿದರು. ವೇದಿಕೆಯಲ್ಲಿ ಸೆಂಟ್‌ ಮಿಲಾಗ್ರಿಸ್‌ ಸಹಕಾರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಫರ್ನಾಂಡಿಸ್‌, ಉದ್ಯಮಿಗಳಾದ ರಾಜೇಶ ಕಾಮತ್‌, ಕೃಷ್ಣ ಕೇಳಸ್ಕರ್‌, ಆಯುಷ್‌ ವೈದ್ಯ ಡಾ.ಮಲ್ಲಿಕಾರ್ಜುನ್‌ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ಗ್ಲೋಬಲ್‌ ಹಾರ್ಟ್‌ ಫೌಂಡೇಶನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಸುಜಲ್‌ ನಾರಾಯಣ್‌ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಎಂ.ಆರ್‌.ನಾಯ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. ನಗರಸಭೆ ಸದಸ್ಯ ನಂದಾ ನಾಯ್ಕ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜನಶಕ್ತಿ ವೇದಿಕೆಯ ಮಾಧವ ನಾಯಕ, ಜಗದೀಶ ನಾಯ್ಕ ಮತ್ತಿತರರು ಕಾರ್ಯಕ್ರಮ ಸಂಘಟಿಸಿದ್ದರು.

ಇಂದು ಹೃದ್ರೋಗ ತಪಾಸಣೆ, ಚಿಕಿತ್ಸೆ : ಪುಣೆಯ ಗ್ಲೋಬಲ್‌ ಹಾರ್ಟ್‌ ಫೌಂಡೇಶನ್‌ ಇದೇ ಮೊದಲ ಬಾರಿಗೆ ಕಾರವಾರದಲ್ಲಿ ಜು.28ರಂದು ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಸುತ್ತಿದೆ. ರಿಯಾಯಿತಿ ದರದಲ್ಲಿ ನಡೆಯುವ ಚಿಕಿತ್ಸಾ ಶಿಬಿರದಲ್ಲಿ ಈಗಾಗಲೆ ಅನೇಕರು ಹೆಸರು ನೊಂದಾಯಿಸಿಕೊಂಡಿದ್ದಾರೆ. 3ಡಿ ವ್ಯಾಸ್ಕ್ಯುಲಾಗ್ರಫಿ ಮೂಲಕ ಸ್ಕ್ಯಾ‌ನಿಂಗ್‌ ಮತ್ತು ಆಯುರ್ವೇದಿಕ್‌ ಪದ್ಧತಿಯ ಔಷಧೋಪಚಾರವನ್ನು ನೀಡಲಾಗುತ್ತಿದೆ. ಮುಂಜಾನೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ರವಿವಾರ ಶಿಬಿರ ನಡೆಯಲಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ